ETV Bharat / state

ಈಟಿವಿ ಇಂಪ್ಯಾಕ್ಟ್​​: ಅನಾಥ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಿಸಿತು ನಮ್ಮ ವರದಿ - undefined

ಶಹಾಬಾದ್​ ತಾಲೂಕಿನ ಮರತೂರು ಗ್ರಾಮದಲ್ಲಿ ಹೆತ್ತವರನ್ನು ಕಳೆದುಕೊಂಡು ಯಾರ ಆಸರೆ ಸಿಗದೆ ಮೂವರು ಮಕ್ಕಳು ಅನಾಥರಾಗಿದ್ದಾರೆ. ಈ ಕುರಿತು 'ಈಟಿವಿ ಭಾರತ​'ದಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಅಧಿಕಾರಿಗಳು ಆ ಮಕ್ಕಳಿಗೆ ನೆಲೆ ಒದಗಿಸಿದ್ದಾರೆ.

ಕಲಬುರಗಿ
author img

By

Published : Jun 14, 2019, 1:46 PM IST

ಕಲಬುರಗಿ : ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳ ಬಗ್ಗೆ 'ಈಟಿವಿ ಭಾರತ' ಸುದ್ದಿ ಪ್ರಕಟಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿ ಎಚ್ಚೆತ್ತುಕೊಂಡಿದ್ದು, ಮೂರು ಕಂದಮ್ಮಗಳಿಗೆ ನೆಲೆ ಒದಗಿಸಿದೆ.

ಶಹಾಬಾದ್​ ತಾಲೂಕಿನ ಮರತೂರು ಗ್ರಾಮದಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಯಾರ ಆಸರೆಯೂ ಸಿಗದೆ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದರು. ಮಧು, ಮನೋಜ ಹಾಗೂ ಮಾಯಾಂಕ್ ಎಂಬ ಮೂವರು ಅನಾಥ ಮಕ್ಕಳ ಕುರಿತು 'ಈಟಿವಿ ಭಾರತ' ದಲ್ಲಿ "ಪುಟ್ಟ ಕಂದಮ್ಮಗಳ ಬದುಕಲ್ಲಿ ವಿಧಿಯಾಟ: ತುತ್ತು ಅನ್ನಕ್ಕಾಗಿ ನಿತ್ಯ ಪರದಾಟ" ಎಂಬ ಶಿರ್ಷಿಕೆಯಡಿ ವಿಸ್ತೃತ ಸುದ್ದಿ ಬಿತ್ತರಿಲಾಗಿತ್ತು. ಸುದ್ದಿ ಪ್ರಕಟವಾದ ಒಂದೆರಡು ಗಂಟೆಗಳಲ್ಲೇ ಮಕ್ಕಳ ನೋವಿಗೆ ರಾಜ್ಯದ ಜನರ ಹೃದಯ ಮಿಡಿದಿದೆ. ರಾಜ್ಯದ ಹಲವೆಡೆಯಿಂದ ಸಹಾಯದ ಹಸ್ತಗಳು ಚಾಚಿ ಬಂದಿವೆ.

