ETV Bharat / state

ಯುಪಿಎಸ್​​ಸಿ ಪಾಸಾದ ರಮೇಶ ಗುಮಗೇರಿ ಕ್ಷೇತ್ರದ ಹೆಮ್ಮೆ: ಕುಷ್ಟಗಿ ಶಾಸಕ - UCSC exam

ಯುಪಿಎಸ್​ಸಿ ಪರೀಕ್ಷೆಯಲ್ಲಿ 646ನೇ ರ‍್ಯಾಂಕ್‌ ಗಳಿಸಿದ ಕುಷ್ಟಗಿ ತಾಲೂಕಿನ ಕಂದಕೂರು ರಮೇಶ ಗುಮಗೇರಿ ಕುಷ್ಟಗಿ ತಾಲೂಕಿನ ಹೆಮ್ಮೆ ಎನಿಸಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.

ಯುಪಿಎಸ್​​ಸಿ ಪಾಸಾದ ರಮೇಶ ಗುಮಗೇರಿ
ಯುಪಿಎಸ್​​ಸಿ ಪಾಸಾದ ರಮೇಶ ಗುಮಗೇರಿ
author img

By

Published : Aug 4, 2020, 11:35 PM IST

Updated : Aug 5, 2020, 7:52 AM IST

ಕುಷ್ಟಗಿ(ಕೊಪ್ಪಳ): ಯುಪಿಎಸ್​ಸಿ ಪರೀಕ್ಷೆಯಲ್ಲಿ 646ನೇ ರ‍್ಯಾಂಕ್‌ ಗಳಿಸಿದ ಕುಷ್ಟಗಿ ತಾಲೂಕಿನ ಕಂದಕೂರು ರಮೇಶ ಗುಮಗೇರಿ ಕುಷ್ಟಗಿ ತಾಲೂಕಿನ ಹೆಮ್ಮೆ ಎನಿಸಿದ್ದು, ಈ ದಿನ ಸ್ಮರಣೀಯ ದಿನವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಮೇಶ ಗುಮಗೇರಿ ಅವರು ವಿದ್ಯೆ ಯಾರ ಸ್ವತ್ತು ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹಿಂದುಳಿದ ವರ್ಗದಲ್ಲಿ ಜನಿಸಿದರೂ, ಸತತ ಪರಿಶ್ರಮದ ಹಿನ್ನೆಲೆಯಲ್ಲೂ ಬಡತನದಲ್ಲಿ ಅರಳಿದ ಪ್ರತಿಭಾನ್ವಿತ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಈ ದಿನ ಅತ್ಯಂತ ಸ್ಮರಣನೀಯ, ಸಂತಸದ ದಿನವಾಗಿದೆ ಎಂದರು.

ರಮೇಶ ಗುಮಗೇರಿ ಸಾಧನೆಯಲ್ಲಿ ತಮ್ಮನ ಪರಿಶ್ರಮ ಇದೆ ಎಂದು ತಿಳಿದು ಸಂತೋಷವಾಗಿದೆ. ರಮೇಶ ಗುಮಗೇರಿ ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯುವ ಸಾಧಕ ಎನ್ನುವ ಹೆಮ್ಮೆ ನನಗಾಗಿದೆ ಎಂದರು.

ಕುಷ್ಟಗಿ(ಕೊಪ್ಪಳ): ಯುಪಿಎಸ್​ಸಿ ಪರೀಕ್ಷೆಯಲ್ಲಿ 646ನೇ ರ‍್ಯಾಂಕ್‌ ಗಳಿಸಿದ ಕುಷ್ಟಗಿ ತಾಲೂಕಿನ ಕಂದಕೂರು ರಮೇಶ ಗುಮಗೇರಿ ಕುಷ್ಟಗಿ ತಾಲೂಕಿನ ಹೆಮ್ಮೆ ಎನಿಸಿದ್ದು, ಈ ದಿನ ಸ್ಮರಣೀಯ ದಿನವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಮೇಶ ಗುಮಗೇರಿ ಅವರು ವಿದ್ಯೆ ಯಾರ ಸ್ವತ್ತು ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹಿಂದುಳಿದ ವರ್ಗದಲ್ಲಿ ಜನಿಸಿದರೂ, ಸತತ ಪರಿಶ್ರಮದ ಹಿನ್ನೆಲೆಯಲ್ಲೂ ಬಡತನದಲ್ಲಿ ಅರಳಿದ ಪ್ರತಿಭಾನ್ವಿತ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಈ ದಿನ ಅತ್ಯಂತ ಸ್ಮರಣನೀಯ, ಸಂತಸದ ದಿನವಾಗಿದೆ ಎಂದರು.

ರಮೇಶ ಗುಮಗೇರಿ ಸಾಧನೆಯಲ್ಲಿ ತಮ್ಮನ ಪರಿಶ್ರಮ ಇದೆ ಎಂದು ತಿಳಿದು ಸಂತೋಷವಾಗಿದೆ. ರಮೇಶ ಗುಮಗೇರಿ ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯುವ ಸಾಧಕ ಎನ್ನುವ ಹೆಮ್ಮೆ ನನಗಾಗಿದೆ ಎಂದರು.

Last Updated : Aug 5, 2020, 7:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.