ETV Bharat / state

ಮಾಲೂರಿನಲ್ಲಿ ಮುಂದುವರೆದ ಕಳ್ಳರ ಉಪಟಳ: ಸಾಯಿಬಾಬಾ ದೇವಾಲಯದ ಹುಂಡಿ ಮಾಯ - ಮಾಲೂರಿನ ಸಾಯಿಬಾಬಾ ದೇವಾಲಯದ ಹುಂಡಿ ಕಳ್ಳತನ

ಮಾಲೂರು ಪಟ್ಟಣದಲ್ಲಿ ಕಳ್ಳರು ಕೈ ಚಳಕ ಮುಂದುವರೆಸಿದ್ದು ವೈಟ್ ಗಾರ್ಡನ್ ಬಳಿ ಇರುವ ಸಾಯಿಬಾಬಾ ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ.

ದೇವಾಲಯದ ಹುಂಡಿ ಕಳ್ಳತನ
author img

By

Published : Nov 6, 2019, 9:17 PM IST

ಕೋಲಾರ: ಮಾಲೂರು ಪಟ್ಟಣದಲ್ಲಿ ಕಳ್ಳರ ಕೈಚಳಕ ಮುಂದುವರೆಸಿದ್ದು, ವೈಟ್ ಗಾರ್ಡನ್ ಬಳಿ ಇರುವ ಸಾಯಿಬಾಬಾ ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ. ಹುಂಡಿಯಲ್ಲಿದ್ದ ಹಣವನ್ನು ದೋಚಿದ ಕಳ್ಳರು, ಹುಂಡಿಯನ್ನು ಒಂದು ಕಿ.ಮೀ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುಮಾರು 25ಕ್ಕೂ ಹೆಚ್ಚು ಕಳ್ಳತನಗಳು ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಮನೆ, ಅಂಗಡಿ. ದೇವಾಲಯಗಳು ಸೇರಿದಂತೆ ಪಟ್ಟಣದಾದ್ಯಂತ ಕಳ್ಳರ ಕಾಟ ಹೆಚ್ಚಾಗಿದ್ದು, ಕಳ್ಳರ ಜಾಡನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧ ಮಾಲೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ: ಮಾಲೂರು ಪಟ್ಟಣದಲ್ಲಿ ಕಳ್ಳರ ಕೈಚಳಕ ಮುಂದುವರೆಸಿದ್ದು, ವೈಟ್ ಗಾರ್ಡನ್ ಬಳಿ ಇರುವ ಸಾಯಿಬಾಬಾ ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ. ಹುಂಡಿಯಲ್ಲಿದ್ದ ಹಣವನ್ನು ದೋಚಿದ ಕಳ್ಳರು, ಹುಂಡಿಯನ್ನು ಒಂದು ಕಿ.ಮೀ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುಮಾರು 25ಕ್ಕೂ ಹೆಚ್ಚು ಕಳ್ಳತನಗಳು ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಮನೆ, ಅಂಗಡಿ. ದೇವಾಲಯಗಳು ಸೇರಿದಂತೆ ಪಟ್ಟಣದಾದ್ಯಂತ ಕಳ್ಳರ ಕಾಟ ಹೆಚ್ಚಾಗಿದ್ದು, ಕಳ್ಳರ ಜಾಡನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧ ಮಾಲೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಕೋಲಾರ
ದಿನಾಂಕ - 06-11-19
ಸ್ಲಗ್ - ಮುಂದುವರೆದ ಕಳ್ಳತನ
ಫಾರ್ಮೆಟ್ - ಎವಿ

ಆಂಕರ್: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕಳ್ಳರು ತಮ್ಮ ಕೈಚಳಕವನ್ನ ಮತ್ತೆ ಮುಂದುವರೆಸಿದ್ದಾರೆ. ಮನೆ, ಅಂಗಡಿಗಳು ಸೇರಿದಂತೆ ಕಳೆದೊಂದು ತಿಂಗಳಿನಿಂದ ಸುಮಾರು 25 ಕ್ಕೂ ಹೆಚ್ಚು ಕಳ್ಳತನಗಳು ಮಾಲೂರು ಪಟ್ಟಣದಲ್ಲಿ ಅಗಿದ್ದು, ಸ್ಥಳೀಯರು ಅತಂಕಕ್ಕೊಳಗಾಗಿದ್ದಾರೆ.

Body:ಮನೆ, ದೇವಾಲಯಗಳು, ಅಂಗಡಿಗಳು ಸೇರಿದಂತೆ ಮಾಲೂರು ಪಟ್ಟಣದಾದ್ಯಂತ ಕಳ್ಳರ ಕಾಟ ಹೆಚ್ಚಾಗಿದೆ. ಅದ್ರಂತೆ ನಿನ್ನೆ ಮಾಲೂರು ಪಟ್ಟಣದ ವೈಟ್ ಗಾರ್ಡನ್ ಬಳಿ ಇರುವಂತಹ ಸಾಯಿ ಬಾಬಾ ದೇವಾಲಯದಲ್ಲಿ ಹುಂಡಿಯನ್ನ ಕದ್ದಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಹುಂಡಿಯಲ್ಲಿದ್ದ ಹಣವನ್ನ ದೋಚಿರುವ ಕಳ್ಳರು ಹುಂಡಿಯನ್ನ ಒಂದು ಕಿಲೋಮೀಟರ್ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಸುಮಾರು 25 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಕಂಡು ಬಂದಿದ್ದು, ಕಳ್ಳರ ಜಾಡನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಸರಣಿಗಳ್ಳತನದಿಂದ ಬೆಚ್ಚಿ ಬಿದ್ದಿರುವ ಮಾಲೂರಿನ ಜನ ಪೊಲೀಸರ ವಿರುದ್ದ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.

Conclusion:ಒಟ್ನಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಕೋಲಾರಮ್ಮ ಪಡೆ, ಪೊಲೀಸ್ ಐ ಎಂಬ ತಂತ್ರಜ್ಞಾನವನ್ನ ಜಾರಿಗೆ ತಂದಿದ್ದರು, ಖತರ್ನಾಕ್ ಕಳ್ಳರ ಸರಣಿಗಳ್ಳತನಗಳಿಗೆ ಬ್ರೇಕ್ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.