ETV Bharat / state

ಬರದ ಕಾರ್ಮೋಡ: ಬೇಸಿಗೆ ರಜೆಯಲ್ಲೂ ಕೋಲಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ

author img

By

Published : May 12, 2019, 2:05 PM IST

ಮಳೆ-ಬೆಳೆಯಿಲ್ಲದೆ ಬರಡಾಗಿವೆ ಕೋಲಾರ ಜಿಲ್ಲೆಯ ಆರು ತಾಲೂಕುಗಳು- ಜಿಲ್ಲೆಯ ಬಡಮಕ್ಕಳ ಆಟ- ಪಾಠಕ್ಕೆ ತಡೆಯಾಗದಂತೆ ಎಲ್ಲಾ ಮಕ್ಕಳಿಗೆ ಜಿಲ್ಲಾಡಳಿತದಿಂದ ಬೇಸಿಗೆ ರಜೆಯಲ್ಲೂ ಬಿಸಿ ಊಟದ ವ್ಯವಸ್ಥೆ

ಬೇಸಿಗೆ ರಜೆಯಲ್ಲೂ ಕೋಲಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ

ಕೋಲಾರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಪರಿಣಾಮ, ಬಡ ವರ್ಗದ ಕುಟುಂಬಗಳಿಗೆ ಆಹಾರ ತಯಾರಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಕೂಡಾ ಶಾಲೆಗೆ ಬರುವ ಮಕ್ಕಳಿಗೆ ಎಂದಿನಂತೆ ಬಿಸಿಯೂಟ ನೀಡಲಾಗುತ್ತಿದೆ.

ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಊರಲ್ಲೇ ತಮ್ಮ ತಂದೆ- ತಾಯಿ ಜೊತೆಗೆ ಇರುವ ಮಕ್ಕಳು ಊಟದ ಸಮಯಕ್ಕೂ ಸ್ವಲ್ಪ ಮುಂಚಿತವಾಗಿ ಶಾಲೆಗೆ ಬಂದು ಆಟವಾಡಿಕೊಂಡು ನಂತರ ಊಟ ಮಾಡಿ ಹೋಗುತ್ತಾರೆ. ಅಷ್ಟೇ ಅಲ್ಲ, ಬೇರೆ ಊರುಗಳಿಂದ ಬೇಸಿಗೆ ರಜೆಗೆಂದು ತಮ್ಮ ಸಂಬಂಧಿಕರ ಮಕ್ಕಳು ಬಂದ್ರೂ ಕೂಡಾ ಶಾಲೆಗಳಲ್ಲಿ ಊಟ ಹಾಕಲಾಗುತ್ತಿದೆ.

ಬೇಸಿಗೆ ರಜೆಯಲ್ಲೂ ಕೋಲಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ

ಬರದ ನಾಡು ಕೋಲಾರದಲ್ಲಿ ಕಳೆದ ವರ್ಷ ಒಂದು ಹನಿ ಮಳೆಯಾಗಿಲ್ಲ. ಹೀಗಾಗಿ ಬೆಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಇದೆ. ಮಕ್ಕಳು ಹಾಗೂ ದೊಡ್ಡವರು ಬೇರೆಡೆಗೆ ವಲಸೆ ಹೋಗದಿರಲಿ ಅನ್ನೋ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ದೊಡ್ಡವರಿಗೆ ಕೆಲಸ ನೀಡಲಾಗುತ್ತಿದೆ.

