ETV Bharat / state

ಕೊಪ್ಪಳ ಜಿಲ್ಲೆಯ ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ

12 ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ ಎರಡು ಶಿಲಾ ಶಾಸನಗಳು ಕನಕಗಿರಿ ತಾಲೂಕು ಕಲಿಕೇರಿ ಗ್ರಾಮದಲ್ಲಿ ಪತ್ತೆಯಾಗಿವೆ. ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಎಂದು ಸ್ಥಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿವೆ.

author img

By ETV Bharat Karnataka Team

Published : Dec 23, 2023, 7:25 PM IST

Stone inscription discovered at Kalikeri
ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ

ಗಂಗಾವತಿ(ಕೊಪ್ಪಳ):ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಎಂದು ಸ್ಥಳ ಪರಿಶೀಲನೆ ಮಾಡುತ್ತಿದ್ದ ವೇಳೆ 12 ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿರುವ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.

ಹಂಪೆ-ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ನೇತೃತ್ವದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆಂದು ಕಲಿಕೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ. ಗ್ರಾಮದ ಜೋಶಿ ಎಂಬುವರ ಜಮೀನಿನಲ್ಲಿರುವ ದೇವಾಲಯದಲ್ಲಿ ಅಸಂರಕ್ಷಿತ ಒಂದು ಶಾಸನ, ಮತ್ತೊಂದು ಗ್ರಾಮದ ರೈತ ತಳವಾರ ರಾಮಣ್ಣ ಎಂಬುವರಿಗೆ ಸೇರಿದ್ದ ಜಮೀನಿನಲ್ಲಿ ಶಿಲಾ ಶಾಸನ ಪತ್ತೆಯಾಗಿದೆ.

ಈ ವೇಳೆ, ಪುರಾತತ್ವ ಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ಮಾತನಾಡಿ, ಗ್ರಾಮದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಹುಡುಕುವ ಸಂದರ್ಭದಲ್ಲಿ ಎರಡು ಶಿಲಾ ಶಾಸನಗಳಿರುವುದು ಪತ್ತೆಯಾಗಿದೆ. ದೇವಾಲಯದಲ್ಲಿ ಅಸಂರಕ್ಷಿತವಾಗಿ ಬಿದ್ದಿದ್ದ ಒಂದು ಕಲ್ಲಿನ ಶಾಸನ ಇದು 35 ಸೆಂ.ಮೀ. ಉದ್ದ, 55 ಸೆಂ.ಮೀ. ಅಗಲವಾಗಿದೆ. ಈ ಶಾಸನವು ಹಳೆಗನ್ನಡದಲ್ಲಿದ್ದು, ಏಳು ಸಾಲುಗಳಿಂದ ಕೂಡಿದೆ. ಶಾಸನವು ಕಲ್ಯಾಣ ಚಾಲುಕ್ಯರ ಎರಡನೇ ಜಯಸಿಂಹನ ಕಾಲಾವಧಿಯದ್ದು ಆಗಿರಬಹುದು ಎಂದು ಊಹಿಸಲಾಗಿದೆ ಎಂದರು.

ಕ್ರಿ ಶ.1015 ರಿಂದ 1042ರ ಅವಧಿಯ ಕ್ರಿ.ಶ 11 ನೇ ಶತಮಾನದ ಶಾಸನವಾಗಿದೆ. ಎರಡನೇ ಜಯಸಿಂಹನು ಹತ್ತು ಮತ್ತು ಐದು, ಮತ್ತಾರು ಭೂಮಿಯನ್ನು ದಾನ ನೀಡಿದ್ದು, ಈ ಶಾಸನವನ್ನು ಹಾಳು ಮಾಡಿದ್ದಲ್ಲಿ ಗೋವುಗಳನ್ನು ಕೊಂದ ಪಾಪಕ್ಕೆ ಹೋಗುವರೆಂದು ಉಲ್ಲೇಖಿಸಲಾಗಿದೆ ಎಂದರು.

