ಕುಷ್ಟಗಿ: ಪಡಿತರ ಫಲಾನುಭವಿಗಳಿಗೆ ಅಕ್ಕಿ ಮಾತ್ರ ಸಿಕ್ಕಿದ್ದು, ಉಪ್ಪು, ಎಣ್ಣೆ, ಸಕ್ಕರೆ ದಿನಸಿ ಪದಾರ್ಥ ನೀಡುವಂತೆ ಒತ್ತಾಯಿಸಿ ಇಲ್ಲಿನ 22 ಹಾಗೂ 23ನೇ ವಾರ್ಡ್ ಮಹಿಳೆಯರು ಏಕಾಏಕಿ ತಹಶೀಲ್ದಾರ್ ವಾಹನಕ್ಕೆ ಘೇರಾವ್ ಹಾಕಿದ ಘಟನೆ ನಡೆದಿದೆ.
ಕಚೇರಿಯಿಂದ ತಹಶೀಲ್ದಾರ್ ಎಂ.ಸಿದ್ದೇಶ ನಿರ್ಗಮಿಸುವ ವೇಳೆ ವಾಹನ ಸುತ್ತುವರೆದ ಮಹಿಳೆಯರು, ದಿನಸಿ ಕಿಟ್ ವಿತರಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ದಾನಿಗಳು ನೀಡಿರುವ ದಿನಸಿ ಆಹಾರದ ಕಿಟ್ಗಳನ್ನು ವಿತರಿಸುವಂತೆ ಪಟ್ಟು ಹಿಡಿದರು. ದಾನಿಗಳು ನೀಡಿದ ಕಿಟ್ಗಳನ್ನು ಕಾರ್ಡ್ ಇಲ್ಲದವರಿಗೆ ಹಾಗೂ ನಿರ್ಗತಿಕರಿಗೆ ವಿತರಿಸಲಾಗುತ್ತಿದೆ. ದಿನಸಿ ಆಹಾರದ ಕಿಟ್ ಸರ್ಕಾರದಿಂದ ವಿತರಿಸುತ್ತಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.