ETV Bharat / state

'ಏನೇನೋ ಸುದ್ದಿ ಮಾಡಿ ನನ್ನ ಭವಿಷ್ಯ ಹಾಳು ಮಾಡಬೇಡಿ: ಮಾಧ್ಯಮಗಳಿಗೆ ವರ್ತೂರ್ ಮನವಿ

author img

By

Published : Dec 4, 2020, 9:00 PM IST

ಈಗಾಗಲೇ ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣ ಪ್ರಕರಣದಲ್ಲಿ ಮಹತ್ವದ ಅಂಶಗಳನ್ನು ಕೆಲೆ ಹಾಕಿರುವ ಪೊಲೀಸರು, 13 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಈ ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಶುರು ಮಾಡಿರುವ ಪೊಲೀಸರ ತಂಡ, ಪುಣೆ ಹಾಗೂ ಆಂಧ್ರ ಪ್ರದೇಶದವರ ಕೈವಾಡ ಏನಾದರೂ ಇದೆಯಾ ಎನ್ನುವುದನ್ನು ತನಿಖೆ ನಡೆಸುತ್ತಿದ್ದಾರೆ.

former-minister-varthuru-prakash-kidnap-news
ಮಾಧ್ಯಮಗಳ ಎದುರು ವರ್ತೂರ್ ಮನವಿ

ಕೋಲಾರ: ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಸಾಕಷ್ಟು ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಮಾಧ್ಯಮಗಳ ಎದುರು ವರ್ತೂರ್ ಮನವಿ

ವರ್ತೂರ್ ಪ್ರಕಾಶ್​ ಮಾಧ್ಯಮಗಳ ಮುಂದೆ ನಾನು ಇನ್ನೂ ಒಂದು ಬಾರಿ ಎಂಎಲ್​ಎ ಆಗಬೇಕು. ನನ್ನ ಬಗ್ಗೆ ಏನೇನೋ ಸುದ್ದಿ ಪ್ರಸಾರ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡ ಘಟನೆ ಇಂದು ನಡೆದಿದೆ. ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣವಾಗಿ ಇಂದಿಗೆ ಒಂಬತ್ತು ದಿನ ಕಳೆದರೆ, ವರ್ತೂರ್​ ಪ್ರಕಾಶ್​ ಪೊಲೀಸರಿಗೆ ದೂರು ನೀಡಿ ನಾಲ್ಕು ದಿನಗಳೇ ಗತಿಸಿವೆ. ಈಗಾಗಲೇ ಬೆಂಗಳೂರಿನ ಬೆಳ್ಳಂದೂರಿನಿಂದ ಕೋಲಾರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆಯಾದ ನಂತರ ಕೋಲಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಅಂಶಗಳನ್ನು ಕಲೆ ಹಾಕಿರುವ ಪೊಲೀಸರು, 13 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಪುಣೆ ಹಾಗೂ ಆಂಧ್ರಪ್ರದೇಶದವರ ಕೈವಾಡ ಇದೆಯಾ ಎನ್ನುವುದನ್ನು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಅಪಹರಣಕಾರರು​ ಬಹುತೇಕ ಹೊರ ರಾಜ್ಯದವರಲ್ಲ. ಎಲ್ಲರೂ ನಮ್ಮ ರಾಜ್ಯದವರೇ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಅಪಹರಣಕಾರರನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಅಪಹರಣಕಾರರು​ ನಮ್ಮ ರಾಜ್ಯದವರೇ ಆಗಿದ್ದರೂ ಇದನ್ನು ಮಾಡಿರುವವರು ಯಾರೂ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಓದಿ: ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಪ್ರಕರಣ: ಹಣ ತಂದುಕೊಟ್ಟ ವ್ಯಕ್ತಿಯ ವಿಚಾರಣೆ

ನವೆಂಬರ್​ 25 ರಂದು ಕಿಡ್ನಾಪ್​ ಆದ ನಂತರ ವಿಶ್ರಾಂತಿ ಇಲ್ಲದೇ, ಮನಸ್ಸಿಗೆ ನೆಮ್ಮದಿ ಇಲ್ಲದೆ ಸಾಕಷ್ಟು ಒತ್ತಡಕ್ಕೆ ವರ್ತೂರ್​ ಪ್ರಕಾಶ್​ ಸಿಲುಕಿದ್ದರು. ನಿನ್ನೆ ಕನಕ ಜಯಂತಿ ಕಾರ್ಯಕ್ರಮವಿದ್ದರೂ, ಎಲ್ಲೂ ಕಾಣಿಸಿಕೊಳ್ಳದೇ ಬೆಂಗಳೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು. ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಕರಣದ ಮಾಹಿತಿ ನೀಡಿದರು.

