ETV Bharat / state

ಮತ ಸೆಳೆಯಲು ನಿಖಿಲ್ ವಿನೂತನ ಪ್ರಚಾರ ತಂತ್ರ

ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದು ಇಂದು ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಂಬರೀಶ್, ವಿಷ್ಣುವರ್ಧನ್ ಒಟ್ಟಿಗಿನ ಫೋಟೋ ಇರುವ ಎತ್ತಿನಬಂಡಿ ಏರಿ ಮತಯಾಚನೆ ಮಾಡಿದರು.

author img

By

Published : Apr 11, 2019, 10:31 PM IST

ದಿಗ್ಗಜರು

ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಅಬ್ಬರದಿಂದ ಸಾಗಿದೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ನೀನಾ, ನಾನಾ ಎಂಬಂತೆ ಮತಸಮರದಲ್ಲಿ ನಿರತರಾಗಿದ್ದಾರೆ.

ಅಂಬಿ, ವಿಷ್ಣುವರ್ಧನ್‌ ಫೋಟೋ ಇರುವ ಎತ್ತಿನಬಂಡಿಯಲ್ಲಿ ನಿಖಿಲ್​ ಪ್ರಚಾರ

ಚಿಕ್ಕ ಮಂಡ್ಯ ಸೇರಿದಂತೆ ಸುತ್ತಮುತ್ತ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಶ್ ಒಟ್ಟಿಗಿನ ಫೋಟೋ ಇರುವ ಎತ್ತಿನಬಂಡಿ ಮೇಲೆ ಹೊರಟು ಮತದಾರರ ಮನವೊಲಿಸಿದರು. ಇದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು.

ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ 'ಅಂಬರೀಶ್ ಅಂಕಲ್ ಬದುಕಿದ್ದಿದ್ದರೆ ನನ್ನ ಪರವಾಗಿ ಮತ ಕೇಳುತ್ತಿದ್ದರು ಎಂದು ಅವರು ಹೇಳಿದ್ದರು. ಇದೀಗ ಅಂಬರೀಶ್ ಹಾಗೂ ವಿಷ್ಣುವರ್ಧನ್ ಭಾವಚಿತ್ರವಿರುವ ಎತ್ತಿನ ಗಾಡಿಯನ್ನು ಪ್ರಚಾರಕ್ಕೆ ಬಳಸಿದ್ದು, ಅಂಬಿ ಹಾಗೂ ವಿಷ್ಣು ಅಭಿಮಾನಿಗಳನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡುತ್ತಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಅಬ್ಬರದಿಂದ ಸಾಗಿದೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ನೀನಾ, ನಾನಾ ಎಂಬಂತೆ ಮತಸಮರದಲ್ಲಿ ನಿರತರಾಗಿದ್ದಾರೆ.

ಅಂಬಿ, ವಿಷ್ಣುವರ್ಧನ್‌ ಫೋಟೋ ಇರುವ ಎತ್ತಿನಬಂಡಿಯಲ್ಲಿ ನಿಖಿಲ್​ ಪ್ರಚಾರ

ಚಿಕ್ಕ ಮಂಡ್ಯ ಸೇರಿದಂತೆ ಸುತ್ತಮುತ್ತ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಶ್ ಒಟ್ಟಿಗಿನ ಫೋಟೋ ಇರುವ ಎತ್ತಿನಬಂಡಿ ಮೇಲೆ ಹೊರಟು ಮತದಾರರ ಮನವೊಲಿಸಿದರು. ಇದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು.

ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ 'ಅಂಬರೀಶ್ ಅಂಕಲ್ ಬದುಕಿದ್ದಿದ್ದರೆ ನನ್ನ ಪರವಾಗಿ ಮತ ಕೇಳುತ್ತಿದ್ದರು ಎಂದು ಅವರು ಹೇಳಿದ್ದರು. ಇದೀಗ ಅಂಬರೀಶ್ ಹಾಗೂ ವಿಷ್ಣುವರ್ಧನ್ ಭಾವಚಿತ್ರವಿರುವ ಎತ್ತಿನ ಗಾಡಿಯನ್ನು ಪ್ರಚಾರಕ್ಕೆ ಬಳಸಿದ್ದು, ಅಂಬಿ ಹಾಗೂ ವಿಷ್ಣು ಅಭಿಮಾನಿಗಳನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡುತ್ತಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಚಿಕ್ಕ ಮಂಡ್ಯದಲ್ಲಿ ದಿಗ್ಗಜರ ಪೋಟೋ ಇರುವ ಎತ್ತಿನ ಗಾಡಿಯಲ್ಲಿ ಪ್ರಚಾರ ಮಾಡಿದ ನಿಖಿಲ್

ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು.ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತ್ರ ಅಭ್ಯರ್ಥಿ ನಾನ ನೀನ ಎನುವಷ್ಟು ಮಟ್ಟಿಗೆ ಅಬ್ಬರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಇನ್ನೂ ಪ್ರಚಾರದಲ್ಲಿ ಮತದಾರರ ಸೆಳೆಯಲು ಕಸರತ್ತು ಮಾಡ್ತಿರುವ ನಿಖಿಲ್.ಇಂದು ಚಿಕ್ಕ‌ ಮಂಡ್ಯದಲ್ಲಿ ಪ್ರಚಾರ ನಡೆಸುವವೇಳೆ ಹಿರಿಯ ನಟ ಅಂಬರೀಶ್ ಅವರ ಭಾವ ಚಿತ್ರ ಇರುವ ಎತ್ತಿ ಬಂಡಿಯ ಮೇಲೆ ನಿಂತು ಪ್ರಚಾರಮಾಡಿದ್ದಾರೆ. ಚಿಕ್ಕಮಂಡ್ಯದಲ್ಲಿ ಪ್ರಚಾರವೇಳೆ ಹಿರಿಯ ನಟ ಅಂಬರೀಶ್ ಹಾಗೂ ವಿಷ್ಣುವರ್ಧನ್ ಇರುವ ಎತ್ತಿನ ಬಂಡಿಯ ಮೇಲೆ ಪ್ರಚಾರ ಮಾಡಿದ್ದಾರೆ. ನಿಖಿಲ್ ಕುಮಾರಸ್ವಮಿ, ಸುಮಲತಾ ಅಂಬರೀಶ್ ಅವರ ವಿರುದ್ಧವಾಗಿ ಸ್ಪರ್ಧಿಸಿದ್ದು ಅಂಬರೀಶ್ ಅವರ ಚಿತ್ರ ಇರುವ ಎತ್ತಿನ ಬಂಡಿಯ ಮೇಲೆ ಪ್ರಚಾರ ಮಾಡಿರುವುದು ಭಾರಿ ಕುತೂಹಲ ಕೆರಳಿಸಿ್ದೆದೆ.ಈ‌ಹಿಂದೆ ನಿಖಿಲ್ ಮಂಡ್ಯದಲ್ಲಿ ಪ್ರಚಾರಚಮಾಡುತ್ತಿದ್ದ ವೇಳೆ ಅಂಬರೀಶ್ ಅಂಕಲ್ ಬದುಕಿದ್ದಿದ್ರೆ ನನ್ನ ಪರವಾಗಿ ಮತ ಕೇಳ್ತಿದ್ರು ಎಂದು ಹೇಳಿದ್ರು.ಈಗ ಅಂಬರೀಶ್ ಹಾಗೂ ವಿಷ್ಣು ವರ್ಧನ್ ಅವರ ಭಾವಚಿತ್ರವಿರುವ ಎತ್ತಿನ ಗಾಡಿಯನ್ನು ಪ್ರಚಾರಕ್ಕೆ ಬಳಸಿದ್ದು.ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನು ತನ್ನತ್ತ ಸೆಳೆಯುವುದಕ್ಕೆ ಪ್ಲಾನ್ ಮಾಡಿದ್ದಾರಾ? ಎಂಬ ಮಾತುಗಳು ರಾಜಕೀಯವಲಯದಲ್ಲಿ ಕೇಳಿಬರ್ತಿವೆ.m

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.