ETV Bharat / state

ಮಡಿಕೇರಿಯಲ್ಲಿ ಬ್ರಿಟಿಷರ ಕಾಲದ ಪ್ರಾಚೀನ ಸ್ಮಾರಕ ಪತ್ತೆ! - ವಾಸಿ ತಾಣ ರಾಜಾಸೀಟ್‌ ಬಳಿ ಪತ್ತೆ

ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕವೊಂದು ಮಂಜಿನ ನಗರಿ ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್‌ ಬಳಿ ಪತ್ತೆಯಾಗಿದೆ.

British Monument in Madikeri
ಬ್ರಿಟಿಷರ ಕಾಲದ ಪ್ರಾಚೀನ ಸ್ಮಾರಕ ಪತ್ತೆ
author img

By

Published : Jan 10, 2020, 9:04 PM IST

ಕೊಡಗು/ಮಡಿಕೇರಿ: ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕವೊಂದು ಮಂಜಿನ ನಗರಿ ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್‌ ಬಳಿ ಪತ್ತೆಯಾಗಿದೆ.

ಸ್ಮಾರಕ ಹಿನ್ನೆಲೆ: 1929ರ ನವೆಂಬರ್ 29 ರಂದು ಈ ಸ್ಮಾರಕ ನೆಲೆ ನಿಂತಿದೆ. ಈ ಜಾಗದಲ್ಲಿ ಸ್ವತಂತ್ರ ಪೂರ್ವ ಭಾರತದ ವೈಸರಾಯ್​​ ಆಗಿದ್ದ ಲಾರ್ಡ್ ಇರ್ವಿನ್ ಕೊಡಗಿಗೆ ಭೇಟಿ ನೀಡಿ, ಇಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇರ್ವಿನ್​ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನ ಗುಡ್ಡದ ಮೇಲೆ ಪತ್ತೆಯಾಗಿದೆ.

ಬ್ರಿಟಿಷರ ಕಾಲದ ಪ್ರಾಚೀನ ಸ್ಮಾರಕ ಪತ್ತೆ

ಕಾಡು ಪಾಲಾಗಿ ಹಲವು ವರ್ಷಗಳು ಕಳೆದಿರುವ ಪರಿಣಾಮ ಸ್ಮಾರಕದ ಬಗ್ಗೆ ಇಲ್ಲಿನ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇಲ್ಲ. ಕೊಡಗಿನ ಇತಿಹಾಸ ತಿಳಿಸಲು ಪರಿಷ್ಕೃತಗೊಂಡಿರುವ 'ಕೊಡಗು ಗೆಜೆಟಿಯರ್' ಹಾಗೂ 'ಕೊಡಗಿನ ಇತಿಹಾಸ' ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್​​ ಇಲ್ಲಿಗೆ ಭೇಡಿ ನೀಡಿರುವ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಿದೆ ಎಂಬುದು ತಿಳಿದು ಬಂತು.

ಸ್ಮಾರಕಗಳು ವರ್ಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತಿವೆ. ಅವುಗಳ ಉಳಿಸುವ ಪ್ರಯತ್ನಕ್ಕೆ ಪುರಾತತ್ವ ಇಲಾಖೆ ಮುಂದಾಗಬೇಕಿದೆ ಎಂದು ತಜ್ಞರು ಒತ್ತಾಯಿಸುತ್ತಾರೆ. ಕಣ್ಣೆದುರಿನಲ್ಲಿಯೇ ಎಷ್ಟೋ ಸ್ಮಾರಕಗಳು ನಾಶವಾಗುತ್ತಿರುವುದು ಆತಂಕದ ಸಂಗತಿ. ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ತಜ್ಞರು ಹೇಳುತ್ತಾರೆ.

1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿತ್ತು. ಅದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಜೀವ ತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಕೊಡಗು/ಮಡಿಕೇರಿ: ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕವೊಂದು ಮಂಜಿನ ನಗರಿ ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್‌ ಬಳಿ ಪತ್ತೆಯಾಗಿದೆ.

