ETV Bharat / state

ಧಾರಾಕಾರ ಮಳೆಗೆ KRಪೇಟೆ ಬಸ್ ನಿಲ್ದಾಣ ಜಲಾವೃತ: ನಾಡದೋಣಿ ಬಳಸಿ ಪ್ರಯಾಣಿಕರ‌ ರಕ್ಷಣೆ - ಮಂಡ್ಯ ನ್ಯೂಸ್​

ಮಂಡ್ಯದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಕೆ. ಆರ್. ಪೇಟೆಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು, ಬಸ್​ ಸ್ಟ್ಯಾಂಡ್​ ಒಳಗಡೆ ಸಿಲುಕಿಕೊಂಡಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ನಾಡದೋಣಿ ಬಳಸಿ ರಕ್ಷಣೆ ಮಾಡಲಾಗಿದೆ.

KSRTC bus station at KR Pete
ಮಂಡ್ಯ ಬಸ್ ನಿಲ್ದಾಣ ಜಲಾವೃತ
author img

By

Published : Oct 1, 2021, 6:52 AM IST

Updated : Oct 1, 2021, 8:21 AM IST

ಮಂಡ್ಯ: ಜಿಲ್ಲೆಯ ಹಲವೆಡೆ ಭರ್ಜರಿ‌ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರು ನೀರಿನ‌ ಮಧ್ಯೆ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್​ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಮಳೆಯಿಂದಾಗಿ ಕೆಲಕಾಲ ಪರದಾಡಿದರು. ಬಸ್ ನಿಲ್ದಾಣದ ಒಳಗೆ ಮಕ್ಕಳು, ಗರ್ಭಿಣಿಯರು ಸೇರಿದಂತೆ 20ಕ್ಕೂ ಅಧಿಕ ಪ್ರಯಾಣಿಕರು ಸಿಲುಕಿದ್ದರು. ಇದೇ ವೇಳೆ, ಕರೆಂಟ್ ಸಹ ಕೈಕೊಟ್ಟಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರ ಕಿರುಚಾಟ ಮತ್ತಷ್ಟು ಆತಂಕ ಮೂಡಿಸಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆ KSRTC ಬಸ್ ನಿಲ್ದಾಣದ ಕಚೇರಿಗೂ ಕೂಡ ಮಳೆ ನೀರು ನುಗ್ಗಿದೆ. ಬಸ್​ ಸ್ಟ್ಯಾಂಡ್​ನಲ್ಲಿ ಐದಾರು ಅಡಿ ನೀರು ನಿಂತಿತ್ತು.

ಕೆ. ಆರ್. ಪೇಟೆ ಬಸ್ ನಿಲ್ದಾಣದಲ್ಲಿ ನಾಡದೋಣಿ ಬಳಸಿ ಪ್ರಯಾಣಿಕರ‌ ರಕ್ಷಣೆ

ನಾಡದೋಣಿ ಬಳಿಸಿ ಪ್ರಯಾಣಿಕರ ರಕ್ಷಣೆ:

ಮಳೆ ನೀರಿನ ಜೊತೆಗೆ ಹಾವುಗಳ ಕಾಟ ಸಹ ಹೆಚ್ಚಾಗಿದ್ದು, ಪ್ರಯಾಣಿಕರು ತಮ್ಮನ್ನು ಕಾಪಾಡುವಂತೆ ಚೀರಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ಸ್​ಪೆಕ್ಟರ್ ಸುರೇಶ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಡದೋಣಿ ಬಳಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ ನಿಲ್ದಾಣದಿಂದ ಹೊರ ತಂದಿದ್ದಾರೆ.

ಮಂಡ್ಯ: ಜಿಲ್ಲೆಯ ಹಲವೆಡೆ ಭರ್ಜರಿ‌ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರು ನೀರಿನ‌ ಮಧ್ಯೆ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್​ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಮಳೆಯಿಂದಾಗಿ ಕೆಲಕಾಲ ಪರದಾಡಿದರು. ಬಸ್ ನಿಲ್ದಾಣದ ಒಳಗೆ ಮಕ್ಕಳು, ಗರ್ಭಿಣಿಯರು ಸೇರಿದಂತೆ 20ಕ್ಕೂ ಅಧಿಕ ಪ್ರಯಾಣಿಕರು ಸಿಲುಕಿದ್ದರು. ಇದೇ ವೇಳೆ, ಕರೆಂಟ್ ಸಹ ಕೈಕೊಟ್ಟಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರ ಕಿರುಚಾಟ ಮತ್ತಷ್ಟು ಆತಂಕ ಮೂಡಿಸಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆ KSRTC ಬಸ್ ನಿಲ್ದಾಣದ ಕಚೇರಿಗೂ ಕೂಡ ಮಳೆ ನೀರು ನುಗ್ಗಿದೆ. ಬಸ್​ ಸ್ಟ್ಯಾಂಡ್​ನಲ್ಲಿ ಐದಾರು ಅಡಿ ನೀರು ನಿಂತಿತ್ತು.

ಕೆ. ಆರ್. ಪೇಟೆ ಬಸ್ ನಿಲ್ದಾಣದಲ್ಲಿ ನಾಡದೋಣಿ ಬಳಸಿ ಪ್ರಯಾಣಿಕರ‌ ರಕ್ಷಣೆ

ನಾಡದೋಣಿ ಬಳಿಸಿ ಪ್ರಯಾಣಿಕರ ರಕ್ಷಣೆ:

ಮಳೆ ನೀರಿನ ಜೊತೆಗೆ ಹಾವುಗಳ ಕಾಟ ಸಹ ಹೆಚ್ಚಾಗಿದ್ದು, ಪ್ರಯಾಣಿಕರು ತಮ್ಮನ್ನು ಕಾಪಾಡುವಂತೆ ಚೀರಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ಸ್​ಪೆಕ್ಟರ್ ಸುರೇಶ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಡದೋಣಿ ಬಳಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ ನಿಲ್ದಾಣದಿಂದ ಹೊರ ತಂದಿದ್ದಾರೆ.

Last Updated : Oct 1, 2021, 8:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.