ETV Bharat / state

ಶಾಸಕರ ರಾಜೀನಾಮೆ ವಿಚಾರ: ರಾಷ್ಟ್ರಪತಿ, ರಾಜ್ಯಪಾಲರೇ ಸುಪ್ರೀಂ ಎಂದ ಡಿವಿಎಸ್​ - undefined

ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಯಾವ ನಾಯಕರ ಕೈವಾಡವಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಸಂವಿಧಾನತ್ಮಾಕವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಾವು ಅವರ ಆದೇಶ ಪಾಲನೆ ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
author img

By

Published : Jul 7, 2019, 2:48 AM IST

ಮಂಡ್ಯ: ರಾಜ್ಯ ರಾಜಕಾರಣದ ಬೆಳವಣಿಗೆ ಹಾಗೂ ಶಾಸಕರ ರಾಜೀನಾಮೆ ಪ್ರಕರಣದ ನಿರ್ಧಾರವನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಂವಿಧಾನತ್ಮಕವಾಗಿ ಪರಿಹರಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ತುಂಬಾ ಸಮಯದಿಂದ ಅತೃಪ್ತಿ ಇತ್ತು. ಇದೀಗ ಬ್ಲಾಸ್ಟ್​ ಆಗಿದೆ. ಕಾಂಗ್ರೆಸ್​​ ಶಾಸಕರಿಗೆ ನಾವು ಶಾಸಕರಾಗಿರುವುದಕ್ಕಿಂತ ರಾಜೀನಾಮೆ ನೀಡಿ ಸಾಮಾನ್ಯ ಮನುಷ್ಯರಾಗಿರೋಣ ಎನಿಸಿದೆ. ಶಾಸಕರಿಗೆ ಇಂತಹ ಸರ್ಕಾರ, ನಾಯಕರ ಜೊತೆ ಕೆಲಸ ಮಾಡುವುದು ಇಷ್ಟ ಇರಲಿಲ್ಲ. ಸರ್ಕಾರ ಸರಿಯಾಗುತ್ತೆ ಎಂಬ ಆಶಯ ಇತ್ತು. ಆದರೆ ಸರಿಯಾಗದ ಹಂತಕ್ಕೆ ಬಂದಿದ್ದರಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ ಅಷ್ಟೇ. ರಾಜ್ಯಪಾಲರು ಏನು ಮಾಡುತ್ತಾರೋ ಕಾದು ನೋಡೋಣ ಎಂದರು.

ಕಳೆದ ಕೆಲವು ತಿಂಗಳಿಂದ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರಿದ್ದಾರೆ ಎನ್ನುತ್ತಿದ್ದಾರೆ. ಒಮ್ಮೆ ನೀವೇ ಗಮನಿಸಿ ಇಂದು ಬಿಜೆಪಿಯ ಯಾವುದೇ ಒಬ್ಬ ನಾಯಕ ರಾಜೀನಾಮೆ ನೀಡಿದ ಶಾಸಕರ ಮನೆಯಲ್ಲಿ ಕಾಣಿಸಿಕೊಂಡಿದ್ದಾರಾ? ನಾನು ಗಮನಿಸಿದಂತೆ ರಾಜೀನಾಮೆ ನೀಡಿದವರ ಜೊತೆ ಯಾರೂ ಕಾಣಿಸಿಕೊಂಡಿಲ್ಲ. ಇದರ ಹಿಂದೆ ಬಿಜೆಪಿಯ ಯಾವ ನಾಯಕರ ಕೈವಾಡವಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

ಈ ರಾಜೀನಾಮೆ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಸಂವಿಧಾನತ್ಮಾಕವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದು, ನಾವು ಅವರ ಆದೇಶ ಪಾಲನೆ ಮಾಡಲಿದ್ದೇವೆ ಎಂದು ತಿಳಿಸಿದರು.