ನಂತರ ಮಧ್ಯಾಹ್ನದ ಹೊತ್ತಿಗೆ ಕೋಲಾರ ಎಸ್ಪಿ ಕಚೇರಿಗೆ ಬಂದು, ಎಸ್ಪಿ ಕಾರ್ತಿಕ್​ರೆಡ್ಡಿ ಅವರನ್ನು ಭೇಟಿ ಮಾಡಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಈ ವೇಳೆ, ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಬಾವುಕರಾದ ವರ್ತೂರ್​ ಪ್ರಕಾಶ್​ ಕೈ ಮುಗಿದು ಕೇಳಿಕೊಳ್ಳುತ್ತೇವೆ, ನನ್ನ ಬಗ್ಗೆ ಏನೇನೋ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿದರು.

ನನ್ನ ಮಗ ನನ್ನನ್ನು ಕಿಡ್ನಾಪ್​ ಮಾಡಿಲ್ಲ, ನಾನು ಯಾರಿಗೂ ದುಡ್ಡು ಕೊಡಬೇಕಿಲ್ಲ. ಯಾವ ಮಹಾರಾಷ್ಟ್ರದ ಹಸು ವ್ಯವಹಾರವೂ ಇಲ್ಲ. ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ, ಯಾರನ್ನೂ ಮದುವೆಯಾಗಿಲ್ಲ. ಚುನಾವಣೆ ನಂತರದಲ್ಲಿ ಯಾವ ರಿಯಲ್​ ಎಸ್ಟೇಟ್​ ವ್ಯವಹಾರವನ್ನು ಮಾಡುತ್ತಿಲ್ಲ. ತೋಟದಲ್ಲಿ ಸಗಣಿ ಎತ್ತಿಕೊಂಡು ಬಿದ್ದಿದ್ದೇನೆ. ಈ ಘಟನೆ ಯಾರೋ ನನ್ನ ಬಳಿ ಹಣ ಇದೆ ಎಂದು ತಿಳಿದು ಮಾಡಿರುವ ಕೃತ್ಯ. ಏನೇನೋ ಮಾಡಿ ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಎಂಎಲ್​ಎ ಆಗಬೇಕು ಎಂದು ಮಾಧ್ಯಮಗಳ ಎದುರು ಕೈಮುಗಿದು ಕೇಳಿಕೊಂಡರು.

ಒಟ್ಟಾರೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವ ವರ್ತೂರ್​ ಪ್ರಕಾಶ್​ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿಹುವುಗಳು ಮತ್ತು ಕುರುಹುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಪೂರ್ಣ ತನಿಖೆಯ ಬಳಿಕವೇ ಎಲ್ಲ ಸತ್ಯಾಸತ್ಯತೆ ಹೊರ ಬರಬೇಕಿದೆ.

ಓದಿ: ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....

ಕೋಲಾರ: ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಸಾಕಷ್ಟು ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಮಾಧ್ಯಮಗಳ ಎದುರು ವರ್ತೂರ್ ಮನವಿ

ವರ್ತೂರ್ ಪ್ರಕಾಶ್​ ಮಾಧ್ಯಮಗಳ ಮುಂದೆ ನಾನು ಇನ್ನೂ ಒಂದು ಬಾರಿ ಎಂಎಲ್​ಎ ಆಗಬೇಕು. ನನ್ನ ಬಗ್ಗೆ ಏನೇನೋ ಸುದ್ದಿ ಪ್ರಸಾರ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡ ಘಟನೆ ಇಂದು ನಡೆದಿದೆ. ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣವಾಗಿ ಇಂದಿಗೆ ಒಂಬತ್ತು ದಿನ ಕಳೆದರೆ, ವರ್ತೂರ್​ ಪ್ರಕಾಶ್​ ಪೊಲೀಸರಿಗೆ ದೂರು ನೀಡಿ ನಾಲ್ಕು ದಿನಗಳೇ ಗತಿಸಿವೆ. ಈಗಾಗಲೇ ಬೆಂಗಳೂರಿನ ಬೆಳ್ಳಂದೂರಿನಿಂದ ಕೋಲಾರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆಯಾದ ನಂತರ ಕೋಲಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಅಂಶಗಳನ್ನು ಕಲೆ ಹಾಕಿರುವ ಪೊಲೀಸರು, 13 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಪುಣೆ ಹಾಗೂ ಆಂಧ್ರಪ್ರದೇಶದವರ ಕೈವಾಡ ಇದೆಯಾ ಎನ್ನುವುದನ್ನು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಅಪಹರಣಕಾರರು​ ಬಹುತೇಕ ಹೊರ ರಾಜ್ಯದವರಲ್ಲ. ಎಲ್ಲರೂ ನಮ್ಮ ರಾಜ್ಯದವರೇ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಅಪಹರಣಕಾರರನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಅಪಹರಣಕಾರರು​ ನಮ್ಮ ರಾಜ್ಯದವರೇ ಆಗಿದ್ದರೂ ಇದನ್ನು ಮಾಡಿರುವವರು ಯಾರೂ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಓದಿ: ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಪ್ರಕರಣ: ಹಣ ತಂದುಕೊಟ್ಟ ವ್ಯಕ್ತಿಯ ವಿಚಾರಣೆ

