ETV Bharat / state

ಗಾಂಧೀಜಿ ವಿಚಾರಧಾರೆ ಇಂದಿಗೂ ಪ್ರಸ್ತುತ: ಶಾಸಕ ಬಯ್ಯಾಪುರ

author img

By

Published : Oct 2, 2020, 12:50 PM IST

ಮಹಾತ್ಮ ಗಾಂಧೀಜಿಯವರ 152ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಕುಷ್ಟಗಿ ಪಟ್ಟಣದ ಗಾಂಧೀ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ತಹಶೀಲ್ದಾರ್​​ ಕಚೇರಿಯಲ್ಲಿ ಗಾಂಧಿ ಜಯಂತಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Gandhi jayanti celebration at Kushtagi
ಗಾಂಧೀಜಿ ವಿಚಾರಧಾರೆ ಇಂದಿಗೂ ಪ್ರಸ್ತುತ: ಶಾಸಕ ಬಯ್ಯಾಪುರ

ಕುಷ್ಟಗಿ(ಕೊಪ್ಪಳ): ಮಹಾತ್ಮ ಗಾಂಧೀಜಿ ಹಾಗೂ ಲಾಲ್​​​ ಬಹದ್ದೂರು ಶಾಸ್ತ್ರಿ ಅವರ ಜೀವನ, ತತ್ವಾದರ್ಶಗಳು, ಚಿಂತನೆಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಲು ಈಗಲೂ ಪ್ರಸ್ತುತವೆನಿಸಿವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಗಾಂಧಿ ಜಯಂತಿ ಕಾರ್ಯಕ್ರಮ

ಮಹಾತ್ಮ ಗಾಂಧೀಜಿಯವರ 152ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಕುಷ್ಟಗಿ ಪಟ್ಟಣದ ಗಾಂಧೀ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹಾಗೂ ಲಾಲ್​​ ಬಹದ್ದೂರ್​​ ಶಾಸ್ತ್ರೀಜಿ ದೇಶ ಕಂಡ ಮಹಾನ್ ಚೇತನರು. ಅವರ ಜೀವನವೇ ನಮಗೆ ಜೀವನ ಮೌಲ್ಯಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಸ್ಥಳೀಯರು ಹಾಜರಿದ್ದರು. ನಂತರ ತಹಶೀಲ್ದಾರ್​​ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕುಷ್ಟಗಿ(ಕೊಪ್ಪಳ): ಮಹಾತ್ಮ ಗಾಂಧೀಜಿ ಹಾಗೂ ಲಾಲ್​​​ ಬಹದ್ದೂರು ಶಾಸ್ತ್ರಿ ಅವರ ಜೀವನ, ತತ್ವಾದರ್ಶಗಳು, ಚಿಂತನೆಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಲು ಈಗಲೂ ಪ್ರಸ್ತುತವೆನಿಸಿವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಗಾಂಧಿ ಜಯಂತಿ ಕಾರ್ಯಕ್ರಮ

ಮಹಾತ್ಮ ಗಾಂಧೀಜಿಯವರ 152ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಕುಷ್ಟಗಿ ಪಟ್ಟಣದ ಗಾಂಧೀ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹಾಗೂ ಲಾಲ್​​ ಬಹದ್ದೂರ್​​ ಶಾಸ್ತ್ರೀಜಿ ದೇಶ ಕಂಡ ಮಹಾನ್ ಚೇತನರು. ಅವರ ಜೀವನವೇ ನಮಗೆ ಜೀವನ ಮೌಲ್ಯಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಸ್ಥಳೀಯರು ಹಾಜರಿದ್ದರು. ನಂತರ ತಹಶೀಲ್ದಾರ್​​ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.