ETV Bharat / state

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಿಲ್ಲ ಸಾರಥಿ... ಸರ್ಕಾರದ ನಿರ್ಲಕ್ಷ್ಯಕ್ಕೆ ಭುಗಿಲೆದ್ದ ಆಕ್ರೋಶ - ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ

ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಜನ್ಮತಾಳಿದ ಮಂಡಳಿ. ಆದರೀಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಸ್ ಹೋಗುವ ಆತಂಕ ಎದುರಾಗಿದೆ.

Welfare Karnataka Region has no president in kalburgi
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಿಲ್ಲ ಸಾರಥಿ
author img

By

Published : Jan 24, 2020, 5:55 PM IST

ಕಲಬುರಗಿ: ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಜನ್ಮತಾಳಿದ ಮಂಡಳಿ. ಆದರೀಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಸ್ ಹೋಗುವ ಆತಂಕ ಎದುರಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಿಲ್ಲ ಸಾರಥಿ

ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ, ಇದುವರೆಗೆ ಕೆಕೆಆರ್​​ಡಿಬಿಗೆ ಅಧ್ಯಕ್ಷರನ್ನ ನೇಮಕ‌ ಮಾಡಿಲ್ಲ. ಇದರಿಂದ ಆರು ಜಿಲ್ಲೆಗಳಲ್ಲಿ ಮಂಡಳಿ ಅಡಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಮಗಾರಿಗಳ ರೂಪುರೇಷೆಗಳನ್ನು ತಯಾರು ಮಾಡಲು, ಅವುಗಳನ್ನು ಅನುಷ್ಠಾನಕ್ಕೆ ತರಲು ಸಾರಥಿ ಇಲ್ಲದೇ ನನೆಗುದಿಗೆ ಬಿದ್ದಿವೆ. ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಮಂಡಳಿಯ ಸಭೆ ಕರೆಯಬೇಕಿ ಎಂಬ ನಿಯಮ ಇದೆ. ಆದರೂ ಸದ್ಯ ಒಂದು ಸಭೆ ನಡೆಸಿಲ್ಲದಿರುವುದು ಈ ಭಾಗದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2014 ರಿಂದ ಇಲ್ಲಿವರೆಗೆ 5,300 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದ್ರೆ ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 3,300 ಕೋಟಿ ರೂ. ಅನುದಾನವನ್ನು ಮಾತ್ರ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ ಅನುದಾನ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗದೇ ಉಳಿದಿದ್ದು, ಅನುದಾನ ವಾಪಸ್ ಹೋಗುವ ಆತಂಕ‌ ಎದುರಾಗಿದೆ ಅಂತಾರೇ ಹೋರಾಟಗಾರಾದ ಲಕ್ಷ್ಮಣ ದಸ್ತಿ..

ಸೆಪ್ಟೆಂಬರ್ 17ರಂದು ಕಲಬುರಗಿಗೆ ಬಂದು ಹೈದರಾಬಾದ್ - ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ತೆರಳಿದ ಸಿಎಂ ಯಡಿಯೂರಪ್ಪ, ನಿಜವಾಗಿ ಕಲ್ಯಾಣ ಕರ್ನಾಟಕ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಇಂದು ವ್ಯಾಪಕವಾಗಿ ಕೇಳಿಬರುತ್ತಿದೆ. ಇನ್ನಾದರೂ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಅನ್ನೋದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯ.

ಕಲಬುರಗಿ: ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಜನ್ಮತಾಳಿದ ಮಂಡಳಿ. ಆದರೀಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಸ್ ಹೋಗುವ ಆತಂಕ ಎದುರಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಿಲ್ಲ ಸಾರಥಿ

ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ, ಇದುವರೆಗೆ ಕೆಕೆಆರ್​​ಡಿಬಿಗೆ ಅಧ್ಯಕ್ಷರನ್ನ ನೇಮಕ‌ ಮಾಡಿಲ್ಲ. ಇದರಿಂದ ಆರು ಜಿಲ್ಲೆಗಳಲ್ಲಿ ಮಂಡಳಿ ಅಡಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಮಗಾರಿಗಳ ರೂಪುರೇಷೆಗಳನ್ನು ತಯಾರು ಮಾಡಲು, ಅವುಗಳನ್ನು ಅನುಷ್ಠಾನಕ್ಕೆ ತರಲು ಸಾರಥಿ ಇಲ್ಲದೇ ನನೆಗುದಿಗೆ ಬಿದ್ದಿವೆ. ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಮಂಡಳಿಯ ಸಭೆ ಕರೆಯಬೇಕಿ ಎಂಬ ನಿಯಮ ಇದೆ. ಆದರೂ ಸದ್ಯ ಒಂದು ಸಭೆ ನಡೆಸಿಲ್ಲದಿರುವುದು ಈ ಭಾಗದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2014 ರಿಂದ ಇಲ್ಲಿವರೆಗೆ 5,300 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದ್ರೆ ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 3,300 ಕೋಟಿ ರೂ. ಅನುದಾನವನ್ನು ಮಾತ್ರ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ ಅನುದಾನ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗದೇ ಉಳಿದಿದ್ದು, ಅನುದಾನ ವಾಪಸ್ ಹೋಗುವ ಆತಂಕ‌ ಎದುರಾಗಿದೆ ಅಂತಾರೇ ಹೋರಾಟಗಾರಾದ ಲಕ್ಷ್ಮಣ ದಸ್ತಿ..

