ETV Bharat / state

ಕಳೆದ ವರ್ಷ ಕೊಡಗನ್ನು ಮುಳುಗಿಸಿದ್ದ ವರುಣ... ಈ ಬಾರಿ ಮಳೆಗಾಗಿ ಜನರಿಂದ ಪರ್ಜನ್ಯ ಪೂಜೆ!

ಕಳೆದ ಬಾರಿ ಮಳೆಯಿಂದ ನಲುಗಿಹೋಗಿದ್ದ ಕೊಡಗು ಜಿಲ್ಲೆಯಲ್ಲೂ ಈವರೆಗೆ ವರುಣ ಕೃಪೆ ತೋರಿಲ್ಲ. ಹೀಗಾಗಿ ಜಿಲ್ಲೆಯ ಜನರು ಸಹ ವರುಣ ದೇವನನ್ನು ಒಲಿಸಿಕೊಳ್ಳಲು ಪೂಜೆ, ಹೋಮ-ಹವನದ ಮೊರೆ ಹೋಗಿದ್ದಾರೆ.

author img

By

Published : Jul 5, 2019, 9:02 PM IST

ಮಳೆರಾಯನನ್ನ ಒಲಿಸಿಕೊಳ್ಳಲು ಕೊಡಗಿನಲ್ಲಿ ಪರ್ಜನ್ಯ ಪೂಜೆ

ಮಡಿಕೇರಿ: ಜೂನ್ ಕಳೆದರೂ ಅದೇಕೋ ಮಳೆರಾಯ ಈ ಬಾರಿ ಕೊಡಗಿನ ಕಡೆ ಮುಖ ಮಾಡಿಲ್ಲ. ಹೀಗಾಗಿ ಇಲ್ಲಿನ ಜನ ಪೂಜೆ, ಹೋಮ- ಹವನಗಳಲ್ಲಿ ತೊಡಗಿದ್ದಾರೆ.

ಮಳೆರಾಯನನ್ನ ಒಲಿಸಿಕೊಳ್ಳಲು ಕೊಡಗಿನಲ್ಲಿ ಪರ್ಜನ್ಯ ಪೂಜೆ

ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದಿಂದ ವತಿಯಿಂದ ಮಳೆಗಾಗಿ ಪರ್ಜನ್ಯ ಪೂಜೆ ಮಾಡಲಾಯ್ತು. ದೊಡ್ಡ ಹೋಮ ಕುಂಡದ ಮುಂಭಾಗ ಕುಳಿತು ಅರ್ಚಕರು ಮಂತ್ರ ಪಠಣೆ ಮಾಡಿ ಎಣ್ಣೆ, ಎಳ್ಳು-ಬೆಲ್ಲ, ಹಣ್ಣು‌, ಅರಿಶಿಣ-ಕುಂಕುಮ, ಹಣ್ಣುಗಳನ್ನು ಹೋಮ ಕುಂಡಕ್ಕೆ ಹಾಕಿ ಕೊಡಗಿಗೆ ಉತ್ತಮ ಮಳೆ ಬರಲಿ ಎಂದು ವರುಣ ದೇವನನ್ನು ಒಲಿಸಿಕೊಳ್ಳಲಿ ಹೋಮ -ಹವನ ನೆರವೇರಿಸಿದ್ರು.

ಕೊಡಗಿಗೆ ವಾಡಿಕೆಯಷ್ಟು ಮಳೆಯಾಗದಿರುವುದಕ್ಕೆ ವರುಣ ದೇವನ‌ ಮುನಿಸೇ ಕಾರಣ ಅಂತ ನಂಬಿರೋ ಇಲ್ಲಿನ ಜನ ಜಿಲ್ಲೆಯ ದೇವಾಲಯಗಳಲ್ಲಿ ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಳೆದ ವರ್ಷ ಅತೀವೃಷ್ಟಿಯಿಂದ ನಲುಗಿದ್ದ ಜನತೆ ಈ ವರ್ಷ ಅನಾವೃಷ್ಟಿಗೆ ತುತ್ತಾಗಿರುವುದು ವಿಪರ್ಯಾಸ.

ಮಡಿಕೇರಿ: ಜೂನ್ ಕಳೆದರೂ ಅದೇಕೋ ಮಳೆರಾಯ ಈ ಬಾರಿ ಕೊಡಗಿನ ಕಡೆ ಮುಖ ಮಾಡಿಲ್ಲ. ಹೀಗಾಗಿ ಇಲ್ಲಿನ ಜನ ಪೂಜೆ, ಹೋಮ- ಹವನಗಳಲ್ಲಿ ತೊಡಗಿದ್ದಾರೆ.