ಅನಾಥರಾಗಿದ್ದ ಮೂವರು ಮಕ್ಕಳಿಗೆ ನೆಲೆ ಸಿಕ್ಕಿದೆ

ಇನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ಸುಂದರ್ ಅವರು ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿಯವರು ಮರತೂರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೂವರು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣ ನೀಡಲು ಸರ್ಕಾರ ಮುಂದೆ ಬಂದಿದ್ದು, ಮರತೂರು ಗ್ರಾಮದಿಂದ ಈಗಾಗಲೇ ಆ ಮಕ್ಕಳನ್ನು ಕಲಬುರಗಿ ಬಾಲ ಮಂದಿರಕ್ಕೆ ಕರೆತರಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ. ಅವರ ಲಾಲನೆ, ಪೋಷಣೆ ಜೊತೆಗೆ ಶಿಕ್ಷಣದ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಳ್ಳುತ್ತಿದೆ ಎಂದರು. ಅಲ್ಲದೆ, ಈ ಕುರಿತು ಸುದ್ದಿ ಪ್ರಕಟಿಸಿದ್ದ 'ಈಟಿವಿ ಭಾರತ' ಸುದ್ದಿ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಹಳ್ಳಿಗಳಲ್ಲಿ ಈ ರೀತಿಯ ಪ್ರಕರಣಗಳು ತುಂಬಾ ಇವೆ. ಈ ರೀತಿಯ ಸುದ್ದಿಗಳು ಪ್ರಕಟಿಸುವುದರಿಂದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಬಹುದು ಎಂದು ಸುಂದರ್​ ಹೇಳಿದರು.

ಅನಾಥವಾಗಿದ್ದ ನಮಗೆ ಒಂದು ನೆಲೆ ಸಿಕ್ಕಿದ್ದು, ಇದಕ್ಕೆ ಕಾರಣೀಕರ್ತರಾದ 'ಈಟಿವಿ ಭಾರತ' ಗೆ ಬಾಲಕಿ ಮಧು ಧನ್ಯವಾದ ತಿಳಿಸಿದ್ದಾಳೆ. ಒಟ್ಟಾರೆ ಈಟಿವಿ ಭಾರತದ ವರದಿಗೆ ಸ್ಪಂದಿಸಿರುವ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಮತ್ತು ಕಾಳಜಿಗೆ ನಮ್ಮ ಕಡೆಯಿಂದ ಧನ್ಯವಾದ. ಹಾಗೇ ಆಶ್ರಯ ಪಡೆದಿರುವ ಈ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಲಿ ಅನ್ನೋದು ನಮ್ಮ ಆಶಯ.

ಕಲಬುರಗಿ : ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳ ಬಗ್ಗೆ 'ಈಟಿವಿ ಭಾರತ' ಸುದ್ದಿ ಪ್ರಕಟಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿ ಎಚ್ಚೆತ್ತುಕೊಂಡಿದ್ದು, ಮೂರು ಕಂದಮ್ಮಗಳಿಗೆ ನೆಲೆ ಒದಗಿಸಿದೆ.

ಶಹಾಬಾದ್​ ತಾಲೂಕಿನ ಮರತೂರು ಗ್ರಾಮದಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಯಾರ ಆಸರೆಯೂ ಸಿಗದೆ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದರು. ಮಧು, ಮನೋಜ ಹಾಗೂ ಮಾಯಾಂಕ್ ಎಂಬ ಮೂವರು ಅನಾಥ ಮಕ್ಕಳ ಕುರಿತು 'ಈಟಿವಿ ಭಾರತ' ದಲ್ಲಿ "ಪುಟ್ಟ ಕಂದಮ್ಮಗಳ ಬದುಕಲ್ಲಿ ವಿಧಿಯಾಟ: ತುತ್ತು ಅನ್ನಕ್ಕಾಗಿ ನಿತ್ಯ ಪರದಾಟ" ಎಂಬ ಶಿರ್ಷಿಕೆಯಡಿ ವಿಸ್ತೃತ ಸುದ್ದಿ ಬಿತ್ತರಿಲಾಗಿತ್ತು. ಸುದ್ದಿ ಪ್ರಕಟವಾದ ಒಂದೆರಡು ಗಂಟೆಗಳಲ್ಲೇ ಮಕ್ಕಳ ನೋವಿಗೆ ರಾಜ್ಯದ ಜನರ ಹೃದಯ ಮಿಡಿದಿದೆ. ರಾಜ್ಯದ ಹಲವೆಡೆಯಿಂದ ಸಹಾಯದ ಹಸ್ತಗಳು ಚಾಚಿ ಬಂದಿವೆ.

