ಹಾವೇರಿ : ಕೊರೊನಾ ವೈರಸ್ ಕರಿನೆರಳು ಹನುಮ ಜಯಂತಿ ಆಚರಣೆ ಮೇಲೆ ಬಿದ್ದಿದೆ. ಜಿಲ್ಲೆಯ ಹನುಮ ಮಂದಿರದಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ಹನುಮಜಯಂತಿಯನ್ನು ಈ ಸಾರಿ ಸರಳವಾಗಿ ಆಚರಿಸಲಾಯಿತು.
ಹನುಮನಿಗೆ ಹೂವು, ಕುಂಕುಮ ಅಲಂಕಾರ ಮಾಡಿ ಸರಳವಾಗಿ ಪೂಜೆ ಸಲ್ಲಿಸಲಾಯಿತು. ಅನಂತರ ಹನುಮಜಯಂತಿ ಅಂಗವಾಗಿ ಬಾಲ ಹನುಮನನ್ನ ತೊಟ್ಟಿಲಿನಲ್ಲಿ ಹಾಕಿ ತೂಗಲಾಯಿತು. ಬೆರಳೆಣಿಕೆಯಷ್ಟು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆದರು.