ETV Bharat / state

ಕೋಲಾರ: ಕೆರೆಯಲ್ಲಿ ಮಗುವಿನ ಶವ ಪತ್ತೆ, ತಂದೆಗಾಗಿ ಪೊಲೀಸರ ಹುಡುಕಾಟ

ಕೋಲಾರದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಜೊತೆಗೆ ಸ್ಥಳದಲ್ಲಿ ಐ20 ಕಾರು ಕೂಡ ಪತ್ತೆಯಾಗಿದ್ದು, ತಂದೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

author img

By

Published : Nov 16, 2022, 9:29 PM IST

KN_KLR
ಕೆರೆಯಲ್ಲಿ ಮಗುವಿನ ಶವ ಪತ್ತೆ

ಕೋಲಾರ: ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಕೆಂದಟ್ಟಿಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಅಲ್ಲದೇ ಕೆರೆಯ ದಡದಲ್ಲೇ ಒಂದು ನೀಲಿ ಬಣ್ಣದ ಐ20 ಕಾರ್​ ಸಹ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಕಾರು ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್​ಮೆಂಟ್​ನಲ್ಲಿ ವಾಸವಿರುವ ಗುಜರಾತ್​ ಮೂಲದ ಕುಟುಂಬದವರದ್ದು ಎಂಬುವ ಮಾಹಿತಿ ದೊರೆತಿದೆ.

ಈ ಕುರಿತು ಪೊಲೀಸರು ಕುಟುಂಬದವರಿಗೆ ತಿಳಿಸಿದಾಗ ಸ್ಥಳಕ್ಕೆ ಬಂದ ಭವ್ಯ ಎಂಬುವವರು ಇದು ನನ್ನ ಪತಿಯ ಕಾರು, ಆಕೆ ನನ್ನ ಮಗಳು ಎಂದು ಅಳತೊಡಗಿದ್ದಾರೆ. ನಿನ್ನೆ ಬೆಳಗ್ಗೆ ನನ್ನ ಪತಿ ರಾಹುಲ್​ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದೇ ಇಲ್ಲ. ಅದಾದ ನಂತರ ಪೋನ್​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸರಿಂದ ಅವರ ಇಲ್ಲಿಗೆ ಬಂದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಭವ್ಯಾ ಎಂಬುವರು ಹೇಳಿದ್ದಾರೆ. ರಾಹುಲ್​ ಪತ್ನಿ ಭವ್ಯ ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ರಾಹುಲ್​ನ ಮೊಬೈಲ್​​, ಪರ್ಸ್ ಎಲ್ಲವೂ ಕಾರಿನಲ್ಲೇ ಇದ್ದು, ರಾಹುಲ್​ ತನ್ನ ಮಗುವನ್ನು ಕೊಂದು ತಾನೂ ಕೂಡಾ ಇದೇ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೆರೆಯಲ್ಲಿ ರಾಹುಲ್​ ಶವಕ್ಕಾಗಿ ಶೋಧ ಕೈಗೊಂಡಿದ್ದಾರೆ.

ಕೆರೆಯಲ್ಲಿ ಮಗುವಿನ ಶವ ಪತ್ತೆ

ಪ್ರಕರಣ ಕುರಿತು ಮಾಧ್ಯಮದವರೊಂದಿಗೆ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಇತ್ತೀಚೆಗೆ ರಾಹುಲ್​ ಬಾಗಲೂರು ಪೊಲೀಸ್​ ಠಾಣೆಗೆ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ನೀಡಿರುತ್ತಾರೆ.

ಅಷ್ಟೇ ಅಲ್ಲದೆ ದೂರು ಸಲುವಾಗಿ ಪದೇ ಪದೆ ಪೊಲೀಸ್​ ಠಾಣೆಗೆ ಹೋಗಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿರುತ್ತಾರೆ. ಆಗ ಪೊಲೀಸರು ದೂರಿನ ಪರಿಶೀಲನೆ ನಡೆಸಿದಾಗ, ರಾಹುಲ್​ ತಾನೇ ಮನೆಯಲ್ಲಿದ್ದ ಒಡವೆಗಳನ್ನು ಚೆಮನೂರ್ ಜ್ಯೂವೆಲರ್ಸ್​ನಲ್ಲಿ ಅಡವಿಟ್ಟು, ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಬಳಿಕ ಪೊಲೀಸರು ರಾಹುಲ್​ಗೆ ಠಾಣೆಗೆ ಬರುವಂತೆ ಸೂಚಿಸಿ ಅವರ​ ಮನೆಯ ಬಳಿಯೂ ಹೋಗಿ ಠಾಣೆಗೆ ಬರುವಂತೆ ತಾಕೀತು ಮಾಡಿದ್ದರು. ಈ ವಿಚಾರವಾಗಿಯೇ ಭಯ ಪಟ್ಟು ರಾಹುಲ್​ ಈ ರೀತಿ ಮಾಡಿಕೊಂಡಿರಬಹುದಾ ಎಂಬ ಅನುಮಾನ ಇದೆ ಎಂದು ಪೊಲೀಸ್​ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಐಟಿ ಉದ್ಯೋಗಿಯಾಗಿದ್ದ ರಾಹುಲ್​ ಏಕಾಏಕಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ, ಪೊಲೀಸರ ಭಯಕ್ಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ, ಇಲ್ಲಾ ಸಾಲದ ಸುಳಿಗೆ ಸಿಲುಕಿ ಇಂತಹ ನಿರ್ಧಾರ ಮಾಡಿದ್ದಾರಾ, ಬೇರೆ ಏನಾದರೂ ಕಾರಣ ಇದೆಯಾ, ಅಥವಾ ರಾಹುಲ್​ ಮಗುವನ್ನು ಕೊಂದು ತಾನು ಎಲ್ಲಾದ್ರು ತಲೆಮರೆಸಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಫಿಂಗರ್ ಫ್ರಿಂಟ್ ಆ್ಯಪ್: 12 ವರ್ಷದ ಬಳಿಕ ಪತ್ತೆಯಾದ ಕೊಲೆ ಆರೋಪಿ

