ಕಲಬುರಗಿ: ಹೊಲದಲ್ಲಿ ಕೆಲಸ ಮಾಡುವ ವೇಳೆ ತುಂಡಾಗಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ತಾಲೂಕಿನ ಖಣದಾಳ ಗ್ರಾಮದಲ್ಲಿ ನಡೆದಿದೆ.
ದಗಡು ರಾಥೋಡ್ (67) ಮೃತ ರೈತ. ಹೊಲದಲ್ಲಿ ಹೈಟೆನ್ಶನ್ ತಂತಿ ಕಟ್ ಆಗಿ ಬಿದ್ದಿತ್ತು. ಕೆಲಸ ಮಾಡುವ ವೇಳೆ ರೈತ ಅದನ್ನು ಗಮನಿಸದೆ ತಂತಿ ಮೇಲೆ ಕಾಲಿಟ್ಟ ಪರಿಣಾಮ ದುರ್ಘಟನೆ ಸಂಭವಿಸಿದೆ.