ETV Bharat / state

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ: ಕೆಆರ್​ಎಸ್​ ಒಳಹರಿವು ಹೆಚ್ಚಳ - ಕೆಆರ್​ಎಸ್​ ಜಲಾಶಯ

ರಾಜ್ಯದಲ್ಲಿ ಅದ್ರಲ್ಲೂ ಕಾವೇರಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಮಂಡ್ಯದ ಕೆಆರ್​ಎಸ್​ ಜಲಾಶಯದ ಒಳಹರಿವು ಒಂದೇ ದಿನದಲ್ಲಿ ಬಾರಿ ಹೆಚ್ಚಳವಾಗಿದೆ.

KRS Reservoir Inflow Increas
ಕೆಆರ್​ಎಸ್​ ಒಳಹರಿವು ಹೆಚ್ಚಳ
author img

By

Published : Jun 16, 2021, 11:10 AM IST

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಒಳ ಹರಿವು ಹೆಚ್ಚಳವಾಗಿದೆ. ಮಂಗಳವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 82.44 ಅಡಿ ತಲುಪಿದ್ದು, 6,379 ಕ್ಯೂಸೆಕ್ ನೀರು ಹರಿದು ಬಂದಿದೆ.

ಸೋಮವಾರ 1,228 ಕ್ಯೂಸೆಕ್ ಇದ್ದ ಒಳಹರಿವು, ಒಂದೇ ದಿನಕ್ಕೆ 5,151 ಕ್ಯೂಸೆಕ್​ಗೆ ಹೆಚ್ಚಳವಾಗಿರುವುದರಿಂದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ. ಪ್ರಸ್ತುತ ನೀರಿನ ಇಂದಿನ ಮಟ್ಟ -82.44 ಅಡಿ ಇದೆ. ಒಳಹರಿವು - 6,379 ಕ್ಯೂಸೆಕ್ ಆಗಿದೆ ಮತ್ತು ಹೊರ ಹರಿವು -353 ಕ್ಯೂಸೆಕ್ ಇದೆ.

ಕೆಆರ್​ಎಸ್​ ಜಲಾಶಯದ ಮನಮೋಹಕ ದೃಶ್ಯ

ಮಂಡ್ಯ, ಮೈಸೂರು ಜಿಲ್ಲೆಯ ರೈತರು ಕೆಎಸ್​ಆರ್​ಎಸ್​ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಬಾರಿ ನಿರೀಕ್ಷೆಯ ಸಮಯಕ್ಕಿಂತ ಮೊದಲೇ ಜಲಾಶಯದಲ್ಲಿ ನೀರು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.

ಇತ್ತೀಚೆಗೆ ಸಿಎಂ ಬಿಎಸ್​ವೈಗೆ ಪತ್ರ ಬರೆದಿದ್ದ ಶಾಸಕ ಡಿಸಿ ತಮ್ಮಣ್ಣ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮುನ್ನ ಕಾವೇರಿ ಜಲಾನಯದ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದರು. ತಮ್ಮಣ್ಣ ಪತ್ರಕ್ಕೆ ಸಿಎಂ ಸಕಾರಾತ್ಮವಾಗಿ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಒಳ ಹರಿವು ಹೆಚ್ಚಳವಾಗಿದೆ. ಮಂಗಳವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 82.44 ಅಡಿ ತಲುಪಿದ್ದು, 6,379 ಕ್ಯೂಸೆಕ್ ನೀರು ಹರಿದು ಬಂದಿದೆ.

ಸೋಮವಾರ 1,228 ಕ್ಯೂಸೆಕ್ ಇದ್ದ ಒಳಹರಿವು, ಒಂದೇ ದಿನಕ್ಕೆ 5,151 ಕ್ಯೂಸೆಕ್​ಗೆ ಹೆಚ್ಚಳವಾಗಿರುವುದರಿಂದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ. ಪ್ರಸ್ತುತ ನೀರಿನ ಇಂದಿನ ಮಟ್ಟ -82.44 ಅಡಿ ಇದೆ. ಒಳಹರಿವು - 6,379 ಕ್ಯೂಸೆಕ್ ಆಗಿದೆ ಮತ್ತು ಹೊರ ಹರಿವು -353 ಕ್ಯೂಸೆಕ್ ಇದೆ.

ಕೆಆರ್​ಎಸ್​ ಜಲಾಶಯದ ಮನಮೋಹಕ ದೃಶ್ಯ

ಮಂಡ್ಯ, ಮೈಸೂರು ಜಿಲ್ಲೆಯ ರೈತರು ಕೆಎಸ್​ಆರ್​ಎಸ್​ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಬಾರಿ ನಿರೀಕ್ಷೆಯ ಸಮಯಕ್ಕಿಂತ ಮೊದಲೇ ಜಲಾಶಯದಲ್ಲಿ ನೀರು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.

ಇತ್ತೀಚೆಗೆ ಸಿಎಂ ಬಿಎಸ್​ವೈಗೆ ಪತ್ರ ಬರೆದಿದ್ದ ಶಾಸಕ ಡಿಸಿ ತಮ್ಮಣ್ಣ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮುನ್ನ ಕಾವೇರಿ ಜಲಾನಯದ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದರು. ತಮ್ಮಣ್ಣ ಪತ್ರಕ್ಕೆ ಸಿಎಂ ಸಕಾರಾತ್ಮವಾಗಿ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.