ETV Bharat / bharat

ತ್ರೀ-ಇನ್-ಒನ್ ಹೈಬ್ರಿಡ್ ಬೈಸಿಕಲ್ ವಿನ್ಯಾಸ: ಅನಾರೋಗ್ಯದ ನಡುವೆ ನಾವೀನ್ಯತೆ ತೋರಿದ ಬಾಲಕನ ಸಾಧನೆಗೆ ಜನರು ಫಿದಾ - BICYCLE INNOVATION

ಬಾಲಕ ಗಂಗನ್ ಚಂದ್ರ ಅವರ ಬೈಸಿಕಲ್ ನಾವೀನ್ಯತೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

BICYCLE INNOVATION
ಬಾಲಕನ ತ್ರೀ-ಇನ್-ಒನ್ ಹೈಬ್ರಿಡ್ ಬೈಸಿಕಲ್ ವಿನ್ಯಾಸ (ETV Bharat)
author img

By ETV Bharat Karnataka Team

Published : Feb 3, 2025, 2:08 PM IST

Updated : Feb 3, 2025, 2:20 PM IST

ನಾಗರ್ಕುರ್ನೂಲ್ (ತೆಲಂಗಾಣ): ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ಅನ್ನು ವಿನ್ಯಾಸಗೊಳಿಸಿರುವ ನಾಗರಕುರ್ನೂಲ್ ಜಿಲ್ಲೆಯ ನಲ್ಲಮಲ ಪ್ರದೇಶದ 9ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಸಿಎಂ ರೇವಂತ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಗಗನ್​ ಚಂದ್ರ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿ.

ಬಾಲ್ಯದಿಂದಲೂ ಕಾಡುತ್ತಿದ್ದ ತನ್ನ ಅನಾರೋಗ್ಯವನ್ನು ಲೆಕ್ಕಿಸಿದೇ ಅತ್ಯಾಧುನಿಕ ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ವಿನ್ಯಾಸಗೊಳಿಸುವ ಮೂಲಕ ಗಗನ್​ ಚಂದ್ರ ಗಮನ ಸೆಳೆದಿದ್ದಾನೆ. ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತದ ಮಟ್ಟದ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ಈ ವಿದ್ಯಾರ್ಥಿ ಮಾಡಿದ ಆವಿಷ್ಕಾರ ಮೂರನೇ ಸ್ಥಾನ ಪಡೆದಿದ್ದಲ್ಲದೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.

ಬಾಲ್ಯದಿಂದಲೂ ಆರೋಗ್ಯ ಸಮಸ್ಯೆ: ವಿದ್ಯಾರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ರೇವಂತ್ ರೆಡ್ಡಿ, ವಿದ್ಯಾರ್ಥಿ ಗಗನ್​ ಚಂದ್ರ ಅವರನ್ನು ಅಭಿನಂದಿಸಿದ್ದಾರೆ. ನಾಗರಕುರ್ನೂಲ್ ಜಿಲ್ಲೆಯ ಮಚಿನಪಲ್ಲಿಯ ಸುವರ್ಣ ಮತ್ತು ಭಾಸ್ಕರ್ ದಂಪತಿಯ ಪುತ್ರನಾಗಿರುವ ಗಗನ್​ ಚಂದ್ರನಿಗೆ ಜನಿಸಿದ ಕೆಲವು ದಿನಗಳಲ್ಲೇ ನ್ಯುಮೋನಿಯಾ ಅಪ್ಪಳಿಸಿತ್ತು. ಸುಮಾರು ಏಳು ವರ್ಷಗಳ ಕಾಲ ನ್ಯುಮೋನಿಯಾದ ವಿರುದ್ಧ ಹೋರಾಡುತ್ತಲೇ ಬಂದಿದ್ದನು. ಈ ಅನಾರೋಗ್ಯದ ಸಮಸ್ಯೆಯ ಹೊರತು ತನ್ನ ಆವಿಷ್ಕಾರವನ್ನು ಮುಂದುವರೆಸಿದ್ದನು. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ವಿದ್ಯಾರ್ಥಿಯೂ ಆಗಿರುವ ಗಗನ್​ ಚಂದ್ರ, ಸಾಮಾನ್ಯ ಸೈಕಲ್‌ನಂತೆ ಪೆಡಲ್ ಮಾಡಬಹುದಾದ, ಸೌರಶಕ್ತಿಯಿಂದ ಚಾಲಿಸಬಲ್ಲ ಜೊತೆಗೆ ವಿದ್ಯುತ್ ಚಾರ್ಜ್ ಮಾಡಬಹುದಾದ ವಿಶಿಷ್ಟ ಸೈಕಲ್ ವಿನ್ಯಾಸಗೊಳಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾನೆ.