ಅನಾಥರಾಗಿದ್ದ ಮೂವರು ಮಕ್ಕಳಿಗೆ ನೆಲೆ ಸಿಕ್ಕಿದೆ

ಇನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ಸುಂದರ್ ಅವರು ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿಯವರು ಮರತೂರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೂವರು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣ ನೀಡಲು ಸರ್ಕಾರ ಮುಂದೆ ಬಂದಿದ್ದು, ಮರತೂರು ಗ್ರಾಮದಿಂದ ಈಗಾಗಲೇ ಆ ಮಕ್ಕಳನ್ನು ಕಲಬುರಗಿ ಬಾಲ ಮಂದಿರಕ್ಕೆ ಕರೆತರಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ. ಅವರ ಲಾಲನೆ, ಪೋಷಣೆ ಜೊತೆಗೆ ಶಿಕ್ಷಣದ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಳ್ಳುತ್ತಿದೆ ಎಂದರು. ಅಲ್ಲದೆ, ಈ ಕುರಿತು ಸುದ್ದಿ ಪ್ರಕಟಿಸಿದ್ದ 'ಈಟಿವಿ ಭಾರತ' ಸುದ್ದಿ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಹಳ್ಳಿಗಳಲ್ಲಿ ಈ ರೀತಿಯ ಪ್ರಕರಣಗಳು ತುಂಬಾ ಇವೆ. ಈ ರೀತಿಯ ಸುದ್ದಿಗಳು ಪ್ರಕಟಿಸುವುದರಿಂದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಬಹುದು ಎಂದು ಸುಂದರ್​ ಹೇಳಿದರು.

ಅನಾಥವಾಗಿದ್ದ ನಮಗೆ ಒಂದು ನೆಲೆ ಸಿಕ್ಕಿದ್ದು, ಇದಕ್ಕೆ ಕಾರಣೀಕರ್ತರಾದ 'ಈಟಿವಿ ಭಾರತ' ಗೆ ಬಾಲಕಿ ಮಧು ಧನ್ಯವಾದ ತಿಳಿಸಿದ್ದಾಳೆ. ಒಟ್ಟಾರೆ ಈಟಿವಿ ಭಾರತದ ವರದಿಗೆ ಸ್ಪಂದಿಸಿರುವ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಮತ್ತು ಕಾಳಜಿಗೆ ನಮ್ಮ ಕಡೆಯಿಂದ ಧನ್ಯವಾದ. ಹಾಗೇ ಆಶ್ರಯ ಪಡೆದಿರುವ ಈ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಲಿ ಅನ್ನೋದು ನಮ್ಮ ಆಶಯ.

Intro:ಕಲಬುರಗಿ: ಅಪ್ಪ ಅಮ್ಮನನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದ ಮೂವರು ಕಂದಮ್ಮಗಳಿಗೆ ಈಟಿವಿ ಭಾರತ ಮಾಡಿದ ಸುದ್ದಿಯಿಂದ ಒಂದು ನೇಲೆ ಸಿಕ್ಕಿದೆ. ಈಟಿವಿ ಭಾರತಕ್ಕೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದ್ದು ಎಲ್ಲಡೆ ಶ್ಲ್ಯಾಘನೆ ವ್ಯಕ್ತವಾಗಿದೆ.

