ETV Bharat / state

ಪ್ರವಾಹದ ದುಃಸ್ಥಿತಿಯಲ್ಲಿ ರಾಜಕೀಯ ಎಷ್ಟು ಸರಿ: ಜಾಧವ್​ ಪ್ರಶ್ನೆ

author img

By

Published : Oct 17, 2020, 8:20 PM IST

ಜನ ಪ್ರವಾಹದಿಂದ ಬಳಲುತ್ತಿದ್ದಾರೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ. ನನ್ನ ತೇಜೋವಧೆ ಮಾಡುವ ಬದಲು ಎಲ್ಲರೂ ಒಗ್ಗೂಡಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್​ ಹೇಳಿದ್ದಾರೆ.

umesh jadav speak about karnataka flood
ಪ್ರವಾಹದ ದುಸ್ಥಿತಿಯಲ್ಲಿ ರಾಜಕೀಯ ಎಷ್ಟು ಸರಿ : ಜಾಧವ ಪ್ರಶ್ನೆ

ಕಲಬುರಗಿ : ಜನ ಪ್ರವಾಹದಿಂದ ಬಳಲುತ್ತಿದ್ದಾರೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ. ನನ್ನ ತೇಜೋವಧೆ ಮಾಡುವ ಬದಲು ಒಗ್ಗೂಡಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್​ ಹೇಳಿದ್ದಾರೆ.

ತಾಲೂಕಿನ ಮಳಖೇಡ ಗ್ರಾಮದ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾದಿಂದ ಬಳಲಿ, ನಂತರ ಹೃದಯ ಸಂಬಂಧಿ ಸಮಸ್ಯೆಗೆ ಗುರಿಯಾಗಿದ್ದೆ. ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೂ ನನ್ನ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೆ, ಕೆಲವರು ಸುಳ್ಳು ಪ್ರಚಾರ ಮಾಡಿ, ಶಾಸಕರು ಮತ್ತು ಸಂಸದರು ನಾಪತ್ತೆಯಾಗಿದ್ದಾರೆ ಎಂದು ನನ್ನ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹದ ದುಃಸ್ಥಿತಿಯಲ್ಲಿ ರಾಜಕೀಯ ಎಷ್ಟು ಸರಿ : ಜಾಧವ್​ ಪ್ರಶ್ನೆ

ಜನರ ಸಮಸ್ಯೆ ಬಂದಾಗ ಜೊತೆಯಾಗಿ ಕೆಲಸ ಮಾಡಬೇಕೆ ಹೊರತು ರಾಜಕೀಯ ಮಾಡಬಾರದು ಎಂದು ಪರೋಕ್ಷವಾಗಿ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದವರ ರಕ್ಷಣೆ ಮಾಡುವಂತೆ ಕರೆ ಬಂದಿದ್ದವು. ಕೂಡಲೇ ಎನ್.ಡಿ.ಆರ್.ಎಫ್. ನವರಿಗೆ ತಿಳಿಸಿದ್ದೆ. ನಾನು ಜನರ ಕೆಲಸ ಸದಾ ಮಾಡುತ್ತಾ ಬಂದವನಾಗಿದ್ದೇನೆ. ಕಳೆದ ಬಾರಿ ಪ್ರವಾಹ ಬಂದಾಗ 24 ಗಂಟೆಗಳಲ್ಲಿ ಸಂಸತ್‌ನಿಂದ ನೇರವಾಗಿ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿದ್ದೆ. ಜನರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಮತ್ತು ಕೇಂದ್ರ ತಂಡದೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದರು.

ಕಲಬುರಗಿ : ಜನ ಪ್ರವಾಹದಿಂದ ಬಳಲುತ್ತಿದ್ದಾರೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ. ನನ್ನ ತೇಜೋವಧೆ ಮಾಡುವ ಬದಲು ಒಗ್ಗೂಡಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್​ ಹೇಳಿದ್ದಾರೆ.

ತಾಲೂಕಿನ ಮಳಖೇಡ ಗ್ರಾಮದ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾದಿಂದ ಬಳಲಿ, ನಂತರ ಹೃದಯ ಸಂಬಂಧಿ ಸಮಸ್ಯೆಗೆ ಗುರಿಯಾಗಿದ್ದೆ. ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೂ ನನ್ನ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೆ, ಕೆಲವರು ಸುಳ್ಳು ಪ್ರಚಾರ ಮಾಡಿ, ಶಾಸಕರು ಮತ್ತು ಸಂಸದರು ನಾಪತ್ತೆಯಾಗಿದ್ದಾರೆ ಎಂದು ನನ್ನ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹದ ದುಃಸ್ಥಿತಿಯಲ್ಲಿ ರಾಜಕೀಯ ಎಷ್ಟು ಸರಿ : ಜಾಧವ್​ ಪ್ರಶ್ನೆ

ಜನರ ಸಮಸ್ಯೆ ಬಂದಾಗ ಜೊತೆಯಾಗಿ ಕೆಲಸ ಮಾಡಬೇಕೆ ಹೊರತು ರಾಜಕೀಯ ಮಾಡಬಾರದು ಎಂದು ಪರೋಕ್ಷವಾಗಿ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದವರ ರಕ್ಷಣೆ ಮಾಡುವಂತೆ ಕರೆ ಬಂದಿದ್ದವು. ಕೂಡಲೇ ಎನ್.ಡಿ.ಆರ್.ಎಫ್. ನವರಿಗೆ ತಿಳಿಸಿದ್ದೆ. ನಾನು ಜನರ ಕೆಲಸ ಸದಾ ಮಾಡುತ್ತಾ ಬಂದವನಾಗಿದ್ದೇನೆ. ಕಳೆದ ಬಾರಿ ಪ್ರವಾಹ ಬಂದಾಗ 24 ಗಂಟೆಗಳಲ್ಲಿ ಸಂಸತ್‌ನಿಂದ ನೇರವಾಗಿ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿದ್ದೆ. ಜನರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಮತ್ತು ಕೇಂದ್ರ ತಂಡದೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.