3 ರೀತಿಯಲ್ಲಿ ಬಳಸಬಹುದಾದ ಆವಿಷ್ಕಾರ: ಶಿಕ್ಷಕರ ಸಹಾಯದಿಂದ ಹೈಬ್ರಿಡ್ ಸೈಕಲ್ ತಯಾರಿಸಿದ ಗಗನ್​ ಚಂದ್ರ, ಅದಕ್ಕೆ ಬೇಕಾದ ಸೌರ ಫಲಕ, ಬ್ಯಾಟರಿ, ವಿದ್ಯುತ್ ಹೊಂದಾಣಿಕೆಗಾಗಿ ವೈಪರ್ ಮೋಟಾರ್ (ಬೂಸ್ಟರ್), ಸೆಲ್‌ಫೋನ್ ಡಿಸ್ಪ್ಲೇ ಮತ್ತು ಜಿಪಿಎಸ್ ಅಳವಡಿಸಿದ್ದಾನೆ. ಒಂದು ಬಾರಿ ಸೌರಶಕ್ತಿಯಿಂದ ಚಾರ್ಜ್​ ಆದರೆ 30 ಕಿ.ಮೀ. ಪ್ರಯಾಣಿಬಹುದಾಗಿದೆ. ಸೂರ್ಯನ ಬೆಳಕು ಲಭ್ಯವಿಲ್ಲದಿದ್ದಾಗ, ಅದನ್ನು ಎಲೆಕ್ಟ್ರಿಕ್ ಬೈಕ್‌ನಂತೆ ಚಾರ್ಜ್ ಮಾಡಬಹುದು ಮತ್ತು ದ್ವಿಚಕ್ರ ವಾಹನದಂತೆ ಓಡಿಸಬಹುದು. ನೀವು ಸಾಮಾನ್ಯ ಸೈಕಲ್‌ನಂತೆ ಇದನ್ನು ಸವಾರಿ ಕೂಡ ಮಾಡಬಹುದಾಗಿದೆ.

ಸಿಎಂ ಅಭಿನಂದನೆ: ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿ ಗಗನ್​ ಚಂದ್ರ ಅವರ ಆವಿಷ್ಕಾರವು ಮೂರನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ವಿದ್ಯಾರ್ಥಿ ಕಥೆ ಇಂದು ನನಗೆ ಸ್ಪೂರ್ತಿ ನೀಡಿದೆ. ಜೊತೆಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡಲ್ಲದಾಗಿದೆ. ಬ್ಯಾಟರಿ ಮತ್ತು ಪೆಟ್ರೋಲ್ ಬ್ಯಾಕಪ್ ಹೊಂದಿರುವ ಸೌರಶಕ್ತಿ ಚಾಲಿತ ಹೈಬ್ರಿಡ್ 3-ಇನ್-1 ಬೈಸಿಕಲ್‌ನ ಅವನ ವಿನ್ಯಾಸ ಮತ್ತು ತಯಾರಿಕೆಯು ಅದ್ಭುತ ಆವಿಷ್ಕಾರವಾಗಿದೆ. ನಾನು ಅವನನ್ನು ಪೂರ್ಣ ಹೃದಯದಿಂದ ಅಭಿನಂದಿಸುತ್ತೇನೆ. ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಮತ್ತು ಹೆಚ್ಚಿನ ನಾವೀನ್ಯತೆಗಳಿಗಾಗಿ ನಾವು ಅವನಿಗೆ ಬೆಂಬಲ ನೀಡುತ್ತೇವೆ ಎಂದು ವಿದ್ಯಾರ್ಥಿ ಗಗನ್​ ಚಂದ್ರ ಅವರನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ನೀರಿನಿಂದ ಕ್ಯಾನ್ಸರ್​ಕಾರಕ ಬಣ್ಣ ತೆಗೆದು ಹಾಕುವ ತಂತ್ರಜ್ಞಾನ ಆವಿಷ್ಕರಿಸಿದ ಎನ್​ಐಟಿ ರೂರ್ಕೆಲಾ - WASTE WATER TREATMENT