ದೇಗುಲಕ್ಕೆ ದಾನ: ಎರಡನೇ ಶಾಸನವು ತಳವಾರ ರಾಮಣ್ಣ ಎಂಬುವರ ಜಮೀನಿನಲ್ಲಿ ಸಿಕ್ಕಿದ್ದು, ಶಿಲಾಶಾಸನದ ಮೇಲ್ಬಾಗ ತುಂಡಾಗಿದೆ. ಈ ಶಾಸನವು ಕ್ರಿ.ಶ 11 12 ನೇ ಶತಮಾನದ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದೆ. ಶಾಸನದಲ್ಲಿ ಒಟ್ಟು ಒಂಬತ್ತು ಸಾಲುಗಳನ್ನು ಹೊಂದಿದೆ.
ಈ ಶಾಸನದಲ್ಲಿ ಮಾಳೇಶ್ವರ ದೇವರಿಗೆ ಒಂದು ಗಾಣ ಆರು ಮತ್ತು ಎರಡು ಮತ್ತಾರು ಭೂಮಿಯನ್ನು ದಾನ ನೀಡಲಾಗಿದೆ. ಎರಡು ಶಾಸನಗಳು ಅಪ್ರಕಟಿತ ಶಾಸನಗಳಾಗಿವೆ. ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿವೆ ಎಂದು ತಿಳಿಸಿದರು.

ಬಳಿಕ ಗ್ರಾಮದ ಹಲವೆಡೆ ಸಂಚರಿಸಿ ಅಲ್ಲಲ್ಲಿ ಪಾಳು ಬಿದ್ದಿದ್ದ ಕೆಲ ಶಾಸನಗಳನ್ನು ಗಮನಿಸಿ ಅವುಗಳನ್ನು ಛಾಯಾಚಿತ್ರಗಳನ್ನು ಪಡೆದುಕೊಂಡು ಸಂಶೋಧನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕನಕಗಿರಿ ತಾಪಂ ಇಒ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್, ಪುರಾತತ್ವ ಸಹಾಯಕ ಡಾ.ಆರ್.ಮಂಜನಾಯ್ಕ ಇತರರಿದ್ದರು.

ಇದನ್ನೂಓದಿ:ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ಗಂಗಾವತಿ(ಕೊಪ್ಪಳ):ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಎಂದು ಸ್ಥಳ ಪರಿಶೀಲನೆ ಮಾಡುತ್ತಿದ್ದ ವೇಳೆ 12 ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿರುವ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.

ಹಂಪೆ-ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ನೇತೃತ್ವದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆಂದು ಕಲಿಕೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ. ಗ್ರಾಮದ ಜೋಶಿ ಎಂಬುವರ ಜಮೀನಿನಲ್ಲಿರುವ ದೇವಾಲಯದಲ್ಲಿ ಅಸಂರಕ್ಷಿತ ಒಂದು ಶಾಸನ, ಮತ್ತೊಂದು ಗ್ರಾಮದ ರೈತ ತಳವಾರ ರಾಮಣ್ಣ ಎಂಬುವರಿಗೆ ಸೇರಿದ್ದ ಜಮೀನಿನಲ್ಲಿ ಶಿಲಾ ಶಾಸನ ಪತ್ತೆಯಾಗಿದೆ.