ಮಳೆರಾಯನನ್ನ ಒಲಿಸಿಕೊಳ್ಳಲು ಕೊಡಗಿನಲ್ಲಿ ಪರ್ಜನ್ಯ ಪೂಜೆ

ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದಿಂದ ವತಿಯಿಂದ ಮಳೆಗಾಗಿ ಪರ್ಜನ್ಯ ಪೂಜೆ ಮಾಡಲಾಯ್ತು. ದೊಡ್ಡ ಹೋಮ ಕುಂಡದ ಮುಂಭಾಗ ಕುಳಿತು ಅರ್ಚಕರು ಮಂತ್ರ ಪಠಣೆ ಮಾಡಿ ಎಣ್ಣೆ, ಎಳ್ಳು-ಬೆಲ್ಲ, ಹಣ್ಣು‌, ಅರಿಶಿಣ-ಕುಂಕುಮ, ಹಣ್ಣುಗಳನ್ನು ಹೋಮ ಕುಂಡಕ್ಕೆ ಹಾಕಿ ಕೊಡಗಿಗೆ ಉತ್ತಮ ಮಳೆ ಬರಲಿ ಎಂದು ವರುಣ ದೇವನನ್ನು ಒಲಿಸಿಕೊಳ್ಳಲಿ ಹೋಮ -ಹವನ ನೆರವೇರಿಸಿದ್ರು.

ಕೊಡಗಿಗೆ ವಾಡಿಕೆಯಷ್ಟು ಮಳೆಯಾಗದಿರುವುದಕ್ಕೆ ವರುಣ ದೇವನ‌ ಮುನಿಸೇ ಕಾರಣ ಅಂತ ನಂಬಿರೋ ಇಲ್ಲಿನ ಜನ ಜಿಲ್ಲೆಯ ದೇವಾಲಯಗಳಲ್ಲಿ ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಳೆದ ವರ್ಷ ಅತೀವೃಷ್ಟಿಯಿಂದ ನಲುಗಿದ್ದ ಜನತೆ ಈ ವರ್ಷ ಅನಾವೃಷ್ಟಿಗೆ ತುತ್ತಾಗಿರುವುದು ವಿಪರ್ಯಾಸ.

Intro:ಮಲೆನಾಡಿನಲ್ಲಿ ಮಳೆಗಾಗಿ ಅರ್ಚಕರಿಂದ ಪರ್ಜನ್ಯ ಪೂಜೆ 

ಕೊಡಗು: ಜೂನ್ ಕಳೆದು ಜುಲೈ ಬಂದರೂ ಕೊಡಗಿಗೆ ಅದೇಕೊ ವರುಣ ತನ್ನ ಕೃಪೆ ತೋರುತ್ತಿಲ್ಲ. ಕೊಡಗಿನಲ್ಲಿ ಮಳೆ ಇಲ್ಲ ಎನ್ನೋ ಸುದ್ದಿ ಕೊಡಗಿನಲ್ಲಿ ಮಾತ್ರವಲ್ಲ ಇಡೀ ರಾಜ್ಯ ಹಾಗೂ ನೆರೆ ರಾಜ್ಯದ ಜನರ ಆತಂಕಕ್ಕೂ ಕಾರಣವಾಗಿದೆ. ಇನ್ನು ಕೊಡಗಿಗೆ ಉತ್ತಮ ಮಳೆ ಬರಲಿ ಅಂತ ಜನ ಪೂಜೆ ಹೋಮ ಹವನಗಳಲ್ಲಿ ತೊಡಗಿದ್ದಾರೆ.ಆಶ್ವರ್ಯ ಆದರೂ ಇದು ಸತ್ಯ.

ದೊಡ್ಡ ಹೋಮ ಕುಂಡದ ಮುಂಭಾಗ ಕುಳಿತು ಮಂತ್ರ ಪಠಣೆ ಮಾಡುತ್ತಿರುವ ಅರ್ಚಕ ವೃಂದ. ಎಣ್ಣೆ,ಎಳ್ಳು-ಬೆಲ್ಲ, ಹಣ್ಣು‌, ಅರಿಶಿಣ-ಕುಂಕುಮ, ಹಣ್ಣುಗಳನ್ನು ಹೋಮ ಕುಂಡಕ್ಕೆ ಹಾಕುತ್ತಿರುವ ಅರ್ಚಕರು.ಭಕ್ತಿ ಪೂರ್ವಕವಾಗಿ ಕರುಣೆ ತೋರು ದೇವಾ ಎಂದು ಬೇಡುತ್ತಿರುವ ಭಕ್ತರು.  ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಕೊಡಗು ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯ.

ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ವರುಣ ದೇವನನ್ನು ಒಲಿಸಿಕೊಳ್ಳುವ ಪೂಜೆ.ಕಾರಣ ಇಷ್ಟೇ. ಕೊಡಗಿನಲ್ಲಿ ಕಳೆದ ಬಾರಿ ಅತೀವೃಷ್ಠಿ ಉಂಟಾಗಿ ಸಂಕಷ್ಟ ಎದುರಾಗಿತ್ತು.ಆದರೆ ಈ ಬಾರಿ ಕೊಡಗನ್ನು ಅನಾವೃಷ್ಠಿ ಕಾಡುತ್ತಿದೆ. ಕೊಡಗಿನಾದ್ಯಂತ ಎಲ್ಲೂ ಕೂಡ ಹೇಳಿಕೊಳ್ಳುವ ವಾಡಿಕೆ ಮಳೆಯಾಗ್ತಿಲ್ಲ. ಇದರ ಪರಿಣಾಮ ಎಂಬಂತೆ ಜಿಲ್ಲೆಯ ಕೃಷಿ ಚಟುವಟಿಕೆ ಕುಂಟಿತಗೊಂಡು ರೈತರು ಆತಂಕದಲ್ಲಿದ್ದಾರೆ.ಜಿಲ್ಲೆಯ ನದಿ ತೊರೆ, ಜಲಾಶಯಗಳು ಉಕ್ಕಿ ಹರಿಯದೆ ಕೊಡಗಿನ ನದಿ ತೊರೆಗಳ ನೀರನ್ನು ಅವಲಂಬಿಸಿರುವವರು ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಕೃಷಿಕರಾದ ದೇವರಾಜ್.

ಬೈಟ್-1 ಮಹೇಶ್, ಕೃಷಿಕರು

ಕೊಡಗಿಗೆ ವಾಡಿಕೆ ಮಳೆಯಾಗದಿರುವುದಕ್ಕೆ ವರುಣ ದೇವನ‌ ಮುನಿಸೇ ಕಾರಣ ಅಂತ ನಂಬಿರೋ ಜನ ಜಿಲ್ಲೆಯ ದೇವಾಲಯಗಳಲ್ಲಿ ಹೋಮ-ಹವನ ನಡೆಸಿ ವರುಣ ದೇವನನ್ನು ಪ್ರಾರ್ಥಿಸುತ್ತಿದ್ದಾರೆ.ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದ ವತಿಯಿಂದ ಕೊಡಗಿಗೆ ಉತ್ತಮ ಮಳೆಯಾಗಲಿ, ಮಳೆ ಅನಾಹುತ ಸಂಭವಿಸದಿರಲಿ ಎಂದು ಯಾಗ ನಡೆಸಲಾಯಿತು.13 ಮಂದಿ ಅರ್ಚಕರಿಂದ ಯಾಗ, ಹೋಮ ಹವನ ಕಾರ್ಯಕ್ರಮ ನಡೆಯಿತು. ಶತರುದ್ರ ಪಾರಾಯಣ, ರುದ್ರ ಹೋಮ, ಪೂರ್ಣಾಹುತಿ ಪೂಜೆ ಬಳಿಕ ಮಹಾ ಮಂಗಳಾರತಿ ನೆರವೇರಿಸಿ ವರುಣ ದೇವ ಕೃಪೆ ತೋರು ಎಂದು ಪ್ರಾರ್ಥಿಸುತ್ತಿದ್ದೇವೆ ಎನ್ನುತ್ತಾರೆ ದೇವಾಲಯದ ಅರ್ಚಕ ಪರಮೇಶ್ವರ್ ಭಟ್. 

ಬೈಟ್- 2 ಪರಮೇಶ್ವರ ಭಟ್, ದೇವಾಲಯದ ಅರ್ಚಕರು 

ಕಳೆದ ಬಾರಿ ಧಾರಾಕಾರವಾಗಿ ಸುರಿಯುವ ಮೂಲಕ ಜಿಲ್ಲೆಯ ಜನರ ಜೀವನಕ್ಕೆ ಕುತ್ತು ತಂದಿದ್ದ ವರುಣ ಅದೇಕೊ ಈ ಬಾರಿ ಕೊಡಗಿಗೆ ಕೃಪೆ ತೋರದೆ ಮುನಿಸಿಕೊಂಡಿದ್ದಾನೆ. ಇದರಿಂದ ಆತಂಕಕ್ಕೊಳಗಾಗಿರೋ ಜಿಲ್ಲೆಯ ಜನತೆ ದೇವರ ಮೊರೆ ಹೋಗಿದ್ದು,ಮಳೆ ಬರಲಿ ಆತಂಕ ತರದಿರಲಿ ಎಂದು ದೇವರ ಮೊರೆ ಹೋಗಿದ್ದಾರೆ.  

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌




Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.