ಸೆಪ್ಟೆಂಬರ್ 17ರಂದು ಕಲಬುರಗಿಗೆ ಬಂದು ಹೈದರಾಬಾದ್ - ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ತೆರಳಿದ ಸಿಎಂ ಯಡಿಯೂರಪ್ಪ, ನಿಜವಾಗಿ ಕಲ್ಯಾಣ ಕರ್ನಾಟಕ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಇಂದು ವ್ಯಾಪಕವಾಗಿ ಕೇಳಿಬರುತ್ತಿದೆ. ಇನ್ನಾದರೂ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಅನ್ನೋದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯ.

Intro:ಕಲಬುರಗಿ: ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಜನ್ಮತಾಳಿದ ಮಂಡಳಿ. ಆದರಿಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಟಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಾಸ್ ಹೋಗುವ ಆತಂಕ ಎದುರಾಗಿದೆ.Body:ಹಿಂದುಳಿದ ಜಿಲ್ಲೆಗಳು ಎನ್ನುವ ಹಣೆಪಟ್ಟಿ ಹೋಗಿಸಲು ಸರ್ಕಾರ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ನಂಜುಂಡಪ್ಪ ವರದಿಯಂತೆ ಕೆಕೆಆರ್ ಡಿಬಿಗೆ ಬಜೆಟ್‌ ನಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ಕೂಡ ಒದಗಿಸಲಾಗುತ್ತಿದೆ. ಆದರಿಗ ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಮಂಡಳಿ ಹಲ್ಲಿಲ್ಲದ ಹಾವಿನಂತಾಗಿದೆ‌. ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯುತ್ತಿದ್ದರು, ಇದುವರೆಗೆ ಕೆಕೆಆರ್ ಡಿಬಿಗೆ ಅಧ್ಯಕ್ಷರನ್ನ ನೇಮಕ‌ ಮಾಡಿಲ್ಲ. ಇದರಿಂದ ಆರು ಜಿಲ್ಲೆಗಳಲ್ಲಿ ಮಂಡಳಿ ಅಡಿಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಮಗಾರಿಗಳ ರೂಪುರೇಷೆಗಳನ್ನು ತಯ್ಯಾರು ಮಾಡಲು, ಅವುಗಳನ್ನು ಅನುಷ್ಠಾನಕ್ಕೆ ತರಲು ಸಾರಥಿ ಇಲ್ಲದೆ ನೆನೆಗುದಿಗೆ ಬಿದ್ದಿದೆ. ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿಯಾದ್ರು ಮಂಡಳಿಯ ಸಭೆ ಕರೆಯಬೇಕೆಂಬ ನಿಯಮ ಇದರೂ ಸದ್ಯ ಒಂದು ಸಭೆ ನಡೆಸಿಲ್ಲ. ಇದು ಈ ಭಾಗದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಬೈಟ್:- ಲಕ್ಷ್ಮಣ ದಸ್ತಿ, ಹಿರಿಯ ಹೋರಾಟಗಾರರು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2014 ರಿಂದ ಇಲ್ಲಿವರೆಗೆ 5,300 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದ್ರೆ ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಬ್ದಾರಿಯಿಂದ ಕೇವಲ 3,300 ಕೋಟಿ ರೂ. ಅನುದಾನವನ್ನ ಮಾತ್ರ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ ಅನುದಾನ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಖರ್ಚಾಗದೆ ಉಳಿದಿದ್ದು, ಅನುದಾನ ವಾಪಾಸ್ ಹೊಗುವ ಆತಂಕ‌ ಎದುರಾಗಿದೆ. ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಸಮಿಶ್ರ ಸರ್ಕಾರವಿದ್ದಾಗ ಹುಮನಬಾದ್ ಶಾಸಕ ರಾಜಶೇಖರ್ ಪಾಟೀಲ್‌ರನ್ನ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಮಂಡಳಿಗೆ ಇದುವರೆಗೆ ಅಧ್ಯಕ್ಷರ ನೇಮಕ ಮಾಡಿಲ್ಲದ ಕಾರಣ ಅಧ್ಯಕ್ಷರಿಲ್ಲದೆ ಕಚೇರಿಗೆ ಬಿಗ ಬೀಳುತ್ತಿದೆ. ಕೇವಲ ಸರ್ಕಾರ ರಚನೆಗೆ ಕಾರಣರಾದವರಿಗೆ ಮಂತ್ರಿ ಸ್ಥಾನ ಹಾಗೂ ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಯೂಸಿ ಆಗಿರುವ ಸಿಎಂ ಬಿಎಸ್‌ವೈ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೈಟ್:- ಲಕ್ಷ್ಮಣ ದಸ್ತಿ, ಹಿರಿಯ ಹೊರಾಟಗಾರರು.Conclusion:ಸೆಪ್ಟೆಂಬರ್ 17ರಂದು ಕಲಬುರಗಿಗೆ ಬಂದು ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ತೆರಳಿದ ಸಿಎಂ ಯಡಿಯೂರಪ್ಪ, ನಿಜವಾಗಿ ಕಲ್ಯಾಣ ಕರ್ನಾಟಕ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಇದು ವ್ಯಾಪಕವಾಗಿ ಕೇಳಿಬರುತ್ತಿದೆ. ಇನ್ನಾದರೂ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಅನ್ನೊದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯವಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.