ಇನ್ನು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಜೆಯ ಮಜಾಗೆ ಅಡ್ಡಿ ಆಗಬಾರದು. ಮಕ್ಕಳು ಬೇರೆ ಊರುಗಳಿಗೆ ಹೋಗದೆ ಬಿಸಿಯೂಟದ ಕಾರಣಕ್ಕೆ ಇಲ್ಲೇ ಉಳಿಯಬಾರದೆಂದು, ಮಕ್ಕಳು ಜಿಲ್ಲೆಯ ಯಾವುದೇ ಊರಿನ ಯಾವುದೇ ಶಾಲೆಗೆ ಹೋದರೂ, ಬಿಸಿಯೂಟ ನೀಡುವಂತೆ ಸೂಚನೆ ನೀಡಲಾಗಿದೆ. ಬೇಸಿಗೆ ಬಿಸಿಯೂಟದ ಹೆಸರಲ್ಲಿ ಅವ್ಯವಹಾರಕ್ಕೂ ಕೈ ಹಾಕದಂತೆ ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳಲು ವಿಶೇಷವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಒಟ್ಟಾರೆ ಈ ವರ್ಷದ ಬರಗಾಲ, ಜನ-ಜಾನುವಾರುಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಇಂಥ ಬರ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಅನಾನುಕೂಲವಾಗದಂತೆ ಬೇಸಿಗೆಯ ಬಿಸಿಯೂಟ ನೀಡುವ ಮೂಲಕ ಬರಗಾಲದಲ್ಲಿ ಶಾಲಾ ಮಕ್ಕಳ ಹಸಿವು ನೀಗಿಸುತ್ತಿರುವುದು ಒಳ್ಳೆಯ ಕೆಲಸ. ಇದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋಲಾರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಪರಿಣಾಮ, ಬಡ ವರ್ಗದ ಕುಟುಂಬಗಳಿಗೆ ಆಹಾರ ತಯಾರಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಕೂಡಾ ಶಾಲೆಗೆ ಬರುವ ಮಕ್ಕಳಿಗೆ ಎಂದಿನಂತೆ ಬಿಸಿಯೂಟ ನೀಡಲಾಗುತ್ತಿದೆ.

ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಊರಲ್ಲೇ ತಮ್ಮ ತಂದೆ- ತಾಯಿ ಜೊತೆಗೆ ಇರುವ ಮಕ್ಕಳು ಊಟದ ಸಮಯಕ್ಕೂ ಸ್ವಲ್ಪ ಮುಂಚಿತವಾಗಿ ಶಾಲೆಗೆ ಬಂದು ಆಟವಾಡಿಕೊಂಡು ನಂತರ ಊಟ ಮಾಡಿ ಹೋಗುತ್ತಾರೆ. ಅಷ್ಟೇ ಅಲ್ಲ, ಬೇರೆ ಊರುಗಳಿಂದ ಬೇಸಿಗೆ ರಜೆಗೆಂದು ತಮ್ಮ ಸಂಬಂಧಿಕರ ಮಕ್ಕಳು ಬಂದ್ರೂ ಕೂಡಾ ಶಾಲೆಗಳಲ್ಲಿ ಊಟ ಹಾಕಲಾಗುತ್ತಿದೆ.

ಬೇಸಿಗೆ ರಜೆಯಲ್ಲೂ ಕೋಲಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ

ಬರದ ನಾಡು ಕೋಲಾರದಲ್ಲಿ ಕಳೆದ ವರ್ಷ ಒಂದು ಹನಿ ಮಳೆಯಾಗಿಲ್ಲ. ಹೀಗಾಗಿ ಬೆಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಇದೆ. ಮಕ್ಕಳು ಹಾಗೂ ದೊಡ್ಡವರು ಬೇರೆಡೆಗೆ ವಲಸೆ ಹೋಗದಿರಲಿ ಅನ್ನೋ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ದೊಡ್ಡವರಿಗೆ ಕೆಲಸ ನೀಡಲಾಗುತ್ತಿದೆ.