ಸ್ಮಾರಕ ಹಿನ್ನೆಲೆ: 1929ರ ನವೆಂಬರ್ 29 ರಂದು ಈ ಸ್ಮಾರಕ ನೆಲೆ ನಿಂತಿದೆ. ಈ ಜಾಗದಲ್ಲಿ ಸ್ವತಂತ್ರ ಪೂರ್ವ ಭಾರತದ ವೈಸರಾಯ್​​ ಆಗಿದ್ದ ಲಾರ್ಡ್ ಇರ್ವಿನ್ ಕೊಡಗಿಗೆ ಭೇಟಿ ನೀಡಿ, ಇಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇರ್ವಿನ್​ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನ ಗುಡ್ಡದ ಮೇಲೆ ಪತ್ತೆಯಾಗಿದೆ.

ಬ್ರಿಟಿಷರ ಕಾಲದ ಪ್ರಾಚೀನ ಸ್ಮಾರಕ ಪತ್ತೆ

ಕಾಡು ಪಾಲಾಗಿ ಹಲವು ವರ್ಷಗಳು ಕಳೆದಿರುವ ಪರಿಣಾಮ ಸ್ಮಾರಕದ ಬಗ್ಗೆ ಇಲ್ಲಿನ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇಲ್ಲ. ಕೊಡಗಿನ ಇತಿಹಾಸ ತಿಳಿಸಲು ಪರಿಷ್ಕೃತಗೊಂಡಿರುವ 'ಕೊಡಗು ಗೆಜೆಟಿಯರ್' ಹಾಗೂ 'ಕೊಡಗಿನ ಇತಿಹಾಸ' ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್​​ ಇಲ್ಲಿಗೆ ಭೇಡಿ ನೀಡಿರುವ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಿದೆ ಎಂಬುದು ತಿಳಿದು ಬಂತು.

ಸ್ಮಾರಕಗಳು ವರ್ಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತಿವೆ. ಅವುಗಳ ಉಳಿಸುವ ಪ್ರಯತ್ನಕ್ಕೆ ಪುರಾತತ್ವ ಇಲಾಖೆ ಮುಂದಾಗಬೇಕಿದೆ ಎಂದು ತಜ್ಞರು ಒತ್ತಾಯಿಸುತ್ತಾರೆ. ಕಣ್ಣೆದುರಿನಲ್ಲಿಯೇ ಎಷ್ಟೋ ಸ್ಮಾರಕಗಳು ನಾಶವಾಗುತ್ತಿರುವುದು ಆತಂಕದ ಸಂಗತಿ. ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ತಜ್ಞರು ಹೇಳುತ್ತಾರೆ.

1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿತ್ತು. ಅದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಜೀವ ತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

Intro:ಮಡಿಕೇರಿಯಲ್ಲಿ ಬ್ರಿಟಿಷರ ಕಾಲದ ಪ್ರಾಚೀನ ಸ್ಮಾರಕ ಪತ್ತೆ..!

ಕೊಡಗು/ಮಡಿಕೇರಿ: ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕವೊಂದು ಮಂಜಿನ ನಗರಿ ಮಡಿಕೇರಿ ನಗರದ ಪ್ರವಾಸಿತಾಣ ರಾಜಾಸೀಟ್‌ ಬಳಿ ಪತ್ತೆಯಾಗಿದೆ.
ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕತೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ, ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಐತಿಹಾಸಿಕ ಸ್ಮಾರಕಗಳು ಚರಿತ್ರೆಯನ್ನು ಅರಿಯುವ ದಾರಿದೀಪಗಳಾಗಿದ್ದು, ಇಂಥ ಸ್ಮಾರಕಗಳನ್ನು ಉಳಿಸಿ ಬೆಳೆಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇನ್ನೂ ಊರಾಚೆ ಇರುವ ದಿಕ್ಕಿಲ್ಲದ ಸ್ಮಾರಕಗಳನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ನಿವೇಶನ ಅಭಿವೃದ್ಧಿ ಪಡಿಸುವವರ ಹಾವಳಿಯಂತೂ ವಿಪರೀತವಾಗಿರುವ ಕಾಲಘಟ್ಟದಲ್ಲಿ ಮಂಜಿನ ನಗರಿ ಮಡಿಕೇರಿಯ ನಗರದ ಹೃದಯ ಭಾಗದಂತಿರುವ ಇತಿಹಾಸದ ಕುರುಹುಗಳನ್ನು ಬಿಟ್ಟು ಹೋಗಿರುವ ಸ್ಮಾರಕವೊಂದು ಕಾಡಿನೊಳಗೆ ಇನ್ನು ಬಿಸಿಲು, ಗಾಳಿ-ಮಳೆಗೂ ಜಗ್ಗದೆ ಸುಸ್ಥಿತಿಯಲ್ಲಿ ಇನ್ನೂ ಭದ್ರವಾಗಿ ನೆಲೆ ನಿಂತಿದೆ.

