ETV Bharat / state

ಚಾಮುಂಡಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ರೆಡಿಯಾಗಿವೆ ಸಾವಿರಾರು ಲಡ್ಡು - undefined

ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ದೇವಿಯ ದರ್ಶನಕ್ಕೆ ಬರುವ ಭಕ್ತಾಧಿಗಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಸಾದ ರೂಪದಲ್ಲಿ ಲಾಡು ವಿತರಿಸಲಾಗುತ್ತಿದೆ. ಈ ಬಾರಿ ಬರೋಬ್ಬರಿ 35 ಸಾವಿರ ಲಡ್ಡು ತಯಾರಾಗಿವೆ.

ಲಾಡಿನಿಂದ ಅಲಂಕಾರ
author img

By

Published : Jul 4, 2019, 7:18 PM IST

ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ಪ್ರಸಾದವಾಗಿ ಲಡ್ಡು ತಯಾರಿಕೆ ಭರದಿಂದ ಸಾಗಿದೆ. ಇಲ್ಲಿನ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹಾಗೂ ಸ್ನೇಹಿತರಿಂದ ಲಾಡುಗಳು ತಯಾರಾಗುತ್ತಿವೆ.

ಮೊದಲನೇ ಆಷಾಢ ಶುಕ್ರವಾರದಂದು ಸಿಹಿ ವಿತರಿಸಲು ಸೇವಾ ಸಮಿತಿಯವರು ಸೋಮವಾರ ಬೆಳಗ್ಗೆಯಿಂದಲೇ ಲಾಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆಂದು ಲಾಡನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಪ್ರತಿ ವರ್ಷ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಮಿತಿಯಿಂದ ಲಾಡು ವಿತರಿಸುವ ಸಂಪ್ರದಾಯ ಕಳೆದ 16 ವರ್ಷಗಳಿಂದ ನಡೆಯುತ್ತಿದೆ. ಅದರಂತೆ ಈ ಬಾರಿಯೂ ಲಾಡು ಪ್ರಸಾದ ತಯಾರಿಸಲಾಗುತ್ತಿದೆ.

ಕಳೆದ 28 ವರ್ಷಗಳಿಂದ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 16 ವರ್ಷಗಳಿಂದ ಪ್ರಸಾದ ವಿತರಿಸುತ್ತಾ ಬರಲಾಗಿದೆ. ಈ ಬಾರಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡುಗಳು ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿವೆ.

ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ಪ್ರಸಾದವಾಗಿ ಲಡ್ಡು ತಯಾರಿಕೆ ಭರದಿಂದ ಸಾಗಿದೆ. ಇಲ್ಲಿನ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹಾಗೂ ಸ್ನೇಹಿತರಿಂದ ಲಾಡುಗಳು ತಯಾರಾಗುತ್ತಿವೆ.

ಮೊದಲನೇ ಆಷಾಢ ಶುಕ್ರವಾರದಂದು ಸಿಹಿ ವಿತರಿಸಲು ಸೇವಾ ಸಮಿತಿಯವರು ಸೋಮವಾರ ಬೆಳಗ್ಗೆಯಿಂದಲೇ ಲಾಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆಂದು ಲಾಡನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಪ್ರತಿ ವರ್ಷ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಮಿತಿಯಿಂದ ಲಾಡು ವಿತರಿಸುವ ಸಂಪ್ರದಾಯ ಕಳೆದ 16 ವರ್ಷಗಳಿಂದ ನಡೆಯುತ್ತಿದೆ. ಅದರಂತೆ ಈ ಬಾರಿಯೂ ಲಾಡು ಪ್ರಸಾದ ತಯಾರಿಸಲಾಗುತ್ತಿದೆ.

ಕಳೆದ 28 ವರ್ಷಗಳಿಂದ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 16 ವರ್ಷಗಳಿಂದ ಪ್ರಸಾದ ವಿತರಿಸುತ್ತಾ ಬರಲಾಗಿದೆ. ಈ ಬಾರಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡುಗಳು ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿವೆ.

Intro:Body:ಚಾಮುಂಡಿ ದೇವಿ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ರೆಡಿಯಾಗಿದೆ 35 ಲಡ್ಡು
ಮೈಸೂರು:ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅದಿದೇವತೆಗೆ ಪ್ರಸಾದ ಲಾಡು ತಯಾರಿಕೆ ಭರದಿಂದ ಸಾಗಿದೆ.

ಮೈಸೂರಿನ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ನೂರಡಿ ರಸ್ತೆ ಹಾಗೂ ಸ್ನೇಹಿತರಿಂದ ಭರ್ಜರಿ ಲಾಡು ತಯಾರಾಗುತ್ತಿದೆ.ಮೊದಲನೇ ಆಷಾಢ ಶುಕ್ರವಾರದಂದು ಸಿಹಿ ವಿತರಿಸುವ ಸೇವಾ ಸಮಿತಿಯೂ ಸೋಮವಾರ ಬೆಳಗ್ಗೆಯಿಂದ ಲಾಡು ತಯಾರಿಸಲಾಗುತ್ತಿದೆ.

ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.ಪ್ರತಿ ವರ್ಷ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಮಿತಿ ವತಿಯಿಂದ ಲಾಡು ವಿತರಿಸಿವ ಸಂಪ್ರದಾಯ ಕಳೆದ 16 ವರ್ಷಗಳಿಂದ ನಡೆಯುತ್ತಿದೆ.ಅದರಂತೆ ಈ ಬಾರಿಯೂ ಸಮಿತಿ ವತಿಯಿಂದ ಪ್ರಸಾದ ತಯಾರಿಸಲಾಗುತ್ತಿದೆ.
ಕಳೆದ 28 ವರ್ಷದಿಂದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ,
13 ವರ್ಷದಿಂದ ಅನ್ನದಾನ. 16 ವರ್ಷದಿಂದ ಪ್ರಸಾದ ವಿತರಿಸುತ್ತಾ ಬಂದಿದೆ.30 ಮಂದಿ ಬಾಣಸಿಗರಿಂದ 35 ಸಾವಿರ ಲಾಡು ತಯಾರಾಗಿದ್ದು
ಸುಮಾರು 2 ಲಕ್ಷ ವೆಚ್ಚದಲ್ಲಿ ತಯಾರಾಗಿದೆ.ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಭಕ್ತರಿಗೆ ಲಾಡು ವಿತರಣೆ ಮಾಡಲಾಗುತ್ತದೆ ಎಂದು ಸೇವಾ ಸಮಿತಿ ತಿಳಿಸಿದೆ.

ಲಾಡು ತಯಾರಿಕೆಗೆ ಬಳಸಲಾದ ಪದಾರ್ಥಗಳು ಇಂತಿವೆ.

450 kg ಕಡಲೆ ಇಟ್ಟು,60 kg ಗೋಡಂಬಿ,10 kg ಬಾದಾಮಿ,10 kg ಪಿಸ್ತಾ,3 ಟನ್ ನಂದಿನಿ ತುಪ್ಪ ,25 ಟನ್ ಅಡುಗೆಎಣ್ಣೆ,50 kg ಬೂದ್ ಸಕ್ಕರೆ,750 kg ಸಕ್ಕರೆ,25 kg ಕರ್ಜೂರ,4 kg ಲವಂಗ,3 kg ಏಲಕ್ಕಿ,25 kg ದ್ರಾಕ್ಷಿ ಹಾಕಲಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.