ETV Bharat / state

ಮಂಡ್ಯ : ವಿದ್ಯುತ್ ಶಾಕ್​ ತಗುಲಿ ಇಬ್ಬರು ಛಾಯಾಗ್ರಾಹಕರು ಸಾವು

author img

By

Published : Oct 22, 2022, 5:51 PM IST

ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಸ್ವಚ್ಛಗೊಳಿಸುವ ಸಂದರ್ಭ ವಿದ್ಯುತ್ ಶಾಕ್​ನಿಂದಾಗಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಘಟನೆ ನಡೆದಿದೆ.

two-photographers-died-due-to-electric-shock
ಮಂಡ್ಯ : ವಿದ್ಯುತ್ ಶಾಕ್​ ತಗುಲಿ ಇಬ್ಬರು ಛಾಯಾಗ್ರಾಹಕರು ಸಾವು

ಮಂಡ್ಯ : ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಸ್ವಚ್ಛಗೊಳಿಸುವ ಸಂದರ್ಭ ವಿದ್ಯುತ್ ಶಾಕ್​ನಿಂದಾಗಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮೀ ಸ್ಟುಡಿಯೋ ಮಾಲೀಕ ಎಂ.ವಿವೇಕ್ ಮತ್ತು ಛಾಯಾಗ್ರಾಹಕ ಎಸ್.ಮಧುಸೂಧನ್ ಎಂದು ಗುರುತಿಸಲಾಗಿದೆ.

ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಶುಚಿಗೊಳಿಸುವ ಸಂದರ್ಭ ಬಿಲ್ಡಿಂಗ್ ಮೇಲಿನ ಬೋರ್ಡ್ ತೆರವುಗೊಳಿಸುವ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ತಂತಿ ಮಧುಸೂಧನ್ ಅವರಿಗೆ ತಗುಲಿದೆ. ಈ ಸಂದರ್ಭ ಮಧುಸೂದನ್​ ಅವರನ್ನು ರಕ್ಷಿಸಲು ಹೋದ ವಿವೇಕ್ ಕೂಡ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಇಬ್ಬರ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹುಬ್ಬಳ್ಳಿ: ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಿವೃತ್ತ ಸೈನಿಕನಿಗೆ 11.90 ಲಕ್ಷ ರೂ. ವಂಚನೆ

ಮಂಡ್ಯ : ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಸ್ವಚ್ಛಗೊಳಿಸುವ ಸಂದರ್ಭ ವಿದ್ಯುತ್ ಶಾಕ್​ನಿಂದಾಗಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮೀ ಸ್ಟುಡಿಯೋ ಮಾಲೀಕ ಎಂ.ವಿವೇಕ್ ಮತ್ತು ಛಾಯಾಗ್ರಾಹಕ ಎಸ್.ಮಧುಸೂಧನ್ ಎಂದು ಗುರುತಿಸಲಾಗಿದೆ.

ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಶುಚಿಗೊಳಿಸುವ ಸಂದರ್ಭ ಬಿಲ್ಡಿಂಗ್ ಮೇಲಿನ ಬೋರ್ಡ್ ತೆರವುಗೊಳಿಸುವ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ತಂತಿ ಮಧುಸೂಧನ್ ಅವರಿಗೆ ತಗುಲಿದೆ. ಈ ಸಂದರ್ಭ ಮಧುಸೂದನ್​ ಅವರನ್ನು ರಕ್ಷಿಸಲು ಹೋದ ವಿವೇಕ್ ಕೂಡ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಇಬ್ಬರ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹುಬ್ಬಳ್ಳಿ: ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಿವೃತ್ತ ಸೈನಿಕನಿಗೆ 11.90 ಲಕ್ಷ ರೂ. ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.