ನಾಗರ್ಕುರ್ನೂಲ್ (ತೆಲಂಗಾಣ): ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ಅನ್ನು ವಿನ್ಯಾಸಗೊಳಿಸಿರುವ ನಾಗರಕುರ್ನೂಲ್ ಜಿಲ್ಲೆಯ ನಲ್ಲಮಲ ಪ್ರದೇಶದ 9ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಸಿಎಂ ರೇವಂತ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಗಗನ್​ ಚಂದ್ರ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿ.

ಬಾಲ್ಯದಿಂದಲೂ ಕಾಡುತ್ತಿದ್ದ ತನ್ನ ಅನಾರೋಗ್ಯವನ್ನು ಲೆಕ್ಕಿಸಿದೇ ಅತ್ಯಾಧುನಿಕ ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ವಿನ್ಯಾಸಗೊಳಿಸುವ ಮೂಲಕ ಗಗನ್​ ಚಂದ್ರ ಗಮನ ಸೆಳೆದಿದ್ದಾನೆ. ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತದ ಮಟ್ಟದ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ಈ ವಿದ್ಯಾರ್ಥಿ ಮಾಡಿದ ಆವಿಷ್ಕಾರ ಮೂರನೇ ಸ್ಥಾನ ಪಡೆದಿದ್ದಲ್ಲದೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.

ಬಾಲ್ಯದಿಂದಲೂ ಆರೋಗ್ಯ ಸಮಸ್ಯೆ: ವಿದ್ಯಾರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ರೇವಂತ್ ರೆಡ್ಡಿ, ವಿದ್ಯಾರ್ಥಿ ಗಗನ್​ ಚಂದ್ರ ಅವರನ್ನು ಅಭಿನಂದಿಸಿದ್ದಾರೆ. ನಾಗರಕುರ್ನೂಲ್ ಜಿಲ್ಲೆಯ ಮಚಿನಪಲ್ಲಿಯ ಸುವರ್ಣ ಮತ್ತು ಭಾಸ್ಕರ್ ದಂಪತಿಯ ಪುತ್ರನಾಗಿರುವ ಗಗನ್​ ಚಂದ್ರನಿಗೆ ಜನಿಸಿದ ಕೆಲವು ದಿನಗಳಲ್ಲೇ ನ್ಯುಮೋನಿಯಾ ಅಪ್ಪಳಿಸಿತ್ತು. ಸುಮಾರು ಏಳು ವರ್ಷಗಳ ಕಾಲ ನ್ಯುಮೋನಿಯಾದ ವಿರುದ್ಧ ಹೋರಾಡುತ್ತಲೇ ಬಂದಿದ್ದನು. ಈ ಅನಾರೋಗ್ಯದ ಸಮಸ್ಯೆಯ ಹೊರತು ತನ್ನ ಆವಿಷ್ಕಾರವನ್ನು ಮುಂದುವರೆಸಿದ್ದನು. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ವಿದ್ಯಾರ್ಥಿಯೂ ಆಗಿರುವ ಗಗನ್​ ಚಂದ್ರ, ಸಾಮಾನ್ಯ ಸೈಕಲ್‌ನಂತೆ ಪೆಡಲ್ ಮಾಡಬಹುದಾದ, ಸೌರಶಕ್ತಿಯಿಂದ ಚಾಲಿಸಬಲ್ಲ ಜೊತೆಗೆ ವಿದ್ಯುತ್ ಚಾರ್ಜ್ ಮಾಡಬಹುದಾದ ವಿಶಿಷ್ಟ ಸೈಕಲ್ ವಿನ್ಯಾಸಗೊಳಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾನೆ.