ಮಂಡ್ಯ: ರಾಜ್ಯ ರಾಜಕಾರಣದ ಬೆಳವಣಿಗೆ ಹಾಗೂ ಶಾಸಕರ ರಾಜೀನಾಮೆ ಪ್ರಕರಣದ ನಿರ್ಧಾರವನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಂವಿಧಾನತ್ಮಕವಾಗಿ ಪರಿಹರಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ತುಂಬಾ ಸಮಯದಿಂದ ಅತೃಪ್ತಿ ಇತ್ತು. ಇದೀಗ ಬ್ಲಾಸ್ಟ್​ ಆಗಿದೆ. ಕಾಂಗ್ರೆಸ್​​ ಶಾಸಕರಿಗೆ ನಾವು ಶಾಸಕರಾಗಿರುವುದಕ್ಕಿಂತ ರಾಜೀನಾಮೆ ನೀಡಿ ಸಾಮಾನ್ಯ ಮನುಷ್ಯರಾಗಿರೋಣ ಎನಿಸಿದೆ. ಶಾಸಕರಿಗೆ ಇಂತಹ ಸರ್ಕಾರ, ನಾಯಕರ ಜೊತೆ ಕೆಲಸ ಮಾಡುವುದು ಇಷ್ಟ ಇರಲಿಲ್ಲ. ಸರ್ಕಾರ ಸರಿಯಾಗುತ್ತೆ ಎಂಬ ಆಶಯ ಇತ್ತು. ಆದರೆ ಸರಿಯಾಗದ ಹಂತಕ್ಕೆ ಬಂದಿದ್ದರಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ ಅಷ್ಟೇ. ರಾಜ್ಯಪಾಲರು ಏನು ಮಾಡುತ್ತಾರೋ ಕಾದು ನೋಡೋಣ ಎಂದರು.

ಕಳೆದ ಕೆಲವು ತಿಂಗಳಿಂದ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರಿದ್ದಾರೆ ಎನ್ನುತ್ತಿದ್ದಾರೆ. ಒಮ್ಮೆ ನೀವೇ ಗಮನಿಸಿ ಇಂದು ಬಿಜೆಪಿಯ ಯಾವುದೇ ಒಬ್ಬ ನಾಯಕ ರಾಜೀನಾಮೆ ನೀಡಿದ ಶಾಸಕರ ಮನೆಯಲ್ಲಿ ಕಾಣಿಸಿಕೊಂಡಿದ್ದಾರಾ? ನಾನು ಗಮನಿಸಿದಂತೆ ರಾಜೀನಾಮೆ ನೀಡಿದವರ ಜೊತೆ ಯಾರೂ ಕಾಣಿಸಿಕೊಂಡಿಲ್ಲ. ಇದರ ಹಿಂದೆ ಬಿಜೆಪಿಯ ಯಾವ ನಾಯಕರ ಕೈವಾಡವಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

ಈ ರಾಜೀನಾಮೆ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಸಂವಿಧಾನತ್ಮಾಕವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದು, ನಾವು ಅವರ ಆದೇಶ ಪಾಲನೆ ಮಾಡಲಿದ್ದೇವೆ ಎಂದು ತಿಳಿಸಿದರು.

Intro:ಮಂಡ್ಯ: ರಾಜ್ಯ ರಾಜಕಾರಣದ ಬೆಳವಣಿಗೆ ಹಾಗೂ ಶಾಸಕರ ರಾಜೀನಾಮೆ ಪ್ರಕರಣದ ನಿರ್ಧಾರವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಂವಿಧಾನತ್ಮಕವಾಗಿ ಪರಿಹರಿಸಲಿದ್ದಾರೆ ಅನ್ನೋ ಮೂಲಕ ರಾಜೀನಾಮೆಗೆ ಟರ್ನಿಂಗ್ ನೀಡಿದ್ದಾರೆ.


Body:ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜೀನಾಮೆ ಹಿಂದೆ ಬಿಜೆಪಿಯ ಯಾವ ನಾಯಕರೂ ಇಲ್ಲ. ನಾನು ಗಮನಿಸಿದಂತೆ ರಾಜೀನಾಮೆ ನೀಡಿದವರ ಜೊತೆ ಯಾರೂ ಕಾಣಿಸಿಕೊಂಡಿಲ್ಲ. ರಾಜೀನಾಮೆ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಸಂವಿಧಾನತ್ಮಾಕವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಲ್ಲಿ ಅತೃಪ್ತಿ ಶೇಖರಣೆ ಆಗಿತ್ತು. ಈಗ ಹೊಡೆದಿದೆ. ಹಲವು ಸಮಯದಿಂದ ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ಕಾಯುತ್ತಿದ್ದರು. ಆದರೆ ಅದು ಆಗಲಿಲ್ಲ. ಈಗ ರಾಜೀನಾಮೆ ನೀಡಿದ್ದಾರೆ ಎಂದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.