ಹೌದು., ಶಹಾಬಾದ ತಾಲೂಕಿನ ಮರತೂರು ಗ್ರಾಮದಲ್ಲಿ ಐದು ವರ್ಷದ ಹಿಂದೆ ತಾಯಿಯನ್ನು ಹಾಗೂ ಮೂರು ತಿಂಗಳ ಹಿಂದೆ ಅಪ್ಪನನ್ನು ಕಳೆದುಕೊಂಡು ಯಾರ ಆಸರೆ ಸಿಗದೆ ಒಂದೊತ್ತು ಊಟಕ್ಕೂ ಭೀಕ್ಷೆ ಬೇಡಿ ತಿನ್ನುತ್ತಿದ್ದ, ಮಧು, ಮನೋಜ ಹಾಗೂ ಮಾಯಾಂಕ್ ಎಂಬ ಮೂವರು ಅನಾಥ ಮಕ್ಕಳ ಬಗ್ಗೆ ನಿನ್ನೆ ಈಟಿವಿ ಭಾರತ "ಪುಟ್ಟ ಕಂದಮ್ಮಗಳ ಬದುಕಲ್ಲಿ ವಿಧಿಯಾಟ: ತುತ್ತು ಅನ್ನಕ್ಕಾಗಿ ನಿತ್ಯ ಪರದಾಟ" ಎಂಬ ಶಿರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಸುದ್ದಿ ಬಿತ್ತರಗೊಂಡ ಒಂದೆರಡು ಗಂಟೆಯಲ್ಲಿಯೇ ಕಂದಮ್ಮಗಳ ಬಾಳು ಬೆಳಗಿದೆ. ಮಕ್ಕಳ ನೋವಿಗೆ ರಾಜ್ಯದ ಜನರ ಹೃದಯ ಮಿಡಿದಿದೆ. ರಾಜ್ಯದ ಹಲವಡೆಯಿಂದ ಸಹಾಯದ ಹಸ್ತಗಳು ಚಾಚಿ ಬಂದಿವೆ. ಸುದ್ದಿ ಬಿತ್ತರಗೊಂಡ ಕೇಲ ಗಂಟೆಯಲ್ಲಿಯೇ ಮಕ್ಕಳ ಕಲ್ಯಾಣ ಸಮಿತಿಯವರು ಮರತೂರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೂವರು ಮಕ್ಕಳ ರಕ್ಷಣೆ -ಪೊಷಣೆ- ಶಿಕ್ಷಣ ನೀಡಲು ಸರ್ಕಾರ ಮುಂದೆ ಬಂದಿದೆ. ಮರತೂರು ಗ್ರಾಮದಿಂದ ಈಗಾಗಲೇ ಮೂವರು ಮಕ್ಕಳನ್ನು ಕಲಬುರಗಿ ಬಾಲ ಮಂದಿರಕ್ಕೆ ಕರೆತರಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ. ಮಕ್ಕಳ ಲಾಲನೆ ಪೊಷನೆ ಜೊತೆಗೆ ಶಿಕ್ಷಣದ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಳ್ಳುತ್ತಿದೆ. ಅಲ್ಲದೆ ಈಟಿವಿ ಭಾರತದ ಮಾನವಿಯ ವರದಿಗೆ ಅಧಿಕಾರಿಗಳು ಶ್ಲ್ಯಾಘನೆ ವ್ಯಕ್ತ ಪಡಿಸಿದ್ದಾರೆ.

ಬೈ: ಸುಂದರ್ ( ಸಂಯೋಜಕರು ಚೈಲ್ಡ್ ಲೈನ್ ಉಪಕೇಂದ್ರ)