3 ರೀತಿಯಲ್ಲಿ ಬಳಸಬಹುದಾದ ಆವಿಷ್ಕಾರ: ಶಿಕ್ಷಕರ ಸಹಾಯದಿಂದ ಹೈಬ್ರಿಡ್ ಸೈಕಲ್ ತಯಾರಿಸಿದ ಗಗನ್​ ಚಂದ್ರ, ಅದಕ್ಕೆ ಬೇಕಾದ ಸೌರ ಫಲಕ, ಬ್ಯಾಟರಿ, ವಿದ್ಯುತ್ ಹೊಂದಾಣಿಕೆಗಾಗಿ ವೈಪರ್ ಮೋಟಾರ್ (ಬೂಸ್ಟರ್), ಸೆಲ್‌ಫೋನ್ ಡಿಸ್ಪ್ಲೇ ಮತ್ತು ಜಿಪಿಎಸ್ ಅಳವಡಿಸಿದ್ದಾನೆ. ಒಂದು ಬಾರಿ ಸೌರಶಕ್ತಿಯಿಂದ ಚಾರ್ಜ್​ ಆದರೆ 30 ಕಿ.ಮೀ. ಪ್ರಯಾಣಿಬಹುದಾಗಿದೆ. ಸೂರ್ಯನ ಬೆಳಕು ಲಭ್ಯವಿಲ್ಲದಿದ್ದಾಗ, ಅದನ್ನು ಎಲೆಕ್ಟ್ರಿಕ್ ಬೈಕ್‌ನಂತೆ ಚಾರ್ಜ್ ಮಾಡಬಹುದು ಮತ್ತು ದ್ವಿಚಕ್ರ ವಾಹನದಂತೆ ಓಡಿಸಬಹುದು. ನೀವು ಸಾಮಾನ್ಯ ಸೈಕಲ್‌ನಂತೆ ಇದನ್ನು ಸವಾರಿ ಕೂಡ ಮಾಡಬಹುದಾಗಿದೆ.

ಸಿಎಂ ಅಭಿನಂದನೆ: ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿ ಗಗನ್​ ಚಂದ್ರ ಅವರ ಆವಿಷ್ಕಾರವು ಮೂರನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ವಿದ್ಯಾರ್ಥಿ ಕಥೆ ಇಂದು ನನಗೆ ಸ್ಪೂರ್ತಿ ನೀಡಿದೆ. ಜೊತೆಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡಲ್ಲದಾಗಿದೆ. ಬ್ಯಾಟರಿ ಮತ್ತು ಪೆಟ್ರೋಲ್ ಬ್ಯಾಕಪ್ ಹೊಂದಿರುವ ಸೌರಶಕ್ತಿ ಚಾಲಿತ ಹೈಬ್ರಿಡ್ 3-ಇನ್-1 ಬೈಸಿಕಲ್‌ನ ಅವನ ವಿನ್ಯಾಸ ಮತ್ತು ತಯಾರಿಕೆಯು ಅದ್ಭುತ ಆವಿಷ್ಕಾರವಾಗಿದೆ. ನಾನು ಅವನನ್ನು ಪೂರ್ಣ ಹೃದಯದಿಂದ ಅಭಿನಂದಿಸುತ್ತೇನೆ. ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಮತ್ತು ಹೆಚ್ಚಿನ ನಾವೀನ್ಯತೆಗಳಿಗಾಗಿ ನಾವು ಅವನಿಗೆ ಬೆಂಬಲ ನೀಡುತ್ತೇವೆ ಎಂದು ವಿದ್ಯಾರ್ಥಿ ಗಗನ್​ ಚಂದ್ರ ಅವರನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ನೀರಿನಿಂದ ಕ್ಯಾನ್ಸರ್​ಕಾರಕ ಬಣ್ಣ ತೆಗೆದು ಹಾಕುವ ತಂತ್ರಜ್ಞಾನ ಆವಿಷ್ಕರಿಸಿದ ಎನ್​ಐಟಿ ರೂರ್ಕೆಲಾ - WASTE WATER TREATMENT

Last Updated : Feb 3, 2025, 2:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.