ಕೋಲಾರ: ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಕೆಂದಟ್ಟಿಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಅಲ್ಲದೇ ಕೆರೆಯ ದಡದಲ್ಲೇ ಒಂದು ನೀಲಿ ಬಣ್ಣದ ಐ20 ಕಾರ್​ ಸಹ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಕಾರು ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್​ಮೆಂಟ್​ನಲ್ಲಿ ವಾಸವಿರುವ ಗುಜರಾತ್​ ಮೂಲದ ಕುಟುಂಬದವರದ್ದು ಎಂಬುವ ಮಾಹಿತಿ ದೊರೆತಿದೆ.

ಈ ಕುರಿತು ಪೊಲೀಸರು ಕುಟುಂಬದವರಿಗೆ ತಿಳಿಸಿದಾಗ ಸ್ಥಳಕ್ಕೆ ಬಂದ ಭವ್ಯ ಎಂಬುವವರು ಇದು ನನ್ನ ಪತಿಯ ಕಾರು, ಆಕೆ ನನ್ನ ಮಗಳು ಎಂದು ಅಳತೊಡಗಿದ್ದಾರೆ. ನಿನ್ನೆ ಬೆಳಗ್ಗೆ ನನ್ನ ಪತಿ ರಾಹುಲ್​ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದೇ ಇಲ್ಲ. ಅದಾದ ನಂತರ ಪೋನ್​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸರಿಂದ ಅವರ ಇಲ್ಲಿಗೆ ಬಂದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಭವ್ಯಾ ಎಂಬುವರು ಹೇಳಿದ್ದಾರೆ. ರಾಹುಲ್​ ಪತ್ನಿ ಭವ್ಯ ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ರಾಹುಲ್​ನ ಮೊಬೈಲ್​​, ಪರ್ಸ್ ಎಲ್ಲವೂ ಕಾರಿನಲ್ಲೇ ಇದ್ದು, ರಾಹುಲ್​ ತನ್ನ ಮಗುವನ್ನು ಕೊಂದು ತಾನೂ ಕೂಡಾ ಇದೇ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೆರೆಯಲ್ಲಿ ರಾಹುಲ್​ ಶವಕ್ಕಾಗಿ ಶೋಧ ಕೈಗೊಂಡಿದ್ದಾರೆ.

ಕೆರೆಯಲ್ಲಿ ಮಗುವಿನ ಶವ ಪತ್ತೆ

ಪ್ರಕರಣ ಕುರಿತು ಮಾಧ್ಯಮದವರೊಂದಿಗೆ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಇತ್ತೀಚೆಗೆ ರಾಹುಲ್​ ಬಾಗಲೂರು ಪೊಲೀಸ್​ ಠಾಣೆಗೆ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ನೀಡಿರುತ್ತಾರೆ.

ಅಷ್ಟೇ ಅಲ್ಲದೆ ದೂರು ಸಲುವಾಗಿ ಪದೇ ಪದೆ ಪೊಲೀಸ್​ ಠಾಣೆಗೆ ಹೋಗಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿರುತ್ತಾರೆ. ಆಗ ಪೊಲೀಸರು ದೂರಿನ ಪರಿಶೀಲನೆ ನಡೆಸಿದಾಗ, ರಾಹುಲ್​ ತಾನೇ ಮನೆಯಲ್ಲಿದ್ದ ಒಡವೆಗಳನ್ನು ಚೆಮನೂರ್ ಜ್ಯೂವೆಲರ್ಸ್​ನಲ್ಲಿ ಅಡವಿಟ್ಟು, ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಬಳಿಕ ಪೊಲೀಸರು ರಾಹುಲ್​ಗೆ ಠಾಣೆಗೆ ಬರುವಂತೆ ಸೂಚಿಸಿ ಅವರ​ ಮನೆಯ ಬಳಿಯೂ ಹೋಗಿ ಠಾಣೆಗೆ ಬರುವಂತೆ ತಾಕೀತು ಮಾಡಿದ್ದರು. ಈ ವಿಚಾರವಾಗಿಯೇ ಭಯ ಪಟ್ಟು ರಾಹುಲ್​ ಈ ರೀತಿ ಮಾಡಿಕೊಂಡಿರಬಹುದಾ ಎಂಬ ಅನುಮಾನ ಇದೆ ಎಂದು ಪೊಲೀಸ್​ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಐಟಿ ಉದ್ಯೋಗಿಯಾಗಿದ್ದ ರಾಹುಲ್​ ಏಕಾಏಕಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ, ಪೊಲೀಸರ ಭಯಕ್ಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ, ಇಲ್ಲಾ ಸಾಲದ ಸುಳಿಗೆ ಸಿಲುಕಿ ಇಂತಹ ನಿರ್ಧಾರ ಮಾಡಿದ್ದಾರಾ, ಬೇರೆ ಏನಾದರೂ ಕಾರಣ ಇದೆಯಾ, ಅಥವಾ ರಾಹುಲ್​ ಮಗುವನ್ನು ಕೊಂದು ತಾನು ಎಲ್ಲಾದ್ರು ತಲೆಮರೆಸಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಫಿಂಗರ್ ಫ್ರಿಂಟ್ ಆ್ಯಪ್: 12 ವರ್ಷದ ಬಳಿಕ ಪತ್ತೆಯಾದ ಕೊಲೆ ಆರೋಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.