ETV Bharat / state

ಕನ್ನಡ ವಿರೋಧಿ ಧೋರಣೆ ಕೈಬಿಡಿ:  ’ಕನನಿಸೇ’ ಕಾರ್ಯಕರ್ತರಿಂದ ಒತ್ತಾಯ - ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು

ಬ್ಯಾಂಕಿನ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್​​​​ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕೊಪ್ಪಳದಲ್ಲಿ ಎಚ್ಚರಿಸಿದ್ದಾರೆ.

Karnataka Nava Nirmana sene protest against SBI at koppala
ಎಸ್​ಬಿಐ ಬ್ಯಾಂಕ್​ ಮುಂದೆ ಕನವೇ ಕಾರ್ಯಕರ್ತರಿಂದ ಒತ್ತಾಯ..
author img

By

Published : May 26, 2020, 9:22 PM IST

Updated : May 26, 2020, 9:40 PM IST

ಕೊಪ್ಪಳ: ಕನ್ನಡ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ನಗರದ ಎಸ್​ಬಿಐ ಬ್ಯಾಂಕಿನ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಎಸ್​ಬಿಐ ಬ್ಯಾಂಕ್​ ಮುಂದೆ ಕನನಿಸೇ ಕಾರ್ಯಕರ್ತರಿಂದ ಒತ್ತಾಯ

ಕನನಿಸೇ ಮುಖಂಡ ವಿಜಯಕುಮಾರ್ ಕವಲೂರು ನೇತೃತ್ವದಲ್ಲಿ ಬ್ಯಾಂಕಿನ ಶಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಬಳಿಕ ರಾಷ್ಟ್ರಭಾಷೆ ಹೆಸರಿನಲ್ಲಿ ಎಸ್​ಬಿಐ ಬ್ಯಾಂಕಿನಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಬ್ಯಾಂಕ್​ನ ಖಾತೆ ಪುಸ್ತಕ, ಚಲನ್​ಗಳಲ್ಲಿ ನಾಡ ಭಾಷೆ ಕನ್ನಡ ಕಡೆಗಣಿಸಲಾಗಿದೆ ಎಂದು ಆಕ್ರೋಶಿತರಾದರು.

ಈ ಮೂಲಕ ಹಿಂದಿ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಬ್ಯಾಂಕಿನ ದೈನಂದಿನ ವ್ಯವಹಾರ ಮಾಡಲು ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್​​​​​​ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದರು.

ಕೊಪ್ಪಳ: ಕನ್ನಡ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ನಗರದ ಎಸ್​ಬಿಐ ಬ್ಯಾಂಕಿನ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಎಸ್​ಬಿಐ ಬ್ಯಾಂಕ್​ ಮುಂದೆ ಕನನಿಸೇ ಕಾರ್ಯಕರ್ತರಿಂದ ಒತ್ತಾಯ

ಕನನಿಸೇ ಮುಖಂಡ ವಿಜಯಕುಮಾರ್ ಕವಲೂರು ನೇತೃತ್ವದಲ್ಲಿ ಬ್ಯಾಂಕಿನ ಶಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಬಳಿಕ ರಾಷ್ಟ್ರಭಾಷೆ ಹೆಸರಿನಲ್ಲಿ ಎಸ್​ಬಿಐ ಬ್ಯಾಂಕಿನಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಬ್ಯಾಂಕ್​ನ ಖಾತೆ ಪುಸ್ತಕ, ಚಲನ್​ಗಳಲ್ಲಿ ನಾಡ ಭಾಷೆ ಕನ್ನಡ ಕಡೆಗಣಿಸಲಾಗಿದೆ ಎಂದು ಆಕ್ರೋಶಿತರಾದರು.

ಈ ಮೂಲಕ ಹಿಂದಿ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಬ್ಯಾಂಕಿನ ದೈನಂದಿನ ವ್ಯವಹಾರ ಮಾಡಲು ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್​​​​​​ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದರು.

Last Updated : May 26, 2020, 9:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.