ಇನ್ನು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಜೆಯ ಮಜಾಗೆ ಅಡ್ಡಿ ಆಗಬಾರದು. ಮಕ್ಕಳು ಬೇರೆ ಊರುಗಳಿಗೆ ಹೋಗದೆ ಬಿಸಿಯೂಟದ ಕಾರಣಕ್ಕೆ ಇಲ್ಲೇ ಉಳಿಯಬಾರದೆಂದು, ಮಕ್ಕಳು ಜಿಲ್ಲೆಯ ಯಾವುದೇ ಊರಿನ ಯಾವುದೇ ಶಾಲೆಗೆ ಹೋದರೂ, ಬಿಸಿಯೂಟ ನೀಡುವಂತೆ ಸೂಚನೆ ನೀಡಲಾಗಿದೆ. ಬೇಸಿಗೆ ಬಿಸಿಯೂಟದ ಹೆಸರಲ್ಲಿ ಅವ್ಯವಹಾರಕ್ಕೂ ಕೈ ಹಾಕದಂತೆ ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳಲು ವಿಶೇಷವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಒಟ್ಟಾರೆ ಈ ವರ್ಷದ ಬರಗಾಲ, ಜನ-ಜಾನುವಾರುಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಇಂಥ ಬರ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಅನಾನುಕೂಲವಾಗದಂತೆ ಬೇಸಿಗೆಯ ಬಿಸಿಯೂಟ ನೀಡುವ ಮೂಲಕ ಬರಗಾಲದಲ್ಲಿ ಶಾಲಾ ಮಕ್ಕಳ ಹಸಿವು ನೀಗಿಸುತ್ತಿರುವುದು ಒಳ್ಳೆಯ ಕೆಲಸ. ಇದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಆಂಕರ್: ಅದು ಮಳೆಯಿಲ್ಲದೆ ಬರಡಾಗಿರುವ ಬರಗಾಲದ ಜಿಲ್ಲೆ, ಜಿಲ್ಲೆಯ ಆರೂ ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಡಮಕ್ಕಳ ಆಟ ಪಾಠಕ್ಕೆ ತಡೆಯಾಗದಂತೆ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಜಿಲ್ಲಾಡಳಿತ ಬೇಸಿಗೆ ರಜೆಯ ವಿಶೇಷ ಊಟ ನೀಡುತ್ತಿದೆ.. ಈ ಕುರಿತ ಸ್ಟೋರಿ ಇಲ್ಲಿದೆ..
Body:ಅನ್ನಪೂರ್ಣ ಅಡುಗೆ ಕೋಣೆಯಲ್ಲಿ ತಯಾರಾಗುತ್ತಿರುವ ಬಿಸಿ ಬಿಸಿ ಊಟ,ಶಾಲಾ ಆವರಣದಲ್ಲಿ ಆಟವಾಡುತ್ತಿರುವ ಮಕ್ಕಳು, ಮತ್ತೊಂದೆಡೆ ಬಿಸಿಯೂಟ ಸವಿಯುತ್ತಿರುವ ಶಾಲಾ ಮಕ್ಕಳು ಇದೆಲ್ಲಾ ಕಂಡು ಬಂದಿದ್ದು ಕೋಲಾರದಲ್ಲಿ.ಅರೆ ಇದೇನು ಈಗ ಬೇಸಿಗೆ ರಜೆಯಲ್ವಾ ಶಾಲೆಯಲ್ಲಿ ಬಿಸಿಯೂಟ ಯಾರು ಕೊಡ್ತಾರೆ ಅಂದುಕೊಂಡ್ರಾ, ಹೌದು ಈಗ ಕೋಲಾರ ಜಿಲ್ಲೆಯಲ್ಲಿ ಬರಗಾಲ ಆರವರಿಸಿರುವ ಪರಿಣಾಮ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಕೂಡಾ ಶಾಲೆಗೆ ಬರುವ ಮಕ್ಕಳಿಗೆ ಎಂದಿನಂತೆ ಬಿಸಿಯೂಟ ನೀಡಲಾಗುತ್ತಿದೆ, ಅದರಲ್ಲೂ ಬೇಸಿಗೆ ರಜೆಯ ವಿಶೇಷ ಬಿಸಿಯೂಟ ನೀಡಲಾಗುತ್ತಿದೆ, ಶಾಲೆ ರಜೆಇರುವ ಹಿನ್ನೆಲೆ ಊರಲ್ಲೇ ತಮ್ಮ ತಂದೆ ತಾಯಿ ಜೊತೆಗೆ ಇರುವ ಮಕ್ಕಳು ಊಟದ ಸಮಯಕ್ಕೂ ಸ್ವಲ್ಪ ಮುಂಚಿತವಾಗಿ ಶಾಲೆಗೆ ಬಂದು ಆಟವಾಡಿಕೊಂಡು ನಂತರ ಊಟ ಮಾಡಿ ಹೋಗುತ್ತಾರೆ. ಅಷ್ಟೇ ಬೇರೆ ಊರುಗಳಿಂದ ಬೇಸಿಗೆ ರಜೆಗೆಂದು ತಮ್ಮ ಸಂಬಂದಿಕರ ಮಕ್ಕಳು ಬಂದ್ರೂ ಕೂಡಾ ಶಾಲೆಯಲ್ಲಿ ಊಟ ಹಾಕಲಾಗುತ್ತಿದೆ.

