ETV Bharat / state

​​​​​​​ಅರಣ್ಯ ಭೂಮಿ ಒತ್ತುವರಿ: ಎಫ್‌ಡಿಎ ಅಧಿಕಾರಿ ಸತೀಶ್ ಅಮಾನತು

ಕೊಡಗು ಜಿಲ್ಲೆಯಲ್ಲಿ ಸರ್ಕಾರ ಬೆಟ್ಟವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಎಫ್​ಡಿಐ ಅಧಿಕಾರಿ ಸತೀಶ್​ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.

author img

By

Published : Oct 11, 2019, 3:08 PM IST

ಎಫ್​ಡಿಎ ಅಧಿಕಾರಿ ಸತೀಶ್​

ಮಡಿಕೇರಿ: ಭಾಗಮಂಡಲ‌ ಬೆಟ್ಟ ನೆಲಸಮ‌ ಮಾಡಿ, ರೆಸಾರ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಎಫ್‌ಡಿಎ ಅಧಿಕಾರಿ ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿ ಅಮಾನತು ಮಾಡಿ‌ ಆದೇಶ ಹೊರಡಿಸಿದ್ದಾರೆ.

officers-suspended-for-illegally-emphasizing-government-space
ಎಫ್​ಡಿಎ ಅಧಿಕಾರಿ ಸತೀಶ್​

ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಸತೀಶ್ ಮಡಿಕೇರಿ ತಾಲೂಕಿನ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ, ಅರಣ್ಯ ಪ್ರದೇಶವನ್ನು ನಾಶ ಪಡಿಸಿದ್ದರು. ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಆತಂಕ ಸೃಷ್ಟಿಯಾಗಿತ್ತು.‌ ಮಾಧ್ಯಮಗಳ ವರದಿ ಆಧರಿಸಿ ಕೊಡಗು ಡಿಸಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.‌

ರೆಸಾರ್ಟ್‌ಗೆ ನಿಗದಿ ಪಡಿಸಿದ ಜಾಗವೇ ಬೇರೆಯಾಗಿದ್ದು, ಸ್ವಾಧೀನಕ್ಕೆ ಪಡೆದಿದ್ದೇ ಮತ್ತೊಂದು ಜಾಗವಾಗಿದೆ. ಸರ್ಕಾರದ ಬೆಟ್ಟವನ್ನು ಒತ್ತುವರಿ ಮಾಡಿ, ಅಕ್ರಮ‌ ಕಾಮಗಾರಿ ನಡೆದಿದೆ ಎಂದು ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಸತೀಶ್ ಅವರನ್ನು ಅಮಾನತು ಮಾಡಲಾಗಿದೆ.

ಮಡಿಕೇರಿ: ಭಾಗಮಂಡಲ‌ ಬೆಟ್ಟ ನೆಲಸಮ‌ ಮಾಡಿ, ರೆಸಾರ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಎಫ್‌ಡಿಎ ಅಧಿಕಾರಿ ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿ ಅಮಾನತು ಮಾಡಿ‌ ಆದೇಶ ಹೊರಡಿಸಿದ್ದಾರೆ.

officers-suspended-for-illegally-emphasizing-government-space
ಎಫ್​ಡಿಎ ಅಧಿಕಾರಿ ಸತೀಶ್​

ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಸತೀಶ್ ಮಡಿಕೇರಿ ತಾಲೂಕಿನ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ, ಅರಣ್ಯ ಪ್ರದೇಶವನ್ನು ನಾಶ ಪಡಿಸಿದ್ದರು. ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಆತಂಕ ಸೃಷ್ಟಿಯಾಗಿತ್ತು.‌ ಮಾಧ್ಯಮಗಳ ವರದಿ ಆಧರಿಸಿ ಕೊಡಗು ಡಿಸಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.‌

ರೆಸಾರ್ಟ್‌ಗೆ ನಿಗದಿ ಪಡಿಸಿದ ಜಾಗವೇ ಬೇರೆಯಾಗಿದ್ದು, ಸ್ವಾಧೀನಕ್ಕೆ ಪಡೆದಿದ್ದೇ ಮತ್ತೊಂದು ಜಾಗವಾಗಿದೆ. ಸರ್ಕಾರದ ಬೆಟ್ಟವನ್ನು ಒತ್ತುವರಿ ಮಾಡಿ, ಅಕ್ರಮ‌ ಕಾಮಗಾರಿ ನಡೆದಿದೆ ಎಂದು ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಸತೀಶ್ ಅವರನ್ನು ಅಮಾನತು ಮಾಡಲಾಗಿದೆ.

Intro:ಅರಣ್ಯ ಭೂಮಿ ಒತ್ತುವರಿ: ಎಫ್‌ಡಿಎ ಅಧಿಕಾರಿ ಸತೀಶ್ ಅಮಾನತ್ತು

ಕೊಡಗು: ಭಾಗಮಂಡಲ‌ ಬೆಟ್ಟ ನೆಲಸಮ‌ ಮಾಡಿ ರೆಸಾರ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಎಫ್‌ಡಿಎ ಅಧಿಕಾರಿ ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿ ಅಮಾನತ್ತು ಮಾಡಿ‌ ಆದೇಶ ಹೊರಡಿಸಿದ್ದಾರೆ.

ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಸತೀಶ್ ಮಡಿಕೇರಿ ತಾಲೂಕಿನ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ ಅರಣ್ಯ ಪ್ರದೇಶವನ್ನು ನಾಶ ಪಡಿಸಿದ್ದರು.ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಆತಂಕ ಮನೆ ಮಾಡಿತ್ತು.‌ ಮಾಧ್ಯಮಗಳ ವರದಿ ಆಧರಿಸಿ ಕೊಡಗು ಡಿಸಿ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.‌

ರೆಸಾರ್ಟ್‌ಗೆ ಗ್ರ್ಯಾಂಟ್ ಆಗಿದ್ದೇ ಬೇರೆ.ಸ್ವಾಧೀನಕ್ಕೆ ಪಡೆದಿದ್ದೇ ಬೇರೆ ಜಾಗ.ಒತ್ತುವರಿ ಮಾಡಿದ್ದು ಸರ್ಕಾರಿ ಜಾಗ ಅರಣ್ಯವಲ್ಲ ಎಂಬುದು ಬೆಳಕಿಗೆ ಬಂದಿತ್ತು.‌ ಸರ್ಕಾರಿ ಜಾಗದ ಬೆಟ್ಟವನ್ನು ಒತ್ತುವರಿ ಮಾಡಿ ಅಕ್ರಮ‌ ಕಾಮಗಾರಿ ನಡೆದಿದೆ ಎಂದು ವರದಿಯಲ್ಲಿ ಸಾಭೀತಾದ ಹಿನ್ನಲೆಯಲ್ಲಿ ಅಧಿಕಾರಿ ಸತೀಶ್ ಅವರನ್ನು ಅಮಾನತ್ತು ಮಾಡಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.



Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.