ಗಂಗಾವತಿ: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವರ ದರ್ಶನಕ್ಕೆ ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ದೇಗುಲಕ್ಕೆ ಭೇಟಿ ನೀಡಿದರು.
![Special worship for the temple of Anjaneya](https://etvbharatimages.akamaized.net/etvbharat/prod-images/kn-gvt-01-05-chakvarthi-halt-at-anjanadri-hills-vis-kac10005_05082020121700_0508f_1596610020_42.jpg)
ಆ.5ರಿಂದ ದೇಗುಲ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಬೆಂಗಳೂರಿನಿಂದ ಮಂಗಳವಾರವೇ ಆಗಮಿಸಿದ್ದ ಸೂಲಿಬೆಲೆ ಹಾಗೂ ಕೆಲ ಬೆರಳೆಣಿಕೆಯ ಬೆಂಬಲಿಗರು ಬೆಟ್ಟದ ಮೇಲಿರುವ ಕೋಣೆಯಲ್ಲಿ ತಂಗಿದ್ದರು.
ಇಂದು ದೇಗುಲದ ಬಾಗಿಲು ತೆರೆಯುತ್ತಿದ್ದಂತೆ ದರ್ಶನ ಪಡೆದ ಸೂಲಿಬೆಲೆ, ವಿಶೇಷ ಪೂಜೆ ಸಲ್ಲಿಸಿದರು. ಪತಂಜಲಿ ಯೋಗ ಸಂಸ್ಥೆಯ ಮುಖ್ಯಸ್ಥ ಭವರ್ಲಾಲ್ ಆರ್ಯ ಇದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವುದನ್ನು ಸ್ವಾಗತಿಸಿ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.