ETV Bharat / state

ರೌಡಿಶೀಟರ್​ ಕೊಲೆ ಪ್ರಕರಣ: ಕಲಬುರಗಿಯಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್​ - srikanth bengalore murder case accused arrest in kalaburagi

ರೌಡಿಶೀಟರ್ ಶ್ರೀಕಾಂತ್ ಬೆಂಗಳೂರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಗ್ರಾಮೀಣ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಶ್ರೀಕಾಂತ್ ಹಾಗೂ ಕೊಲೆ ಆರೋಪಿ ಅಂಬರೀಷ್ ಗುತ್ತೇದಾರ್ ಇಬ್ಬರು ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

rowdy-sheeter-shrikant-bangalore-murder-case-two-accused-arrest
ರೌಡಿಶೀಟರ್​ ಶ್ರೀಕಾಂತ್ ಬೆಂಗಳೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸೆರೆ
author img

By

Published : Jun 13, 2021, 9:10 PM IST

ಕಲಬುರಗಿ: ರೌಡಿಶೀಟರ್ ಶ್ರೀಕಾಂತ್ ಬೆಂಗಳೂರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿಯ ರಾಮನಗರ ನಿವಾಸಿಗಳಾದ ಅಂಬರೀಷ್ ಗುತ್ತೇದಾರ್ ಹಾಗೂ ಸಂಜೀವಕುಮಾರ್ ಗುತ್ತೇದಾರ್ ಬಂಧಿತರು.

ಶನಿವಾರ ರೌಡಿಶೀಟರ್ ಶ್ರೀಕಾಂತ್ ಗೆ ಕಂಠಪೂರ್ತಿ ಕುಡಿಸಿ ಹುಮನಾಬಾದ್​ ರಸ್ತೆಯ ರಾಮನಗರದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು.

rowdy-sheeter-shrikant
ರೌಡಿಶೀಟರ್​ ಶ್ರೀಕಾಂತ್ ಬೆಂಗಳೂರೆ

ಕೊಲೆಯಾದ ಶ್ರೀಕಾಂತ ಹಾಗೂ ಬಂಧಿತ ಆರೋಪಿಗಳಿಬ್ಬರು ಸ್ನೇಹಿತರಾಗಿದ್ದು, ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದಾಗಿ ವಿಚಾರಣೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಕೊಲೆಯಾದ ಶ್ರೀಕಾಂತ್ ಹಾಗೂ ಕೊಲೆ ಆರೋಪಿ ಅಂಬರೀಷ್ ಗುತ್ತೇದಾರ್ ಇಬ್ಬರು ಈ ಹಿಂದೆ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಓದಿ: ಮಾಧ್ಯಮದವರನ್ನು ಕಂಡು ಎಚ್ಚೆತ್ತ ಆಸ್ಪತ್ರೆ ಆಡಳಿತ ಮಂಡಳಿ : ಮೃತ ಯೋಧನ ದೇಹ ಕುಟುಂಬಸ್ಥರಿಗೆ ಹಸ್ತಾಂತರ

ಕಲಬುರಗಿ: ರೌಡಿಶೀಟರ್ ಶ್ರೀಕಾಂತ್ ಬೆಂಗಳೂರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿಯ ರಾಮನಗರ ನಿವಾಸಿಗಳಾದ ಅಂಬರೀಷ್ ಗುತ್ತೇದಾರ್ ಹಾಗೂ ಸಂಜೀವಕುಮಾರ್ ಗುತ್ತೇದಾರ್ ಬಂಧಿತರು.

ಶನಿವಾರ ರೌಡಿಶೀಟರ್ ಶ್ರೀಕಾಂತ್ ಗೆ ಕಂಠಪೂರ್ತಿ ಕುಡಿಸಿ ಹುಮನಾಬಾದ್​ ರಸ್ತೆಯ ರಾಮನಗರದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು.

rowdy-sheeter-shrikant
ರೌಡಿಶೀಟರ್​ ಶ್ರೀಕಾಂತ್ ಬೆಂಗಳೂರೆ

ಕೊಲೆಯಾದ ಶ್ರೀಕಾಂತ ಹಾಗೂ ಬಂಧಿತ ಆರೋಪಿಗಳಿಬ್ಬರು ಸ್ನೇಹಿತರಾಗಿದ್ದು, ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದಾಗಿ ವಿಚಾರಣೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಕೊಲೆಯಾದ ಶ್ರೀಕಾಂತ್ ಹಾಗೂ ಕೊಲೆ ಆರೋಪಿ ಅಂಬರೀಷ್ ಗುತ್ತೇದಾರ್ ಇಬ್ಬರು ಈ ಹಿಂದೆ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಓದಿ: ಮಾಧ್ಯಮದವರನ್ನು ಕಂಡು ಎಚ್ಚೆತ್ತ ಆಸ್ಪತ್ರೆ ಆಡಳಿತ ಮಂಡಳಿ : ಮೃತ ಯೋಧನ ದೇಹ ಕುಟುಂಬಸ್ಥರಿಗೆ ಹಸ್ತಾಂತರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.