ETV Bharat / state

ಕಾಳಸಂತೆಯಲ್ಲಿ ಯೂರಿಯಾ ರಸಗೊಬ್ಬರ ಮಾರಾಟ: ರೈತರ ಆಕ್ರೋಶ

author img

By

Published : Aug 21, 2020, 9:09 PM IST

ಕಲಬುರಗಿಯಲ್ಲಿ ಕಾಳಸಂತೆಯಲ್ಲಿ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಎಂಆರ್​ಪಿ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಲಿಂಗರಾಜು ಸಿರಗಾಪೂರ ಅಸಮಾಧಾನ ವ್ಯಕ್ತಪಡಿಸಿದರು.

farmers demands fertilizer in kalburgi
ರೈತ ಮುಖಂಡ ಲಿಂಗರಾಜು ಸರಗಾಪೂರ

ಕಲಬುರಗಿ: ಕೃತಕ ಅಭಾವ ಸೃಷ್ಟಿಸಿ ಯೂರಿಯಾ ರಸಗೊಬ್ಬರವನ್ನು ಎಂಆರ್​ಪಿ ದರಕ್ಕಿಂತ ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಲಿಂಗರಾಜ ಸಿರಗಾಪೂರ ಆರೋಪಿಸಿದರು.

farmers demands fertilizer in kalburgi
ರೈತ ಮುಖಂಡ ಲಿಂಗರಾಜು ಸರಗಾಪೂರ

ಒಂದು ಚೀಲಕ್ಕೆ ಎಂಆರ್​ಪಿ ದರ 266 ರೂಪಾಯಿ ಇದೆ. ಅದನ್ನು ಕಾಳಸಂತೆಯಲ್ಲಿ 500 ರೂಪಾಯಿಗೆ ಮಾರಲಾಗುತ್ತಿದೆ. ಬಿಲ್​ಗಳಲ್ಲಿ ಮಾತ್ರ ಎಂಆರ್​ಪಿ ದರ ನಮೂದಿಸಲಾಗುತ್ತದೆ. ಹೆಚ್ಚಿನ ಹಣ ಪಡೆದಿದ್ದಕ್ಕೆ ಪ್ರಶ್ನಿಸಿದರೆ ಯೂರಿಯಾ ಅಭಾವವಿದೆ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಪ್ರತಿ ವರ್ಷವೂ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೂ, ಕೃಷಿ ಇಲಾಖೆ ಅಧಿಕಾರಿಗಳು ತಡೆಯುತ್ತಿಲ್ಲ. ಈಗಾಗಲೇ ರೈತರು ಅನೇಕ ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾಗಿವೆ. ಆದರೆ, ರಸಗೊಬ್ಬರ ಅಂಗಡಿ ಮಾಲೀಕರು ಲೂಟಿಗೆ ನಿಂತಿದ್ದಾರೆ ಎಂದರು.

ಅನೇಕ ಕಡೆಗಳಲ್ಲಿ ರಾಜಾರೋಷವಾಗಿ ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಕಲಬುರಗಿ: ಕೃತಕ ಅಭಾವ ಸೃಷ್ಟಿಸಿ ಯೂರಿಯಾ ರಸಗೊಬ್ಬರವನ್ನು ಎಂಆರ್​ಪಿ ದರಕ್ಕಿಂತ ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಲಿಂಗರಾಜ ಸಿರಗಾಪೂರ ಆರೋಪಿಸಿದರು.

farmers demands fertilizer in kalburgi
ರೈತ ಮುಖಂಡ ಲಿಂಗರಾಜು ಸರಗಾಪೂರ

ಒಂದು ಚೀಲಕ್ಕೆ ಎಂಆರ್​ಪಿ ದರ 266 ರೂಪಾಯಿ ಇದೆ. ಅದನ್ನು ಕಾಳಸಂತೆಯಲ್ಲಿ 500 ರೂಪಾಯಿಗೆ ಮಾರಲಾಗುತ್ತಿದೆ. ಬಿಲ್​ಗಳಲ್ಲಿ ಮಾತ್ರ ಎಂಆರ್​ಪಿ ದರ ನಮೂದಿಸಲಾಗುತ್ತದೆ. ಹೆಚ್ಚಿನ ಹಣ ಪಡೆದಿದ್ದಕ್ಕೆ ಪ್ರಶ್ನಿಸಿದರೆ ಯೂರಿಯಾ ಅಭಾವವಿದೆ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಪ್ರತಿ ವರ್ಷವೂ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೂ, ಕೃಷಿ ಇಲಾಖೆ ಅಧಿಕಾರಿಗಳು ತಡೆಯುತ್ತಿಲ್ಲ. ಈಗಾಗಲೇ ರೈತರು ಅನೇಕ ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾಗಿವೆ. ಆದರೆ, ರಸಗೊಬ್ಬರ ಅಂಗಡಿ ಮಾಲೀಕರು ಲೂಟಿಗೆ ನಿಂತಿದ್ದಾರೆ ಎಂದರು.

ಅನೇಕ ಕಡೆಗಳಲ್ಲಿ ರಾಜಾರೋಷವಾಗಿ ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.