ETV Bharat / state

ಶೂರ್ಪನಕಿ, ಯಮಧೂತರ ವೇಷದಲ್ಲಿ ಕೊರೊನಾ ವೈರಸ್​ ಬಗ್ಗೆ ಪೊಲೀಸರ ಜಾಗೃತಿ

author img

By

Published : Apr 23, 2020, 10:30 AM IST

ಕುಷ್ಟಗಿ ಪೊಲೀಸರು ಹಗಲು ವೇಷಗಾರರ ಸಹಯೋಗದೊಂದಿಗೆ ಬುಧವಾರ ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಅಣಕು ಪ್ರದರ್ಶನದ ಮೂಲಕ ಕೊರೊನಾ ವೈಸ್​​ನ ಬಗ್ಗೆ ಜಾಗೃತಿ ಮೂಡಿಸಿದರು.

Awareness of the coronavirus
ಯಮಧೂತರ ವೇಷದಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತಿ

ಕುಷ್ಟಗಿ: ಲಾಕ್​​ಡೌನ್ ಸಂಧರ್ಭದಲ್ಲಿ ದಿನವೂ ಲಾಠಿ ಹಿಡಿದು ಕಾರ್ಯ ನಿರ್ವಹಿಸುವ ಪೊಲೀಸರು, ಹಗಲು ವೇಷಗಾರರ ಸಹಯೋಗದೊಂದಿಗೆ ಬುಧವಾರ ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಅಣಕು ಪ್ರದರ್ಶನದ ಮೂಲಕ ಕೊರೊನಾ ವೈಸ್​​ನ ಬಗ್ಗೆ ಜಾಗೃತಿ ಮೂಡಿಸಿದರು.

ಲಾಕ್​​ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಅನಗತ್ಯವಾಗಿ ಹಾಗೂ ಮಾಸ್ಕ್​​ ಇಲ್ಲದೇ ಸಂಚರಿಸುವವರನ್ನು ತಡೆದು ನಿಲ್ಲಿಸಿ, ನಾನು ಕೊರೊನಾ ಮಹಾಮಾರಿ, ಮನೆಯಲ್ಲಿ ಇರಿ. ಇನ್ನೊಮ್ಮೆ ರಸ್ತೆಗೆ ಬಂದರೆ ಯಮಲೋಕಕ್ಕೆ ಕರೆದೊಯ್ಯುವುದಾಗಿ ಎಚ್ಚರಿಸಿದರಲ್ಲದೇ ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಬೈಕ್ ಸವಾರರ ಸುತ್ತ ಕುಣಿದು ಬೈಕ್​​ ಸವಾರರನ್ನು ಆ ಕ್ಷಣ ತಬ್ಬಿಬ್ಬುಗೊಳಿಸಿದರು.

ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇನ್ನು ಸಿಪಿಐ ಚಂದ್ರಶೇಖರ್​​. ಜಿ ಹಾಗೂ ಪಿಎಸೈ ಚಿತ್ತರಂಜನ್ ನಾಯಕ್ ನೇತೃತ್ವದಲ್ಲಿ ಕುಷ್ಟಗಿ ಪೊಲೀಸರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಸಂದೇಶದೊಂದಿಗೆ ಈ ಪ್ರಯೋಗ ವಿಭಿನ್ನವೆನಿಸಿತು.

ಕುಷ್ಟಗಿ: ಲಾಕ್​​ಡೌನ್ ಸಂಧರ್ಭದಲ್ಲಿ ದಿನವೂ ಲಾಠಿ ಹಿಡಿದು ಕಾರ್ಯ ನಿರ್ವಹಿಸುವ ಪೊಲೀಸರು, ಹಗಲು ವೇಷಗಾರರ ಸಹಯೋಗದೊಂದಿಗೆ ಬುಧವಾರ ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಅಣಕು ಪ್ರದರ್ಶನದ ಮೂಲಕ ಕೊರೊನಾ ವೈಸ್​​ನ ಬಗ್ಗೆ ಜಾಗೃತಿ ಮೂಡಿಸಿದರು.

ಲಾಕ್​​ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಅನಗತ್ಯವಾಗಿ ಹಾಗೂ ಮಾಸ್ಕ್​​ ಇಲ್ಲದೇ ಸಂಚರಿಸುವವರನ್ನು ತಡೆದು ನಿಲ್ಲಿಸಿ, ನಾನು ಕೊರೊನಾ ಮಹಾಮಾರಿ, ಮನೆಯಲ್ಲಿ ಇರಿ. ಇನ್ನೊಮ್ಮೆ ರಸ್ತೆಗೆ ಬಂದರೆ ಯಮಲೋಕಕ್ಕೆ ಕರೆದೊಯ್ಯುವುದಾಗಿ ಎಚ್ಚರಿಸಿದರಲ್ಲದೇ ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಬೈಕ್ ಸವಾರರ ಸುತ್ತ ಕುಣಿದು ಬೈಕ್​​ ಸವಾರರನ್ನು ಆ ಕ್ಷಣ ತಬ್ಬಿಬ್ಬುಗೊಳಿಸಿದರು.

ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇನ್ನು ಸಿಪಿಐ ಚಂದ್ರಶೇಖರ್​​. ಜಿ ಹಾಗೂ ಪಿಎಸೈ ಚಿತ್ತರಂಜನ್ ನಾಯಕ್ ನೇತೃತ್ವದಲ್ಲಿ ಕುಷ್ಟಗಿ ಪೊಲೀಸರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಸಂದೇಶದೊಂದಿಗೆ ಈ ಪ್ರಯೋಗ ವಿಭಿನ್ನವೆನಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.