ETV Bharat / state

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ..

author img

By

Published : Nov 4, 2022, 6:32 PM IST

ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ದಿಢೀರ್​ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.

kn_GVT_0
ಬಹಿರ್ದೆಸೆಗೆ ಹೋದ ವ್ಯಕ್ತಿಯ ಮೇಲೆ ಕರಡಿ ದಾಳಿ.

ಗಂಗಾವತಿ: ನಿಸರ್ಗದ ಕರೆಗೆ (ಬಹಿರ್ದೆಸೆಗೆ) ಹೋದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಯಮನೂರು ಈರಪ್ಪ ಹಿರೇಬೆಣಕಲ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕರಡಿ ದಾಳಿ ಮಾಡುತ್ತಿದ್ದಂತೆಯೆ ಯುವಕ ಜೋರಾಗಿ ಕಿರುಚಾಡಿದ್ದಾನೆ. ಕೂಡಲೇ ಸಮೀಪದಲ್ಲಿದ್ದ ಜನ ಯುವಕನ ರಕ್ಷಣೆಗೆ ಧಾವಿಸಿದ್ದಾರೆ. ಜನರ ಗುಂಪು ಕಂಡು ಕರಡಿ ಬೆಟ್ಟದ ಕಡೆಗೆ ಓಡಿ ಹೋಗಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಗಾಯಗೊಂಡ ಯುವಕನನ್ನು ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಗಾವತಿ: ನಿಸರ್ಗದ ಕರೆಗೆ (ಬಹಿರ್ದೆಸೆಗೆ) ಹೋದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಯಮನೂರು ಈರಪ್ಪ ಹಿರೇಬೆಣಕಲ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕರಡಿ ದಾಳಿ ಮಾಡುತ್ತಿದ್ದಂತೆಯೆ ಯುವಕ ಜೋರಾಗಿ ಕಿರುಚಾಡಿದ್ದಾನೆ. ಕೂಡಲೇ ಸಮೀಪದಲ್ಲಿದ್ದ ಜನ ಯುವಕನ ರಕ್ಷಣೆಗೆ ಧಾವಿಸಿದ್ದಾರೆ. ಜನರ ಗುಂಪು ಕಂಡು ಕರಡಿ ಬೆಟ್ಟದ ಕಡೆಗೆ ಓಡಿ ಹೋಗಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಗಾಯಗೊಂಡ ಯುವಕನನ್ನು ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹಾಡಹಗಲೇ ಕೆ ಆರ್ ನಗರದ ಬಡಾವಣೆಗೆ ನುಗ್ಗಿ ಚಿರತೆ ದಾಳಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.