ETV Bharat / state

ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ.. ಮನ್ಮುಲ್​ಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಅನ್ನದಾತರು - ಮನ್ಮುಲ್

ಮಂಡ್ಯದಲ್ಲಿ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು (milk price) ಪ್ರತಿ ಲೀ.ಗೆ 2 ರೂನಂತೆ ಕಡಿಮೆ ಮಾಡಿದ ಮನ್ಮುಲ್(manmul)ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

mandya farmers outrage on manmul due to revision of milk price
ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ
author img

By

Published : Nov 12, 2021, 12:05 PM IST

ಮಂಡ್ಯ: ಕೊರೊನಾ ಆತಂಕ ಕಡಿಮೆಯಾಗಿ ಈಗಷ್ಟೇ ಚೇತರಿಸಿಕೊಳ್ತಿದ್ದ ಹೈನುಗಾರಿಕೆ(Dairy farming) ನಂಬಿದ ರೈತರಿಗೆ ಇದೀಗ ಮನ್ಮುಲ್(manmul) ಶಾಕ್​ ನೀಡಿದೆ. ನಷ್ಟದ ಕಾರಣ ನೀಡಿ, ರೈತರಿಂದ ಖರೀದಿ ಮಾಡ್ತಿದ್ದ ಹಾಲಿಗೆ ಪ್ರತಿ ಲೀ.ಗೆ 2 ರೂ, ಕಡಿಮೆ ಮಾಡಿರೋದು ಹೈನುಗಾರಿಕೆ ನಂಬಿದವರಿಗೆ ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.

mandya farmers outrage on manmul due to revision of milk price
ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ

ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿ ಹೆಚ್ಚಿನವರು ತಮ್ಮ ಜೀವನ‌ ನಡೆಸುತ್ತಿದ್ದಾರೆ. ಆದರೆ, ಹಾಲನ್ನು ಕೊಂಡುಕೊಳ್ಳುತ್ತಿದ್ದ ಮಂಡ್ಯ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡ್ತಿದ್ದ ಪ್ರತಿ ಲೀಟರ್ ಹಾಲಿಗೆ 2 ರೂ. ದರ ಕಡಿತ(milk price) ಮಾಡಿದೆ. ಇದು ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿದ ರೈತರ ಬದುಕಿಗೆ ಬರೆ ಎಳೆದಂತಾಗಿದೆ.

ಆದ್ರೆ ಮನ್ಮುಲ್​ನ ಆಡಳಿತ ಮಂಡಳಿಯವರು, ಹಾಲು ಮಾರಾಟವಾಗದೇ ನಮಗೆ ನಷ್ಟವಾಗ್ತಿದೆ. ಆ ಕಾರಣಕ್ಕೆ ರೈತರಿಂದ ಕೊಳ್ಳುವ ಹಾಲಿಗೆ 2 ರೂ. ದರ ಕಡಿತ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುತ್ತಿದ್ದು, ರೈತರು ಸಹಕರಿಸಿ‌ ಎನ್ನುತ್ತಿದ್ದಾರೆ.

ಇದನ್ನೂ ಓದಿ: ವಿಟ್ಲ ಯುವತಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಪ್ರಕರಣ

ಮನ್ಮುಲ್‌ನಲ್ಲಿ ನಡೆದಿರೋ ಕೋಟ್ಯಂತರ ರೂ. ಹಗರಣದ ನಷ್ಟವನ್ನು ತುಂಬಿಕೊಳ್ಳಲು ಈ ರೀತಿ ರೈತರ ಹಾಲಿನ‌ ದರದಲ್ಲಿ ಕಡಿತ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬೆಲೆ ಕಡಿತವನ್ನು ವಾಪಸ್​​ ಪಡೆಯದಿದ್ರೆ ಮನ್ಮುಲ್ ಮುಂದೆ ಹಾಲು ಉತ್ಪಾದಕ‌ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ: ಕೊರೊನಾ ಆತಂಕ ಕಡಿಮೆಯಾಗಿ ಈಗಷ್ಟೇ ಚೇತರಿಸಿಕೊಳ್ತಿದ್ದ ಹೈನುಗಾರಿಕೆ(Dairy farming) ನಂಬಿದ ರೈತರಿಗೆ ಇದೀಗ ಮನ್ಮುಲ್(manmul) ಶಾಕ್​ ನೀಡಿದೆ. ನಷ್ಟದ ಕಾರಣ ನೀಡಿ, ರೈತರಿಂದ ಖರೀದಿ ಮಾಡ್ತಿದ್ದ ಹಾಲಿಗೆ ಪ್ರತಿ ಲೀ.ಗೆ 2 ರೂ, ಕಡಿಮೆ ಮಾಡಿರೋದು ಹೈನುಗಾರಿಕೆ ನಂಬಿದವರಿಗೆ ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.

mandya farmers outrage on manmul due to revision of milk price
ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ

ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿ ಹೆಚ್ಚಿನವರು ತಮ್ಮ ಜೀವನ‌ ನಡೆಸುತ್ತಿದ್ದಾರೆ. ಆದರೆ, ಹಾಲನ್ನು ಕೊಂಡುಕೊಳ್ಳುತ್ತಿದ್ದ ಮಂಡ್ಯ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡ್ತಿದ್ದ ಪ್ರತಿ ಲೀಟರ್ ಹಾಲಿಗೆ 2 ರೂ. ದರ ಕಡಿತ(milk price) ಮಾಡಿದೆ. ಇದು ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿದ ರೈತರ ಬದುಕಿಗೆ ಬರೆ ಎಳೆದಂತಾಗಿದೆ.

ಆದ್ರೆ ಮನ್ಮುಲ್​ನ ಆಡಳಿತ ಮಂಡಳಿಯವರು, ಹಾಲು ಮಾರಾಟವಾಗದೇ ನಮಗೆ ನಷ್ಟವಾಗ್ತಿದೆ. ಆ ಕಾರಣಕ್ಕೆ ರೈತರಿಂದ ಕೊಳ್ಳುವ ಹಾಲಿಗೆ 2 ರೂ. ದರ ಕಡಿತ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುತ್ತಿದ್ದು, ರೈತರು ಸಹಕರಿಸಿ‌ ಎನ್ನುತ್ತಿದ್ದಾರೆ.

ಇದನ್ನೂ ಓದಿ: ವಿಟ್ಲ ಯುವತಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಪ್ರಕರಣ

ಮನ್ಮುಲ್‌ನಲ್ಲಿ ನಡೆದಿರೋ ಕೋಟ್ಯಂತರ ರೂ. ಹಗರಣದ ನಷ್ಟವನ್ನು ತುಂಬಿಕೊಳ್ಳಲು ಈ ರೀತಿ ರೈತರ ಹಾಲಿನ‌ ದರದಲ್ಲಿ ಕಡಿತ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬೆಲೆ ಕಡಿತವನ್ನು ವಾಪಸ್​​ ಪಡೆಯದಿದ್ರೆ ಮನ್ಮುಲ್ ಮುಂದೆ ಹಾಲು ಉತ್ಪಾದಕ‌ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.