ಈ ವೇಳೆ, ಪುರಾತತ್ವ ಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ಮಾತನಾಡಿ, ಗ್ರಾಮದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಹುಡುಕುವ ಸಂದರ್ಭದಲ್ಲಿ ಎರಡು ಶಿಲಾ ಶಾಸನಗಳಿರುವುದು ಪತ್ತೆಯಾಗಿದೆ. ದೇವಾಲಯದಲ್ಲಿ ಅಸಂರಕ್ಷಿತವಾಗಿ ಬಿದ್ದಿದ್ದ ಒಂದು ಕಲ್ಲಿನ ಶಾಸನ ಇದು 35 ಸೆಂ.ಮೀ. ಉದ್ದ, 55 ಸೆಂ.ಮೀ. ಅಗಲವಾಗಿದೆ. ಈ ಶಾಸನವು ಹಳೆಗನ್ನಡದಲ್ಲಿದ್ದು, ಏಳು ಸಾಲುಗಳಿಂದ ಕೂಡಿದೆ. ಶಾಸನವು ಕಲ್ಯಾಣ ಚಾಲುಕ್ಯರ ಎರಡನೇ ಜಯಸಿಂಹನ ಕಾಲಾವಧಿಯದ್ದು ಆಗಿರಬಹುದು ಎಂದು ಊಹಿಸಲಾಗಿದೆ ಎಂದರು.

ಕ್ರಿ ಶ.1015 ರಿಂದ 1042ರ ಅವಧಿಯ ಕ್ರಿ.ಶ 11 ನೇ ಶತಮಾನದ ಶಾಸನವಾಗಿದೆ. ಎರಡನೇ ಜಯಸಿಂಹನು ಹತ್ತು ಮತ್ತು ಐದು, ಮತ್ತಾರು ಭೂಮಿಯನ್ನು ದಾನ ನೀಡಿದ್ದು, ಈ ಶಾಸನವನ್ನು ಹಾಳು ಮಾಡಿದ್ದಲ್ಲಿ ಗೋವುಗಳನ್ನು ಕೊಂದ ಪಾಪಕ್ಕೆ ಹೋಗುವರೆಂದು ಉಲ್ಲೇಖಿಸಲಾಗಿದೆ ಎಂದರು.

ದೇಗುಲಕ್ಕೆ ದಾನ: ಎರಡನೇ ಶಾಸನವು ತಳವಾರ ರಾಮಣ್ಣ ಎಂಬುವರ ಜಮೀನಿನಲ್ಲಿ ಸಿಕ್ಕಿದ್ದು, ಶಿಲಾಶಾಸನದ ಮೇಲ್ಬಾಗ ತುಂಡಾಗಿದೆ. ಈ ಶಾಸನವು ಕ್ರಿ.ಶ 11 12 ನೇ ಶತಮಾನದ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದೆ. ಶಾಸನದಲ್ಲಿ ಒಟ್ಟು ಒಂಬತ್ತು ಸಾಲುಗಳನ್ನು ಹೊಂದಿದೆ.
ಈ ಶಾಸನದಲ್ಲಿ ಮಾಳೇಶ್ವರ ದೇವರಿಗೆ ಒಂದು ಗಾಣ ಆರು ಮತ್ತು ಎರಡು ಮತ್ತಾರು ಭೂಮಿಯನ್ನು ದಾನ ನೀಡಲಾಗಿದೆ. ಎರಡು ಶಾಸನಗಳು ಅಪ್ರಕಟಿತ ಶಾಸನಗಳಾಗಿವೆ. ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿವೆ ಎಂದು ತಿಳಿಸಿದರು.

ಬಳಿಕ ಗ್ರಾಮದ ಹಲವೆಡೆ ಸಂಚರಿಸಿ ಅಲ್ಲಲ್ಲಿ ಪಾಳು ಬಿದ್ದಿದ್ದ ಕೆಲ ಶಾಸನಗಳನ್ನು ಗಮನಿಸಿ ಅವುಗಳನ್ನು ಛಾಯಾಚಿತ್ರಗಳನ್ನು ಪಡೆದುಕೊಂಡು ಸಂಶೋಧನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕನಕಗಿರಿ ತಾಪಂ ಇಒ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್, ಪುರಾತತ್ವ ಸಹಾಯಕ ಡಾ.ಆರ್.ಮಂಜನಾಯ್ಕ ಇತರರಿದ್ದರು.

ಇದನ್ನೂಓದಿ:ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.