ETV Bharat / state

ಸುಮಲತಾ ಪ್ರಚಾರ ಅಂತ್ಯ... ರೋಡ್​ ಶೋನಲ್ಲಿ ಮತ್ತೆ ರಾರಾಜಿಸಿದ ಕಾಂಗ್ರೆಸ್​, ಬಿಜೆಪಿ ಬಾವುಟ

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ರ‍್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.‌

author img

By

Published : Apr 16, 2019, 6:03 PM IST

ಸುಮಲತಾ

ಮಂಡ್ಯ: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ಸ್ವಾಭಿಮಾನಿ ಸಮ್ಮಿಲನಕ್ಕೆ ಜನಸಾಗರ ಹರಿದು ಬಂದಿತ್ತು. ರ‍್ಯಾಲಿಗೂ ಮುನ್ನ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದರು.

ಸುಮಲತಾ‌ ಸಮಾವೇಶದ ರ‍್ಯಾಲಿಗೆ ವಿವಿಧ ಪಕ್ಷಗಳ ಧ್ವಜಗಳು ಮೆರಗು ನೀಡಿದವು. ರ‍್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.‌

ಪ್ರಚಾರಕ್ಕೆ ತೆರೆ ಎಳೆದ ಸುಮಲತಾ

ರೆಬಲ್ ನಾಯಕರಾದ ರಮೇಶ್ ಬಾಬು, ಚಲುವರಾಯಸ್ವಾಮಿ , ಗಣಿಗ ರವಿಕುಮಾರ್ ಭಾವಚಿತ್ರ ಹೊತ್ತು ಅಭಿಮಾನಿಗಳು ಮೆರವಣಿಗೆ ಮಾಡಿದರು. ಸುಮಾರು 1 ಕಿ.ಮೀ ಉದ್ದದ ಜನ ಸಾಗರದ ನಡುವೆ ರೋಡ್ ಶೋ ನಡೆಯಿತು. ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಮಂಡ್ಯ: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ಸ್ವಾಭಿಮಾನಿ ಸಮ್ಮಿಲನಕ್ಕೆ ಜನಸಾಗರ ಹರಿದು ಬಂದಿತ್ತು. ರ‍್ಯಾಲಿಗೂ ಮುನ್ನ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದರು.

ಸುಮಲತಾ‌ ಸಮಾವೇಶದ ರ‍್ಯಾಲಿಗೆ ವಿವಿಧ ಪಕ್ಷಗಳ ಧ್ವಜಗಳು ಮೆರಗು ನೀಡಿದವು. ರ‍್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.‌

ಪ್ರಚಾರಕ್ಕೆ ತೆರೆ ಎಳೆದ ಸುಮಲತಾ

ರೆಬಲ್ ನಾಯಕರಾದ ರಮೇಶ್ ಬಾಬು, ಚಲುವರಾಯಸ್ವಾಮಿ , ಗಣಿಗ ರವಿಕುಮಾರ್ ಭಾವಚಿತ್ರ ಹೊತ್ತು ಅಭಿಮಾನಿಗಳು ಮೆರವಣಿಗೆ ಮಾಡಿದರು. ಸುಮಾರು 1 ಕಿ.ಮೀ ಉದ್ದದ ಜನ ಸಾಗರದ ನಡುವೆ ರೋಡ್ ಶೋ ನಡೆಯಿತು. ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Intro:ಮಂಡ್ಯ: ಇಂದು ಸುಮಲತಾ ಸುನಾಮಿ ಬಂದಿತ್ತು. ಸ್ವಾಭಿಮಾನಿ ಸಮ್ಮಿಲನಕ್ಕೆ ಜನಸಾಗರ ಹರಿದು ಬಂದಿತ್ತು. ಸಮಾವೇಶಕ್ಕೂ ಮುನ್ನ ಕಾಳಿಕಾಂಭ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ ಜಮಸಾಗರದ ನಡುವೆ ರ‌್ಯಾಲಿಯನ್ನು ನಡೆಸಲಾಯಿತು.
ಸುಮಲತಾ‌ ಸಮಾವೇಶದ ರ‌್ಯಾಲಿಗೆ ವಿವಿಧ ಪಕ್ಷಗಳ ದ್ವಜದ ಮೆರಗು ನೀಡಿದವು. ರ‌್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತಸಂಘ, ಬಿಜೆಪಿ, ಸ್ವಾಭಿಮಾನಿ , ಪಕ್ಷದ ಹಾಗೂ ಡಿ.ಎಸ್‌.ಎಸ್ ಹಾಗೂ ಕನ್ನಡ ಸಂಘಟನೆಗಳ ಭಾವುಟಗಳು ರಾರಾಜಿಸಿದವು.‌
ರೆಬಲ್ ನಾಯಕರಾದ ರಮೇಶ್ ಬಾಬು, ಚಲುವರಾಯಸ್ವಾಮಿ , ಗಣಿಗ ರವಿಕುಮಾರ್ ಭಾವಚಿತ್ರ ಹೊತ್ತು ಅಭಿಮಾನಿಗಳು ಮೆರವಣಿಗೆ ಮಾಡಿದರು.
ಸುಮಾರು ಒಂದು ಕಿಲೋ ಮೀಟರ್ ಉದ್ದದ ಜನ ಸಾಗರದ ನಡುವೆ ಬೃಹತ್ ರೋಡ್ ಶೋ ಮಾಡಿದ ಸುಮಲತಾ ಅಂಬರೀಶ್, ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಜನ ಸಾಗರದ ನಡುವೆಯೇ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದರು. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದೂ‌ ಅಭಿಮಾನದ ಸುನಾಮಿ ನಡುವೆ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.