ಗಂಗಾವತಿ: ಐತಿಹಾಸಿಕ ಪ್ರದೇಶದಲ್ಲಿ ಸಿಗುವ ಪುರಾತನ ಕಾಲದ ಗೋಪುರ, ಗುಡಿ, ದೇಗುಲ, ಮಂದಿರ, ಕೋಟೆ, ಕೊತ್ತಲುಗಳ ಸಂರಕ್ಷಣೆಯ ಹೊಣೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯದ್ದು. ಆದರೆ ಇಲಾಖೆಯ ನಿರ್ಲಕ್ಷ್ಯಕ್ಕೆ ಎಷ್ಟೋ ಐತಿಹಾಸಿಕ ಸ್ಮಾರಕಗಳು ಕಣ್ಮರೆಯಾಗುತ್ತಿವೆ. ಈ ಪೈಕಿ ಹೇಮಗುಡ್ಡದ ಪುರಾತನ ರಾಮಲಿಂಗೇಶ್ವರ ದೇಗುಲವೂ ಒಂದು.
ಈ ಬಗ್ಗೆ ಗಮನ ಹರಿಸಿದ ನಗರದ ಕ್ರಿಯಾಶೀಲ ಯುವಕರನ್ನೊಳಗೊಂಡ ಚಾರಣ ಬಳಗ ಎಂಬ ತಂಡ, ದಂತ ವೈದ್ಯ ಶಿವಕುಮಾರ ಪಾಟೀಲ್ ನೇತೃತ್ವದಲ್ಲಿ ಗೋಪುರ ಸ್ವಚ್ಛಗೊಳಿಸಿದೆ.
ಯುವಕರ ಈ ಕಾರ್ಯಕ್ಕೆ ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡಿದ್ದು, ಇದೀಗ ಗೋಪುರದ ವೈಭವ ಮತ್ತೆ ಮರುಕಳಿಸಿದೆ.