ಮರತೂರು ಗ್ರಾಮದ ಈ ಮಕ್ಕಳ ತಾಯಿ ನಾಗಮ್ಮ ಐದು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ತಾಯಿ ಸಾವಿನ ನಂತರ ಮಕ್ಕಳ ಪಾಲಿನ ಸರ್ವಸ್ವವು ಆಗಿದ್ದ ತಂದೆ ಶಂಕರ್ ಕೂಡಾ ಈಗ ಮೂರು ತಿಂಗಳ ಹಿಂದೆ ಹೃದಯಾಘಾತಕ್ಕೆ ಬಲಿಯಾಗಿ ಅಕಾಲಿಕ ಮರಣ ಹೊಂದಿದ್ದಾರೆ. ಶಂಕರ್ ಕಲಬುರಗಿ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ರು ಆದ್ರೆ ಮಕ್ಕಳಿಗೆ ಅಲ್ಲಿನ ಯಾವುದೆ ಸಹಾಯ ಸಿಗಲಿಲ್ಲ, ಮರತೂರ ಗ್ರಾಮದಲ್ಲಿ ಹಾಳು ಬಿದ್ದ ಮನೆ ಹೊರತಾಗಿ ಆಸ್ತಿ ಅನ್ನೋದು ಏನು ಇಲ್ಲ, ಸಂಬಂದಿಗಳು ಎಷ್ಟು ದಿನ ಆಸರೆ ಆಗ್ತಾರೆ ಅವರು ಕೈಬಿಟ್ಟಾಗ ಒಂದೋತ್ತಿನ ಊಟಕ್ಕೆ ಭೀಕ್ಷೆ ಬೇಡಬೇಕಾಗಿತ್ತು. ಇಂತಹ ಕರಳು ಹಿಂಡುವ ಸುದ್ದಿ ಈಟಿವಿ ಭಾರತದ ಗಮನಕ್ಕೆ ಬಂದಿದ್ದೆ ತಡ ನೇರವಾಗಿ ಮರತೂರ ಗ್ರಾಮಕ್ಕೆ ಹೋಗಿ ವಾಸ್ತವತೆ ಕುರಿತಾಗಿ ಜನರ ಗಮನಕ್ಕೆ ತಂದಿಟ್ಟಿದ್ದೇವೆ. ಇದೀಗ ಉತ್ತಮ ಸ್ಪಂಧನೆ ಮಕ್ಕಳಿಗೆ ಸಿಕ್ಕಿದೆ. ಈಟಿವಿ ಭಾರತದಲ್ಲಿ ತಮ್ಮ ಸ್ಟೋರಿ ನೋಡಿ ಮಕ್ಕಳು ಸ್ವತಾಃ ತಾವೇ ಕಣ್ಣೀರಿಟ್ಟಿದ್ದಾರೆ. ಕತ್ತಲಾಗಿದ್ದ ನಮ್ಮ ದಾರಿಗೆ ದೀಪ ಹಿಡಿದ ಈಟಿವಿ ಭಾರತಕ್ಕೆ ಮನದಾಳದಿಂದ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದು, ನಮ್ಮ ಶ್ರಮ ಸ್ವಾರ್ಥಕವಾಗಿದೆ.

ಬೈಟ್: ಮಧು (ಅನಾತ ಬಾಲಕಿ)

ಅನಾತ ಮಕ್ಕಳ ವಿಷಯ ಈಗ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ಬಂದಿದೆ. ಮಕ್ಕಳನ್ನು ಮೋರಾರ್ಜಿ ಶಾಲೆಗೆ ದಾಖಲು ಮಾಡಿ ಅವರಿಗೆ ಉತ್ತಮ ಶಿಕ್ಷಣ ಜೊತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ. ಇದಲ್ಲದೆ ಮಕ್ಕಳಿಗಾಗಿ ಕನ್ನಡದ ಹೃದಯಗಳು ಮಿಡಿದಿದ್ದು ಸಹಾಯಕ್ಕೆ ಮುಂದೆ ಬಂದಿದ್ದು ಮಕ್ಕಳ ಬಾಳಿನಲ್ಲಿ ಜೋತಿ ಬೆಳಗಿದೆ.
Body:ಕಲಬುರಗಿ: ಅಪ್ಪ ಅಮ್ಮನನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದ ಮೂವರು ಕಂದಮ್ಮಗಳಿಗೆ ಈಟಿವಿ ಭಾರತ ಮಾಡಿದ ಸುದ್ದಿಯಿಂದ ಒಂದು ನೇಲೆ ಸಿಕ್ಕಿದೆ. ಈಟಿವಿ ಭಾರತಕ್ಕೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದ್ದು ಎಲ್ಲಡೆ ಶ್ಲ್ಯಾಘನೆ ವ್ಯಕ್ತವಾಗಿದೆ.

