ರಾಣೆಬೆನ್ನೂರು (ಹಾವೇರಿ) : ಕಾಲು ಜಾರಿ ಕುಮದ್ವತಿ ನದಿಗೆ ಬಿದ್ದಿದ್ದ ಯುವತಿಯ ಮೃತದೇಹ ಐದು ದಿನಗಳ ನಂತರ ಪತ್ತೆಯಾಗಿದೆ.
ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿಯ ಕುಮದ್ವತಿ ನದಿಯಲ್ಲಿ ಶಶಿಕಲಾ ಎಂಬ ಯುವತಿ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಳು. ಘಟನೆ ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜುಪಟುಗಳು ಶೋಧ ಕಾರ್ಯ ನಡೆಸಿದ್ದರೂ ಯುವತಿ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಕುಮದ್ವತಿ ನದಿಯಲ್ಲಿ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.