ಕೋಲಾರ: ಸಾಲ ಮರು ಪಾವತಿಸದ ಕಾರಣ ಎನ್ಒಸಿ ನೀಡದ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಹಕಾರ ಸಂಘದ ಸಿಇಒ ಸುಧಾಕರ್ ಮೇಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಇಂದುಮಂಗಲ ಗ್ರಾಮದ ನಾರಾಯಣಸ್ವಾಮಿ ಎಂಬಾತ ಹಲ್ಲೆ ನಡೆಸಿದ್ದಾನೆ. ಈಗಾಗಲೇ ತೆಗೆದುಕೊಂಡಿದ್ದ ಸಾಲ ಮರುಪಾವತಿ ಮಾಡದೇ ಎನ್ಒಸಿಗೆ ಸೀಲ್ ಹಾಕುವಂತೆ ಸಿಬ್ಬಂದಿ ಮೇಲೆ ನಾರಾಯಣಸ್ವಾಮಿ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.
ಓದಿ:ಹಾವೇರಿ ಜಿಲ್ಲಾ ಕಾರಾಗೃಹ ಅಧೀಕ್ಷಕ - ಸಿಬ್ಬಂದಿ ನಡುವೆ ಗಲಾಟೆ: ತನಿಖೆಗೆ ಡಾ.ರಂಗನಾಥ್ ನೇಮಕ
ಸಾಲ ಮರುಪಾವತಿಸದೇ ಎನ್ಒಸಿ ಕೊಡಲು ಸಿಬ್ಬಂದಿ ಒಪ್ಪದ ಕಾರಣ ಏಕಾಏಕಿ ಸಂಘದ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ನಾರಾಯಣಸ್ವಾಮಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.