ನವೆಂಬರ್​ 25 ರಂದು ಕಿಡ್ನಾಪ್​ ಆದ ನಂತರ ವಿಶ್ರಾಂತಿ ಇಲ್ಲದೇ, ಮನಸ್ಸಿಗೆ ನೆಮ್ಮದಿ ಇಲ್ಲದೆ ಸಾಕಷ್ಟು ಒತ್ತಡಕ್ಕೆ ವರ್ತೂರ್​ ಪ್ರಕಾಶ್​ ಸಿಲುಕಿದ್ದರು. ನಿನ್ನೆ ಕನಕ ಜಯಂತಿ ಕಾರ್ಯಕ್ರಮವಿದ್ದರೂ, ಎಲ್ಲೂ ಕಾಣಿಸಿಕೊಳ್ಳದೇ ಬೆಂಗಳೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು. ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಕರಣದ ಮಾಹಿತಿ ನೀಡಿದರು.

ನಂತರ ಮಧ್ಯಾಹ್ನದ ಹೊತ್ತಿಗೆ ಕೋಲಾರ ಎಸ್ಪಿ ಕಚೇರಿಗೆ ಬಂದು, ಎಸ್ಪಿ ಕಾರ್ತಿಕ್​ರೆಡ್ಡಿ ಅವರನ್ನು ಭೇಟಿ ಮಾಡಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಈ ವೇಳೆ, ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಬಾವುಕರಾದ ವರ್ತೂರ್​ ಪ್ರಕಾಶ್​ ಕೈ ಮುಗಿದು ಕೇಳಿಕೊಳ್ಳುತ್ತೇವೆ, ನನ್ನ ಬಗ್ಗೆ ಏನೇನೋ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿದರು.

ನನ್ನ ಮಗ ನನ್ನನ್ನು ಕಿಡ್ನಾಪ್​ ಮಾಡಿಲ್ಲ, ನಾನು ಯಾರಿಗೂ ದುಡ್ಡು ಕೊಡಬೇಕಿಲ್ಲ. ಯಾವ ಮಹಾರಾಷ್ಟ್ರದ ಹಸು ವ್ಯವಹಾರವೂ ಇಲ್ಲ. ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ, ಯಾರನ್ನೂ ಮದುವೆಯಾಗಿಲ್ಲ. ಚುನಾವಣೆ ನಂತರದಲ್ಲಿ ಯಾವ ರಿಯಲ್​ ಎಸ್ಟೇಟ್​ ವ್ಯವಹಾರವನ್ನು ಮಾಡುತ್ತಿಲ್ಲ. ತೋಟದಲ್ಲಿ ಸಗಣಿ ಎತ್ತಿಕೊಂಡು ಬಿದ್ದಿದ್ದೇನೆ. ಈ ಘಟನೆ ಯಾರೋ ನನ್ನ ಬಳಿ ಹಣ ಇದೆ ಎಂದು ತಿಳಿದು ಮಾಡಿರುವ ಕೃತ್ಯ. ಏನೇನೋ ಮಾಡಿ ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಎಂಎಲ್​ಎ ಆಗಬೇಕು ಎಂದು ಮಾಧ್ಯಮಗಳ ಎದುರು ಕೈಮುಗಿದು ಕೇಳಿಕೊಂಡರು.

ಒಟ್ಟಾರೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವ ವರ್ತೂರ್​ ಪ್ರಕಾಶ್​ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿಹುವುಗಳು ಮತ್ತು ಕುರುಹುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಪೂರ್ಣ ತನಿಖೆಯ ಬಳಿಕವೇ ಎಲ್ಲ ಸತ್ಯಾಸತ್ಯತೆ ಹೊರ ಬರಬೇಕಿದೆ.

ಓದಿ: ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....

ETV Bharat Logo

Copyright © 2024 Ushodaya Enterprises Pvt. Ltd., All Rights Reserved.