ವಿರಾಜಪೇಟೆ/ಕೊಡಗು: ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ತಾಲೂಕಿನ ಬಿಟ್ಟಂಗಾಲದಲ್ಲಿ ಸೆರೆ ಹಿಡಿಯಲಾಗಿದೆ.
ಬಿಟ್ಟಂಗಾಲದ ಗ್ರಾಮದ ಕಾಳೆಂಗಡ ರಮೇಶ್ ಮನೆಯಲ್ಲಿ ಸುಮಾರು ಹದಿನಾಲ್ಕು ಅಡಿ ಉದ್ದದ ಕಾಳಿಗ ಸರ್ಪ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ಗಗನ್ ಸುಮಾರು ಒಂದು ಗಂಟೆಗಳ ಕಾಲ ಶ್ರಮವಹಿಸಿ ಸುರಕ್ಷಿತವಾಗಿ ಹಿಡಿದು ಕೇರಳ ಕರ್ನಾಟಕ ಗಡಿಭಾಗದ ಮಾಕುಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಇದರ ಬಗ್ಗೆ ಮಾತನಾಡಿದ ಗಗನ್, ಸಾಮಾನ್ಯವಾಗಿ ಸರ್ಪಗಳು ಈ ಸಮಯದಲ್ಲಿ ತಮ್ಮ ಪೊರೆ ಕಳಚಲು ಪಾಳುಬಿದ್ದ ಮನೆಗಳು, ಮರದ ಪೊಟರೆಗಳಲ್ಲಿ ಮಲಗಿರುತ್ತವೆ. ದಯವಿಟ್ಟು ಸಾರ್ವಜನಿಕರು ಹಾವುಗಳನ್ನು ಕಂಡಲ್ಲಿ ಅವುಗಳಿಗೆ ಹಾನಿ ಮಾಡದೇ ನನಗೆ ಕರೆ ಮಾಡಿ. ನಾನು ಅವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುತ್ತೇನೆ ಎಂದು ಅವರು ತಿಳಿಸಿದರು.