ETV Bharat / state

ಬಿಸಿಎಂ ಹಾಸ್ಟೆಲ್​ ಕಾಂಪೌಂಡ್​ ಕುಸಿತ: ಕಳಪೆ ಕಾಮಗಾರಿ ಆರೋಪ

author img

By

Published : Mar 2, 2021, 5:16 PM IST

ಅಧಿಕಾರಿಗಳು ಅತ್ಯಂತ ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೋಲಾರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ​ಕುಸಿದು ಬಿದ್ದಿದೆ.

ಕೋಲಾರದಲ್ಲಿ ಬಿಸಿಎಂ ಹಾಸ್ಟೆಲ್​ ಕಾಂಪೌಂಡ್​ ಗೋಡೆ ಕುಸಿತ  BCM hostel compound wall collapse in Kolar
ಬಿಸಿಎಂ ಹಾಸ್ಟೆಲ್​ ಕಾಂಪೌಂಡ್​ ಗೋಡೆ ಕುಸಿತ

ಕೋಲಾರ: ಗ್ರಾಮಸ್ಥರ ಆರೋಪಕ್ಕೆ ಕೈಗನ್ನಡಿಯಂತೆ ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್​ ಪೂರ್ವ ವಸತಿ ನಿಲಯದ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ.

ಬಿಸಿಎಂ ಹಾಸ್ಟೆಲ್​ ಕಾಂಪೌಂಡ್​ ಕುಸಿತ

ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್​ ಪೂರ್ವ ವಸತಿ ನಿಲಯವಿದೆ. ಇದಕ್ಕೆ ಈ ಮೊದಲು ಒಂದು ಕಲ್ಲು ಚಪ್ಪಡಿಯ ಕಾಂಪೌಂಡ್​ ಇತ್ತು. ಆದರೆ ಬಿಸಿಎಂ ಇಲಾಖೆ ಹಾಗೂ ​(KRIDL) ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ಅಧಿಕಾರಿಗಳು ಸುಸಜ್ಜಿತವಾಗಿದ್ದ ಹಾಸ್ಟೆಲ್​ಗೆ ಹಾಲೋಬ್ರಿಕ್ಸ್​ ಸಿಮೆಂಟ್​ ಗೋಡೆ ಹಾಗೂ ಮಳೆ ನೀರು ಕೊಯ್ಲು ಅಳವಡಿಕೆಗೆಂದು 60 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ.

ಆದರೆ ಈ ಕೆಲಸ ಮುಗಿಯುವ ಮೊದಲೇ ಹಣ ಡ್ರಾ ಮಾಡಿರುವ ಅಧಿಕಾರಿಗಳು ಅತ್ಯಂತ ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್​ ಕುಸಿದು ಬಿದ್ದಿದೆ. ಇದರಿಂದ ಆಕ್ರೋಶಗೊಂಡಿರುವ ಹೋಳೂರು ಗ್ರಾಮಸ್ಥರು ಬಿಸಿಎಂ ಇಲಾಖೆ ಹಾಗೂ ಕ್ರೆಡಿಲ್​ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಸರ್ಕಾರದ ಹಣ ದುರುಪಯೋಗ ಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'

ಗೋಡೆ ಭಾನುವಾರ ಬೆಳಗಿನ ಜಾವದಲ್ಲಿ ಕುಸಿದು ಬಿದ್ದಿದ್ದು, ಸ್ಥಳದಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ನಿತಿನ್​ ಗೌಡ ಎಂಬ ವ್ಯಕ್ತಿ ಕಾಮಗಾರಿ ಮಾಡಿಸುತ್ತಿದ್ದು, ಅಧಿಕಾರಿಗಳು ಬಿಲ್​ನಲ್ಲಿ ಅಕ್ರಮ ಎಸಗಿದ್ದಾರೆ ಎಮದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೋಲಾರ: ಗ್ರಾಮಸ್ಥರ ಆರೋಪಕ್ಕೆ ಕೈಗನ್ನಡಿಯಂತೆ ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್​ ಪೂರ್ವ ವಸತಿ ನಿಲಯದ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ.

ಬಿಸಿಎಂ ಹಾಸ್ಟೆಲ್​ ಕಾಂಪೌಂಡ್​ ಕುಸಿತ

ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್​ ಪೂರ್ವ ವಸತಿ ನಿಲಯವಿದೆ. ಇದಕ್ಕೆ ಈ ಮೊದಲು ಒಂದು ಕಲ್ಲು ಚಪ್ಪಡಿಯ ಕಾಂಪೌಂಡ್​ ಇತ್ತು. ಆದರೆ ಬಿಸಿಎಂ ಇಲಾಖೆ ಹಾಗೂ ​(KRIDL) ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ಅಧಿಕಾರಿಗಳು ಸುಸಜ್ಜಿತವಾಗಿದ್ದ ಹಾಸ್ಟೆಲ್​ಗೆ ಹಾಲೋಬ್ರಿಕ್ಸ್​ ಸಿಮೆಂಟ್​ ಗೋಡೆ ಹಾಗೂ ಮಳೆ ನೀರು ಕೊಯ್ಲು ಅಳವಡಿಕೆಗೆಂದು 60 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ.

ಆದರೆ ಈ ಕೆಲಸ ಮುಗಿಯುವ ಮೊದಲೇ ಹಣ ಡ್ರಾ ಮಾಡಿರುವ ಅಧಿಕಾರಿಗಳು ಅತ್ಯಂತ ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್​ ಕುಸಿದು ಬಿದ್ದಿದೆ. ಇದರಿಂದ ಆಕ್ರೋಶಗೊಂಡಿರುವ ಹೋಳೂರು ಗ್ರಾಮಸ್ಥರು ಬಿಸಿಎಂ ಇಲಾಖೆ ಹಾಗೂ ಕ್ರೆಡಿಲ್​ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಸರ್ಕಾರದ ಹಣ ದುರುಪಯೋಗ ಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'

ಗೋಡೆ ಭಾನುವಾರ ಬೆಳಗಿನ ಜಾವದಲ್ಲಿ ಕುಸಿದು ಬಿದ್ದಿದ್ದು, ಸ್ಥಳದಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ನಿತಿನ್​ ಗೌಡ ಎಂಬ ವ್ಯಕ್ತಿ ಕಾಮಗಾರಿ ಮಾಡಿಸುತ್ತಿದ್ದು, ಅಧಿಕಾರಿಗಳು ಬಿಲ್​ನಲ್ಲಿ ಅಕ್ರಮ ಎಸಗಿದ್ದಾರೆ ಎಮದು ಗ್ರಾಮಸ್ಥರು ಆರೋಪಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.