ETV Bharat / state

ಚಿಲ್ಲರೆ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

2000 ರೂ. ಚಿಲ್ಲರೆ ಕೇಳಿದ ವ್ಯಕ್ತಿಯ ಮೇಲೆ ಅಂಗಡಿ ಮಾಲೀಕ ಹೀನಾಯವಾಗಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

author img

By

Published : May 17, 2019, 5:57 PM IST

ಚಿಲ್ಲರೆ ಕೇಳಿದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: 2000 ರೂಪಾಯಿಗೆ ಚಿಲ್ಲರೆ ಕೇಳಿದ ವ್ಯಕ್ತಿಗೆ ಅಂಗಡಿ ಮಾಲೀಕ ಹಿಗ್ಗಾಮುಗ್ಗ ಥಳಿಸಿದ ಘಟನೆ ಬಿಳಿಕೆರೆಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್.ಡಿ. ಕೋಟೆಯ ಹಳ್ಳದಮನುಗನಹಳ್ಳಿ‌ ನಿವಾಸಿ ಉಮೇಶ್ ಎಂಬಾತ ಕಾರ್ಯನಿಮಿತ್ತ ಬಿಳಿಕೆರೆ ಗ್ರಾಮಕ್ಕೆ ಬಂದಿದ್ದ. 2000 ರೂಪಾಯಿಗೆ ಚಿಲ್ಲರೆ ತೆಗೆದುಕೊಳ್ಳಲು ಬಾರ್ ಒಂದಕ್ಕೆ ಹೋಗಿ ಕೇಳಿದ್ದಾನೆ. ಅಲ್ಲಿ ಚಿಲ್ಲರೆ ಸಿಗದಿದ್ದಕ್ಕೆ ಪಕ್ಕದಲ್ಲೇ ಇದ್ದ ಚಿಲ್ಲರೆ ಅಂಗಡಿಗೆ ಬಂದು ಚಿಲ್ಲರೆ ಕೇಳಿದ್ದಾನೆ. ಟೆನ್ಷನ್​ನಲ್ಲಿದ್ದ ಅಂಗಡಿ ಮಾಲೀಕ ಸಚಿನ್, ಉಮೇಶನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಚಿಲ್ಲರೆ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಹಲ್ಲೆ ನಡೆಯುತ್ತಿದ್ದರು ಸಾರ್ವಜನಿಕರು ಈತನ ನೆರವಿಗೆ ಬಂದಿಲ್ಲ. ಬದಲಾಗಿ ಹಲ್ಲೆಗೊಳಗಾದ ವ್ಯಕ್ತಿಯ ಮೊಬೈಲ್​ಅನ್ನು ಯುವಕನೊಬ್ಬ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಮೇಶ್​ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದೆ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ದಾನಿಗಳ ಸಹಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ.

ಮೈಸೂರು: 2000 ರೂಪಾಯಿಗೆ ಚಿಲ್ಲರೆ ಕೇಳಿದ ವ್ಯಕ್ತಿಗೆ ಅಂಗಡಿ ಮಾಲೀಕ ಹಿಗ್ಗಾಮುಗ್ಗ ಥಳಿಸಿದ ಘಟನೆ ಬಿಳಿಕೆರೆಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್.ಡಿ. ಕೋಟೆಯ ಹಳ್ಳದಮನುಗನಹಳ್ಳಿ‌ ನಿವಾಸಿ ಉಮೇಶ್ ಎಂಬಾತ ಕಾರ್ಯನಿಮಿತ್ತ ಬಿಳಿಕೆರೆ ಗ್ರಾಮಕ್ಕೆ ಬಂದಿದ್ದ. 2000 ರೂಪಾಯಿಗೆ ಚಿಲ್ಲರೆ ತೆಗೆದುಕೊಳ್ಳಲು ಬಾರ್ ಒಂದಕ್ಕೆ ಹೋಗಿ ಕೇಳಿದ್ದಾನೆ. ಅಲ್ಲಿ ಚಿಲ್ಲರೆ ಸಿಗದಿದ್ದಕ್ಕೆ ಪಕ್ಕದಲ್ಲೇ ಇದ್ದ ಚಿಲ್ಲರೆ ಅಂಗಡಿಗೆ ಬಂದು ಚಿಲ್ಲರೆ ಕೇಳಿದ್ದಾನೆ. ಟೆನ್ಷನ್​ನಲ್ಲಿದ್ದ ಅಂಗಡಿ ಮಾಲೀಕ ಸಚಿನ್, ಉಮೇಶನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಚಿಲ್ಲರೆ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಹಲ್ಲೆ ನಡೆಯುತ್ತಿದ್ದರು ಸಾರ್ವಜನಿಕರು ಈತನ ನೆರವಿಗೆ ಬಂದಿಲ್ಲ. ಬದಲಾಗಿ ಹಲ್ಲೆಗೊಳಗಾದ ವ್ಯಕ್ತಿಯ ಮೊಬೈಲ್​ಅನ್ನು ಯುವಕನೊಬ್ಬ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಮೇಶ್​ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದೆ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ದಾನಿಗಳ ಸಹಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ.

Intro:Body:

1 mys kole-.txt   



close


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.