ETV Bharat / state

ಕೈಗೆ ಬಂದದ್ದು ಬಾಯಿಗೆ ಬರ್ಲಿಲ್ಲ.. ಬೆಳೆದ ಕುಂಬಳಕಾಯಿ ತೋಟದಲ್ಲೇ ಕೊಳೀತಿದೆ.. - Kalburgi crop loss news

ಏನಿಲ್ಲವೆಂದರೂ ಕನಿಷ್ಟ 5 ಲಕ್ಷ ರೂಪಾಯಿ ಆದಾಯ ಬರ್ತಿತ್ತು. ಆದರೆ, ಲಾಕ್​ಡೌನ್ ಕಾರಣಕ್ಕೆ ಎಲ್ಲಿಯೂ ಸಾಗಿಸಲಾಗದ ಪರಿಸ್ಥಿತಿ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ಅಳುತ್ತಿದ್ದಾರೆ ಕುಂಬಳಕಾಯಿ ಬೆಳೆದ ರೈತರು.

Pumpkin crop
ಕುಂಬಳಕಾಯಿ ಬೆಳೆ
author img

By

Published : May 9, 2020, 7:12 PM IST

ಕಲಬುರಗಿ: ಲಾಕ್​ಡೌನ್ ಕಾರಣದಿಂದಾಗಿ ತೋಟಗಾರಿಕೆ ಬೆಳೆಗಾರರು ತತ್ತರಿಸುವಂತಾಗಿದೆ. ಸರ್ಕಾರವೇನೋ ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿಗೆ ತಂದು ಅದನ್ನು ವಿಸ್ತರಿಸುತ್ತಲೇ ಸಾಗಿದೆ. ಇದರಿಂದಾಗಿ ತೋಟಗಾರಿಕೆ ಬೆಳೆಗಾರರು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಾಗಿದೆ.

ತೋಟದಲ್ಲೇ ಕೊಳೆಯುತ್ತಿರುವ ಕುಂಬಳಕಾಯಿ..

ಕುಂಬಳಕಾಯಿ ಬೆಳೆದ ರೈತನೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಅಫ್ಜಲಪುರ ತಾಲೂಕಿನ ಇಂಚಗೇರಾ ಗ್ರಾಮದಲ್ಲಿ ರೈತ ಈರಣ್ಣ ಸುತಾರ ಎಂಬಾತ ಮೂರು ಎಕರೆ ಪ್ರದೇಶದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಲಾಕ್​ಡೌನ್​ನಿಂದಾಗಿ ಮಾರುಕಟ್ಟೆಗೆ ಸಾಗಿಸಲಾಗದೆ ಕುಂಬಳಕಾಯಿ ಹೊಲದಲ್ಲಿಯೇ ಬಿದ್ದಿದೆ. ಖರೀದಿ ಮಾಡುವವರೆ ಇಲ್ಲದಂತಾಗಿದ್ದು, ದೊಡ್ಡ ದೊಡ್ಡ ಗಾತ್ರದ ಕುಂಬಳಕಾಯಿ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ.

ಏನಿಲ್ಲವೆಂದರೂ ಕನಿಷ್ಟ 5 ಲಕ್ಷ ರೂ. ಆದಾಯ ಬರ್ತಿತ್ತು. ಆದರೆ, ಲಾಕ್​ಡೌನ್ ಕಾರಣಕ್ಕೆ ಎಲ್ಲಿಯೂ ಸಾಗಿಸಲಾಗ್ತಿಲ್ಲ. ಯಾರೂ ಖರೀದಿಗೆ ಮುಂದೆ ಬರ್ತಿಲ್ಲ. ಅಧಿಕಾರಿಗಳೂ ಸಹ ಹೊಲಕ್ಕೆ ಬಂದು ಹೋಗಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸರ್ಕಾರವೇ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಈರಣ್ಣ ಸುತಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಲಬುರಗಿ: ಲಾಕ್​ಡೌನ್ ಕಾರಣದಿಂದಾಗಿ ತೋಟಗಾರಿಕೆ ಬೆಳೆಗಾರರು ತತ್ತರಿಸುವಂತಾಗಿದೆ. ಸರ್ಕಾರವೇನೋ ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿಗೆ ತಂದು ಅದನ್ನು ವಿಸ್ತರಿಸುತ್ತಲೇ ಸಾಗಿದೆ. ಇದರಿಂದಾಗಿ ತೋಟಗಾರಿಕೆ ಬೆಳೆಗಾರರು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಾಗಿದೆ.

ತೋಟದಲ್ಲೇ ಕೊಳೆಯುತ್ತಿರುವ ಕುಂಬಳಕಾಯಿ..

ಕುಂಬಳಕಾಯಿ ಬೆಳೆದ ರೈತನೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಅಫ್ಜಲಪುರ ತಾಲೂಕಿನ ಇಂಚಗೇರಾ ಗ್ರಾಮದಲ್ಲಿ ರೈತ ಈರಣ್ಣ ಸುತಾರ ಎಂಬಾತ ಮೂರು ಎಕರೆ ಪ್ರದೇಶದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಲಾಕ್​ಡೌನ್​ನಿಂದಾಗಿ ಮಾರುಕಟ್ಟೆಗೆ ಸಾಗಿಸಲಾಗದೆ ಕುಂಬಳಕಾಯಿ ಹೊಲದಲ್ಲಿಯೇ ಬಿದ್ದಿದೆ. ಖರೀದಿ ಮಾಡುವವರೆ ಇಲ್ಲದಂತಾಗಿದ್ದು, ದೊಡ್ಡ ದೊಡ್ಡ ಗಾತ್ರದ ಕುಂಬಳಕಾಯಿ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ.

ಏನಿಲ್ಲವೆಂದರೂ ಕನಿಷ್ಟ 5 ಲಕ್ಷ ರೂ. ಆದಾಯ ಬರ್ತಿತ್ತು. ಆದರೆ, ಲಾಕ್​ಡೌನ್ ಕಾರಣಕ್ಕೆ ಎಲ್ಲಿಯೂ ಸಾಗಿಸಲಾಗ್ತಿಲ್ಲ. ಯಾರೂ ಖರೀದಿಗೆ ಮುಂದೆ ಬರ್ತಿಲ್ಲ. ಅಧಿಕಾರಿಗಳೂ ಸಹ ಹೊಲಕ್ಕೆ ಬಂದು ಹೋಗಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸರ್ಕಾರವೇ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಈರಣ್ಣ ಸುತಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.