ಬೈಟ್​;1 ಶಂಕರಯ್ಯ (ಶಿಕ್ಷಕರು)
ಬೈಟ್​;2 ಸುಚಿತ್ರ (ವಿದ್ಯಾರ್ಥಿನಿ)

ಬರದ ನಾಡು ಕೋಲಾರದಲ್ಲಿ ಕಳೆದ ವರ್ಷ ಒಂದು ಹನಿ ಮಳೆಯಾಗಿಲ್ಲ, ಅಶ್ವಿನಿ, ಕೃತಿಕಾ, ಪುಬ್ಬಾ,ಆಶ್ಲೇಷ ಯಾವ ಮಳೆಯೂ ಒಂದು ಹನಿ ಬಾರದೆ ಜಿಲ್ಲೆ ಸಂಪೂರ್ಣ ಬರಗಾಲಕ್ಕೆ ತುತ್ತಾಗಿತ್ತು ಪರಿಣಾಮ ಬೆಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಇದೆ ಹಾಗಾಗಿ ಮಕ್ಕಳು ಹಾಗೂ ಜನರು ಬೇರೆಡೆಗೆ ವಲಸೆ ಹೋಗದಿರಲಿ ಅನ್ನೋ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗಿದೆ, ಅಷ್ಟೇ ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆಲಸ ನೀಡಲಾಗುತ್ತಿದೆ. ಇನ್ನು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಜೆಯ ಮಜಾ ಮಿಸ್​ ಆಗಬಾರದು, ಮಕ್ಕಳು ಬೇರೆ ಊರುಗಳಿಗೆ ಹೋಗದೆ ಬಿಸಿಯೂಟದ ಕಾರಣಕ್ಕೆ ಇಲ್ಲೇ ಉಳಿಯಬಾರದೆಂದು ಮಕ್ಕಳು ಜಿಲ್ಲೆಯ ಯಾವುದೇ ಊರಿನ ಯಾವುದೇ ಶಾಲೆಗೆ ಹೋದ್ರು ಬಿಸಿಯೂಟ ನೀಡುವಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲಾ ಬೇಸಿಗೆ ಬಿಡಿಯೂಟದ ಹೆಸರಲ್ಲಿ ಅವ್ಯವಹಾರಕ್ಕೂ ಕೈ ಹಾಕದಂತೆ ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳಲು ವಿಶೇಷವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಬೈಟ್​;3 ಜಗದೀಶ್​ (ಸಿಇಓ, ಜಿಲ್ಲಾಪಂಚಾಯ್ತಿ ಕೋಲಾರ)Conclusion:ಒಟ್ಟಾರೆ ಈವರ್ಷದ ಬರಗಾಲ ಜನ ಜಾನುವಾರುಗಳನ್ನು ಇನ್ನಿಲ್ಲದಂತೆ ಕಾಡಿಸಿದ್ದು, ಇಂಥ ಬರ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಅನಾನುಕೂಲವಾಗದಂತೆ ಬೇಸಿಗೆಯ ಬಿಸಿಯೂಟ ನೀಡುವ ಮೂಲಕ ಬರಗಾಲದಲ್ಲಿ ಶಾಲಾ ಮಕ್ಕಳ ಹಸಿವು ನೀಗಿಸಿದ್ದು ನಿಜಕ್ಕೂ ಒಳ್ಳೆಯ ಕೆಲಸವೇ ಸರಿ..

ಮಹೇಶ್ ಈಟಿವಿ ಭಾರತ ಕೋಲಾರ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.