ETV Bharat / state

ಕಲಬುರಗಿ: ಫೋನ್​ ಮಾಡಿ ಕರೆಸಿ, ಸ್ನೇಹಿತನ ಬಳಿ ಇದ್ದ ಚಿನ್ನ, ನಗದು ದೋಚಿದ್ದ ಖದೀಮರು ಅಂದರ್

ಸ್ನೇಹಿತನ ಬಳಿ ಇದ್ದ ಚಿನ್ನ,‌ನಗದು ದೋಚಿ ಪರಾರಿಯಾಗಿದ್ದ ಖದೀಮ ಸ್ನೇಹಿತರನ್ನು ಎಂಬಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

author img

By

Published : Jun 18, 2020, 7:40 PM IST

Kalburgi
Kalburgi

ಕಲಬುರಗಿ: ಗೆಳೆಯನ ಬಳಿಯಿದ್ದ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್​ ಸ್ನೇಹಿತರನ್ನು ಎಂಬಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಮ್ ಡಿ ಗೌಸ್, ಅಬಿಬುರ ರಹಿಮಾನ್, ಕರಂ ಅನ್ವರ್, ಸರ್ಪ ರಾಜ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ದೊಚ್ಚಿದ್ದ 1ಲಕ್ಷದ 17 ಸಾವಿರ ನಗದು ಹಣ, 5 ಗ್ರಾಮ ಚಿನ್ನದ ರಿಂಗ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ತಿಳಿಸಿದ್ದಾರೆ.

ಆರೋಪಿ ಎಮ್.ಡಿ ಗೌಸ್ ತನ್ನ ಸ್ನೇಹಿತನಾದ ಪಾನಿಪುರಿ ವ್ಯಾಪಾರಿ, ಗುಬ್ಬಿ ಕಾಲೋನಿ ನಿವಾಸಿ ಪುಪ್ಪೇಂದ್ರ ಸಿಂಗ್ ಎಂಬಾತನನ್ನು ನಗರದ ಬಾರಾ ಹಿಲ್ಸ್ ಬಳಿ ಫೋನ್ ಮಾಡಿ ಕರೆಸಿಕೊಂಡಿದ್ದನು. ಬಳಿಕ ಇತರೆ ಮೂವರ ಸಹಾಯದಿಂದ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಆತನ ಬಳಿಯಿದ್ದ 5 ಗ್ರಾಂ ಚಿನ್ನ ಹಾಗೂ 17 ಸಾವಿರ ನಗದು ದೋಚಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಖದೀಮರು ಆತನ ಗೆಳೆಯನಿಗೆ ಫೋನ್ ಮಾಡಿ ಮತ್ತೆ 1 ಲಕ್ಷ ರೂ. ದೋಚಿ ಪರಾರಿಯಾಗಿದ್ದರು ಎನ್ನಲಾಗುತ್ತಿದೆ.

ಆರೋಪಿಗಳನ್ನು ಪೊಲೀಸರು‌ ಬಂಧಿಸಿದ್ದು, ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಗೆಳೆಯನ ಬಳಿಯಿದ್ದ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್​ ಸ್ನೇಹಿತರನ್ನು ಎಂಬಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಮ್ ಡಿ ಗೌಸ್, ಅಬಿಬುರ ರಹಿಮಾನ್, ಕರಂ ಅನ್ವರ್, ಸರ್ಪ ರಾಜ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ದೊಚ್ಚಿದ್ದ 1ಲಕ್ಷದ 17 ಸಾವಿರ ನಗದು ಹಣ, 5 ಗ್ರಾಮ ಚಿನ್ನದ ರಿಂಗ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ತಿಳಿಸಿದ್ದಾರೆ.

ಆರೋಪಿ ಎಮ್.ಡಿ ಗೌಸ್ ತನ್ನ ಸ್ನೇಹಿತನಾದ ಪಾನಿಪುರಿ ವ್ಯಾಪಾರಿ, ಗುಬ್ಬಿ ಕಾಲೋನಿ ನಿವಾಸಿ ಪುಪ್ಪೇಂದ್ರ ಸಿಂಗ್ ಎಂಬಾತನನ್ನು ನಗರದ ಬಾರಾ ಹಿಲ್ಸ್ ಬಳಿ ಫೋನ್ ಮಾಡಿ ಕರೆಸಿಕೊಂಡಿದ್ದನು. ಬಳಿಕ ಇತರೆ ಮೂವರ ಸಹಾಯದಿಂದ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಆತನ ಬಳಿಯಿದ್ದ 5 ಗ್ರಾಂ ಚಿನ್ನ ಹಾಗೂ 17 ಸಾವಿರ ನಗದು ದೋಚಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಖದೀಮರು ಆತನ ಗೆಳೆಯನಿಗೆ ಫೋನ್ ಮಾಡಿ ಮತ್ತೆ 1 ಲಕ್ಷ ರೂ. ದೋಚಿ ಪರಾರಿಯಾಗಿದ್ದರು ಎನ್ನಲಾಗುತ್ತಿದೆ.

ಆರೋಪಿಗಳನ್ನು ಪೊಲೀಸರು‌ ಬಂಧಿಸಿದ್ದು, ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.