ETV Bharat / state

ಮದ್ದೂರು : ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ಗೆ ಕನ್ನ-20 ಲಕ್ಷ ರೂ. ದೋಚಿದ ಖದೀಮರು!

author img

By

Published : Apr 12, 2022, 11:57 AM IST

ಮದ್ದೂರಿನ ಕೆಎಸ್​ಆರ್​ಟಿಸಿ ಬಸ್ ಡಿಪೋ ಬಳಿ ಇರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ನಲ್ಲಿ ಕಳ್ಳತನ ನಡೆದಿದೆ..

Maddur SBI ATM theft news
ಮದ್ದೂರು ಎಸ್​ಬಿಐ ಎಟಿಎಮ್​

ಮದ್ದೂರು(ಮಂಡ್ಯ) : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ಗೆ ಕನ್ನ ಹಾಕಿರುವ ಖದೀಮರು ಗ್ಯಾಸ್ ಕಟ್ಟರ್​ನಿಂದ ಎಟಿಎಂ ಯಂತ್ರ ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಮದ್ದೂರಿನ ಕೆಎಸ್​ಆರ್​ಟಿಸಿ ಬಸ್ ಡಿಪೋ ಬಳಿ ಇರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ ಇದಾಗಿದ್ದು, ಬರೋಬ್ಬರಿ 20 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.

ಎಸ್​ಬಿಐ ಎಟಿಎಮ್​ನಿಂದ ಕಳ್ಳತನ

ಇದನ್ನೂ ಓದಿ: ಹೊರಗೆ ಮಲಗಿದ್ದವರೇ ಟಾರ್ಗೆಟ್: ದಾವಣಗೆರೆಯಲ್ಲಿ ಹಲ್ಲೆ, ಹತ್ಯೆ ಮಾಡುತ್ತಿದ್ದ ಇಬ್ಬರು ಸೈಕೋಪಾತ್​ಗಳು ಅಂದರ್

ಸೋಮವಾರ ತಡರಾತ್ರಿ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇಲ್ಲದನ್ನು ಗಮನಿಸಿದ ಆರೋಪಿಗಳು ಹೊಂಚು ಹಾಕಿ ಈ ಕೃತ್ಯ ನಡೆಸಿದ್ದಾರೆ. ಇಂದು ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮದ್ದೂರು(ಮಂಡ್ಯ) : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ಗೆ ಕನ್ನ ಹಾಕಿರುವ ಖದೀಮರು ಗ್ಯಾಸ್ ಕಟ್ಟರ್​ನಿಂದ ಎಟಿಎಂ ಯಂತ್ರ ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಮದ್ದೂರಿನ ಕೆಎಸ್​ಆರ್​ಟಿಸಿ ಬಸ್ ಡಿಪೋ ಬಳಿ ಇರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ ಇದಾಗಿದ್ದು, ಬರೋಬ್ಬರಿ 20 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.

ಎಸ್​ಬಿಐ ಎಟಿಎಮ್​ನಿಂದ ಕಳ್ಳತನ

ಇದನ್ನೂ ಓದಿ: ಹೊರಗೆ ಮಲಗಿದ್ದವರೇ ಟಾರ್ಗೆಟ್: ದಾವಣಗೆರೆಯಲ್ಲಿ ಹಲ್ಲೆ, ಹತ್ಯೆ ಮಾಡುತ್ತಿದ್ದ ಇಬ್ಬರು ಸೈಕೋಪಾತ್​ಗಳು ಅಂದರ್

ಸೋಮವಾರ ತಡರಾತ್ರಿ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇಲ್ಲದನ್ನು ಗಮನಿಸಿದ ಆರೋಪಿಗಳು ಹೊಂಚು ಹಾಕಿ ಈ ಕೃತ್ಯ ನಡೆಸಿದ್ದಾರೆ. ಇಂದು ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.