ETV Bharat / state

ಇಂದಿನಿಂದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಸೂಚನೆ - ಕಲಬುರಗಿ ಸಂಪೂರ್ಣ ಲಾಕ್​ಡೌನ್​​

ಕೊರೊನಾ ಭೀತಿಯಲ್ಲಿ ಸಂಫೂರ್ಣ ಲಾಕ್​ಡೌನ್ ಆದೇಶ ಜಾರಿಯಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಖರೀದಿಗೂ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಇಂದಿನಿಂದ ತಳ್ಳುವ ಗಾಡಿಗಳ ಮೂಲಕ ಅಥವಾ ಟಾಟಾ ಏಸ್​ಗಳಲ್ಲಿ ಮನೆ ಮನೆ ಬಳಿ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಅಂತ ಸಹಾಯಕ ಆಯುಕ್ತ ರಮೇಶ ಕೋಲಾರ ಆದೇಶಿಸಿದ್ದಾರೆ.

permission given to vegetable lenders to provide customers doorstep
ಇಂದಿನಿಂದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಸೂಚನೆ
author img

By

Published : Mar 28, 2020, 8:34 AM IST

ಕಲಬುರಗಿ: ಮಾರ್ಚ್​​ 28ರಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಟ್ಟಣದಲ್ಲಿ ತಳ್ಳುವ ಗಾಡಿ ಮೂಲಕ ತರಕಾರಿ, ಹಣ್ಣು ಮಾರಾಟ ಮಾಡುವಂತೆ ಸಹಾಯಕ ಆಯುಕ್ತ ರಮೇಶ ಕೋಲಾರ ಆದೇಶಿಸಿದ್ದಾರೆ.

ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ, ಊಡಗಿ ಕ್ರಾಸ್, ರೈಲ್ವೆ ನಿಲ್ದಾಣ ಹಾಗೂ ಚೌರಸ್ತಾದ ಬಳಿ ಅಂಗಡಿ ತೆರೆದು ತರಕಾರಿ ಮಾರುವಂತಿಲ್ಲ.

ಇಂದಿನಿಂದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಸೂಚನೆ

ತಾಲೂಕು ಆಡಳಿತ ಸೂಚಿಸುವ ಬಡಾವಣೆಗಳಿಗೆ ಗಾಡಿ ಅಥವಾ ಟಾಟಾ ಏಸ್ ಮೂಲಕ ತರಕಾರಿಯನ್ನು ಮನೆ ಮನೆಗೂ ತೆರಳಿ ಮಾರಾಟ ಮಾಡಬೇಕು. ಈ ವೇಳೆ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂದರು.

ಈ ವೇಳೆ ಪಿಎಸ್ಐ ಸುಶೀಲಕುಮಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಸ್ಥಿತರಿದ್ದರು.

ಕಲಬುರಗಿ: ಮಾರ್ಚ್​​ 28ರಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಟ್ಟಣದಲ್ಲಿ ತಳ್ಳುವ ಗಾಡಿ ಮೂಲಕ ತರಕಾರಿ, ಹಣ್ಣು ಮಾರಾಟ ಮಾಡುವಂತೆ ಸಹಾಯಕ ಆಯುಕ್ತ ರಮೇಶ ಕೋಲಾರ ಆದೇಶಿಸಿದ್ದಾರೆ.

ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ, ಊಡಗಿ ಕ್ರಾಸ್, ರೈಲ್ವೆ ನಿಲ್ದಾಣ ಹಾಗೂ ಚೌರಸ್ತಾದ ಬಳಿ ಅಂಗಡಿ ತೆರೆದು ತರಕಾರಿ ಮಾರುವಂತಿಲ್ಲ.

ಇಂದಿನಿಂದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಸೂಚನೆ

ತಾಲೂಕು ಆಡಳಿತ ಸೂಚಿಸುವ ಬಡಾವಣೆಗಳಿಗೆ ಗಾಡಿ ಅಥವಾ ಟಾಟಾ ಏಸ್ ಮೂಲಕ ತರಕಾರಿಯನ್ನು ಮನೆ ಮನೆಗೂ ತೆರಳಿ ಮಾರಾಟ ಮಾಡಬೇಕು. ಈ ವೇಳೆ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂದರು.

ಈ ವೇಳೆ ಪಿಎಸ್ಐ ಸುಶೀಲಕುಮಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.