ETV Bharat / state

ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಯರು ಸಾವು.. ಕೋಲಾರದಲ್ಲಿ ದುರಂತ

author img

By

Published : Jul 11, 2021, 9:43 AM IST

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

Sister died by fell down into Farm pit
ಸಹೋದರಿಯರು ಸಾವು

ಕೋಲಾರ : ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಮೃತಪಟ್ಟಿರುವ ಘಟನೆ ಕೋಲಾರ ಹೊರವಲಯದ ಸುಂದರಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಲ್ಲು ತರಲು ಹೋಗಿದ್ದ ಬಾಲಕಿಯರು ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕೋಡಿಗೆನಹಳ್ಳಿ ಗ್ರಾಮದ ರಾಜೇಂದ್ರ, ಸುಮಿತ್ರಮ್ಮ ದಂಪತಿಯ ಮಕ್ಕಳಾದ ಅನುಷ್ಯ (12) ಮತ್ತು ವೆನ್ನಲ್ಲ (10) ಮೃತ ಹೆಣ್ಣುಮಕ್ಕಳು.

Sister died by fell down into Farm pit
ಮೃತ ಸಹೋದರಿಯರು

ಓದಿ : ತಂದೆಯಿಂದಲೇ ಲೈಂಗಿಕ ಕಿರುಕುಳ ಆರೋಪ: ಮನೆ ಬಿಟ್ಟಿದ್ದ ಕಂದಮ್ಮ ಚೈಲ್ಡ್ ಕೇರ್ ಹೋಂನಲ್ಲಿ ಸೇಫ್

ಮೃತ ಸಹೋದರಿಯರು ತಮ್ಮ ಮನೆಯ ಸೀಮೆ ಹಸುಗಳಿಗೆ ಹುಲ್ಲು ತರಲು ಜಮೀನತ್ತ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ದುರಂತ ಸಂಭವಿಸಿದೆ. ಬಾಲಕಿಯರ ಮೃತದೇಹವನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ : ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಮೃತಪಟ್ಟಿರುವ ಘಟನೆ ಕೋಲಾರ ಹೊರವಲಯದ ಸುಂದರಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಲ್ಲು ತರಲು ಹೋಗಿದ್ದ ಬಾಲಕಿಯರು ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕೋಡಿಗೆನಹಳ್ಳಿ ಗ್ರಾಮದ ರಾಜೇಂದ್ರ, ಸುಮಿತ್ರಮ್ಮ ದಂಪತಿಯ ಮಕ್ಕಳಾದ ಅನುಷ್ಯ (12) ಮತ್ತು ವೆನ್ನಲ್ಲ (10) ಮೃತ ಹೆಣ್ಣುಮಕ್ಕಳು.

Sister died by fell down into Farm pit
ಮೃತ ಸಹೋದರಿಯರು

ಓದಿ : ತಂದೆಯಿಂದಲೇ ಲೈಂಗಿಕ ಕಿರುಕುಳ ಆರೋಪ: ಮನೆ ಬಿಟ್ಟಿದ್ದ ಕಂದಮ್ಮ ಚೈಲ್ಡ್ ಕೇರ್ ಹೋಂನಲ್ಲಿ ಸೇಫ್

ಮೃತ ಸಹೋದರಿಯರು ತಮ್ಮ ಮನೆಯ ಸೀಮೆ ಹಸುಗಳಿಗೆ ಹುಲ್ಲು ತರಲು ಜಮೀನತ್ತ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ದುರಂತ ಸಂಭವಿಸಿದೆ. ಬಾಲಕಿಯರ ಮೃತದೇಹವನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.