ಹೌದು., ಶಹಾಬಾದ ತಾಲೂಕಿನ ಮರತೂರು ಗ್ರಾಮದಲ್ಲಿ ಐದು ವರ್ಷದ ಹಿಂದೆ ತಾಯಿಯನ್ನು ಹಾಗೂ ಮೂರು ತಿಂಗಳ ಹಿಂದೆ ಅಪ್ಪನನ್ನು ಕಳೆದುಕೊಂಡು ಯಾರ ಆಸರೆ ಸಿಗದೆ ಒಂದೊತ್ತು ಊಟಕ್ಕೂ ಭೀಕ್ಷೆ ಬೇಡಿ ತಿನ್ನುತ್ತಿದ್ದ, ಮಧು, ಮನೋಜ ಹಾಗೂ ಮಾಯಾಂಕ್ ಎಂಬ ಮೂವರು ಅನಾಥ ಮಕ್ಕಳ ಬಗ್ಗೆ ನಿನ್ನೆ ಈಟಿವಿ ಭಾರತ "ಪುಟ್ಟ ಕಂದಮ್ಮಗಳ ಬದುಕಲ್ಲಿ ವಿಧಿಯಾಟ: ತುತ್ತು ಅನ್ನಕ್ಕಾಗಿ ನಿತ್ಯ ಪರದಾಟ" ಎಂಬ ಶಿರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಸುದ್ದಿ ಬಿತ್ತರಗೊಂಡ ಒಂದೆರಡು ಗಂಟೆಯಲ್ಲಿಯೇ ಕಂದಮ್ಮಗಳ ಬಾಳು ಬೆಳಗಿದೆ. ಮಕ್ಕಳ ನೋವಿಗೆ ರಾಜ್ಯದ ಜನರ ಹೃದಯ ಮಿಡಿದಿದೆ. ರಾಜ್ಯದ ಹಲವಡೆಯಿಂದ ಸಹಾಯದ ಹಸ್ತಗಳು ಚಾಚಿ ಬಂದಿವೆ. ಸುದ್ದಿ ಬಿತ್ತರಗೊಂಡ ಕೇಲ ಗಂಟೆಯಲ್ಲಿಯೇ ಮಕ್ಕಳ ಕಲ್ಯಾಣ ಸಮಿತಿಯವರು ಮರತೂರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೂವರು ಮಕ್ಕಳ ರಕ್ಷಣೆ -ಪೊಷಣೆ- ಶಿಕ್ಷಣ ನೀಡಲು ಸರ್ಕಾರ ಮುಂದೆ ಬಂದಿದೆ. ಮರತೂರು ಗ್ರಾಮದಿಂದ ಈಗಾಗಲೇ ಮೂವರು ಮಕ್ಕಳನ್ನು ಕಲಬುರಗಿ ಬಾಲ ಮಂದಿರಕ್ಕೆ ಕರೆತರಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ. ಮಕ್ಕಳ ಲಾಲನೆ ಪೊಷನೆ ಜೊತೆಗೆ ಶಿಕ್ಷಣದ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಳ್ಳುತ್ತಿದೆ. ಅಲ್ಲದೆ ಈಟಿವಿ ಭಾರತದ ಮಾನವಿಯ ವರದಿಗೆ ಅಧಿಕಾರಿಗಳು ಶ್ಲ್ಯಾಘನೆ ವ್ಯಕ್ತ ಪಡಿಸಿದ್ದಾರೆ.