ಸ್ಮಾರಕ ಹಿನ್ನೆಲೆ : ಈ ಸ್ಮಾರಕಕ್ಕೆ ಹಿನ್ನಲೆ ಇದೆ. ೧೯೨೯ ನವೆಂಬರ್ ೨೯ರಂದು ಈ ಸ್ಮಾರಕ ನೆಲೆ ನಿಂತಿರುವ ಜಾಗದಲ್ಲಿ, ಸ್ವತಂತ್ರ ಪೂರ್ವ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ನನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇವಿನ್ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನಲ್ಲಿರುವ ಗುಡ್ಡದ ಮೇಲಿದೆ. ಈ ಸ್ಮಾರಕವು ಇಲ್ಲಿರುವ ಬಗ್ಗೆ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇರಲಿಕ್ಕಿಲ್ಲ. ಈ ಸ್ಮಾರಕವು ಕಾಡು ಪಾಲಾಗಿ ೩೦ ವರ್ಷಗಳು ಕಳೆದಿರಬಹುದು. ಹಾಗಾಗಿ ಇಂದಿನ ಪೀಳಿಗೆಯವರಿಗೆ ಇರ್ವಿನ್ ಸ್ಮಾರಕದ ಬಗ್ಗೆ ಎಳ್ಳಷ್ಟು ಗೊತ್ತೆ ಇಲ್ಲಾ.
ಈ ಸ್ಮಾರಕದ ಬಗ್ಗೆ ಮಾಹಿತಿಗಾಗಿ ಕೊಡಗಿನ ಇತಿಹಾಸವನ್ನು ತಿಳಿಸುವ ಪರಿಷ್ಕೃತಗೊಂಡಿರುವ "ಕೊಡಗು ಗೆಜೆಟಿಯರ್" ಹಾಗೂ "ಕೊಡಗಿನ ಇತಿಹಾಸ" ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್ನನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ನೆನೆಪಿಗೆ ಒಂದು ಸ್ಮಾರಕವಿತ್ತು. ಅದು ಈಗ ಇಲ್ಲವಾಗಿದೆ. ಎಂದು ಮಾತ್ರ ಉಲ್ಲೇಖವಿದೆ. ಒಂದೊಂದು ಪ್ರಾಚೀನ ಸ್ಮಾರಕದ ಹಿಂದೆ ಒಂದೊಂದು ಕತೆ ಇರುವುದರಿಂದ ಮುಂದಿನ ಪೀಳಿಗೆಯ ಅರಿವು ವಿಸ್ತರಣೆಗೆ ನಾವು ಸಂರಕ್ಷಿಸಬೇಕಿದೆ. ಇನ್ನೂ ಸ್ಮಾರಕಗಳು ವರುಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತವೆ. ಮೂಲ ಸ್ವರೂಪ ಕ್ಷೀಣಿಸಿ ವಿರೂಪವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಅವುಗಳನ್ನು ಸಂರಕ್ಷಿಸಿ ಸಮಸ್ಥಿತಿಗೆ ಕೊಂಡೊಯ್ಯಬೇಕಾದ ಅಗತ್ಯತೆ ಇರುವುದರಿಂದ ಪುರಾತತ್ವ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಕಣ್ಣೆದುರಿನಲ್ಲಿಯೇ ಅನೇಕ ಸ್ಮಾರಕಗಳು ನಾಶವಾಗುತ್ತಿದ್ದರು. ಸಾರ್ವಜನಿಕರಲ್ಲಿ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ೧೯೪೦ ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಜೀವತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಕೆಲಸ ಆಗಬೇಕಿದೆ.ಅಲ್ಲದೆ ಈ ಸ್ಮಾರಕವತ್ಯನ್ನು ಉಳಿಸಿಕೊಳ್ಳುವ ಅಗತ್ಯವಿ್ರದೆ ಎನ್ನುತ್ತಾರೆ ಸ್ಥಳೀಯರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.