ಬೈ: ಸುಂದರ್ ( ಸಂಯೋಜಕರು ಚೈಲ್ಡ್ ಲೈನ್ ಉಪಕೇಂದ್ರ)

ಮರತೂರು ಗ್ರಾಮದ ಈ ಮಕ್ಕಳ ತಾಯಿ ನಾಗಮ್ಮ ಐದು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ತಾಯಿ ಸಾವಿನ ನಂತರ ಮಕ್ಕಳ ಪಾಲಿನ ಸರ್ವಸ್ವವು ಆಗಿದ್ದ ತಂದೆ ಶಂಕರ್ ಕೂಡಾ ಈಗ ಮೂರು ತಿಂಗಳ ಹಿಂದೆ ಹೃದಯಾಘಾತಕ್ಕೆ ಬಲಿಯಾಗಿ ಅಕಾಲಿಕ ಮರಣ ಹೊಂದಿದ್ದಾರೆ. ಶಂಕರ್ ಕಲಬುರಗಿ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ರು ಆದ್ರೆ ಮಕ್ಕಳಿಗೆ ಅಲ್ಲಿನ ಯಾವುದೆ ಸಹಾಯ ಸಿಗಲಿಲ್ಲ, ಮರತೂರ ಗ್ರಾಮದಲ್ಲಿ ಹಾಳು ಬಿದ್ದ ಮನೆ ಹೊರತಾಗಿ ಆಸ್ತಿ ಅನ್ನೋದು ಏನು ಇಲ್ಲ, ಸಂಬಂದಿಗಳು ಎಷ್ಟು ದಿನ ಆಸರೆ ಆಗ್ತಾರೆ ಅವರು ಕೈಬಿಟ್ಟಾಗ ಒಂದೋತ್ತಿನ ಊಟಕ್ಕೆ ಭೀಕ್ಷೆ ಬೇಡಬೇಕಾಗಿತ್ತು. ಇಂತಹ ಕರಳು ಹಿಂಡುವ ಸುದ್ದಿ ಈಟಿವಿ ಭಾರತದ ಗಮನಕ್ಕೆ ಬಂದಿದ್ದೆ ತಡ ನೇರವಾಗಿ ಮರತೂರ ಗ್ರಾಮಕ್ಕೆ ಹೋಗಿ ವಾಸ್ತವತೆ ಕುರಿತಾಗಿ ಜನರ ಗಮನಕ್ಕೆ ತಂದಿಟ್ಟಿದ್ದೇವೆ. ಇದೀಗ ಉತ್ತಮ ಸ್ಪಂಧನೆ ಮಕ್ಕಳಿಗೆ ಸಿಕ್ಕಿದೆ. ಈಟಿವಿ ಭಾರತದಲ್ಲಿ ತಮ್ಮ ಸ್ಟೋರಿ ನೋಡಿ ಮಕ್ಕಳು ಸ್ವತಾಃ ತಾವೇ ಕಣ್ಣೀರಿಟ್ಟಿದ್ದಾರೆ. ಕತ್ತಲಾಗಿದ್ದ ನಮ್ಮ ದಾರಿಗೆ ದೀಪ ಹಿಡಿದ ಈಟಿವಿ ಭಾರತಕ್ಕೆ ಮನದಾಳದಿಂದ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದು, ನಮ್ಮ ಶ್ರಮ ಸ್ವಾರ್ಥಕವಾಗಿದೆ.

ಬೈಟ್: ಮಧು (ಅನಾತ ಬಾಲಕಿ)

ಅನಾತ ಮಕ್ಕಳ ವಿಷಯ ಈಗ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ಬಂದಿದೆ. ಮಕ್ಕಳನ್ನು ಮೋರಾರ್ಜಿ ಶಾಲೆಗೆ ದಾಖಲು ಮಾಡಿ ಅವರಿಗೆ ಉತ್ತಮ ಶಿಕ್ಷಣ ಜೊತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ. ಇದಲ್ಲದೆ ಮಕ್ಕಳಿಗಾಗಿ ಕನ್ನಡದ ಹೃದಯಗಳು ಮಿಡಿದಿದ್ದು ಸಹಾಯಕ್ಕೆ ಮುಂದೆ ಬಂದಿದ್ದು ಮಕ್ಕಳ ಬಾಳಿನಲ್ಲಿ ಜೋತಿ ಬೆಳಗಿದೆ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.