ETV Bharat / state

ಎಲ್ಲಾ ಕಡೆ ವಂಚಕರಿದ್ದು, ಮೆಟ್ಟಿ ನಿಲ್ಲುವುದೇ ರಾಜಕೀಯ ಗೆಲುವು: ಬಿ.ಸಿ.ಪಾಟೀಲ್

author img

By

Published : Dec 18, 2020, 9:55 PM IST

ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್​ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

minister bc patil talk about statement of Siddaramaiah
ಬಿ.ಸಿ.ಪಾಟೀಲ್

ಹಾವೇರಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಸಿ.ಪಾಟೀಲ್

ಹಾವೇರಿಯಲ್ಲಿ ಮಾತನಾಡಿದ ಅವರು, 'ದುಷ್ಮನ್ ಕಂಹಾ ಹೈ ಅಂದರೆ ಬಗಲ್ ಮೇ ಹೈ' ಎಂದಿದ್ದಾರೆ. ಈ ರೀತಿ ಉಂಡ ಮನೆಗೆ ದ್ರೋಹ ಬಗೆಯುವವರು ಎಲ್ಲಾ ಕಡೆಯೂ ಇರುತ್ತಾರೆ. ಅದನ್ನ ನೋಡಿಕೊಂಡು ಗೆಲ್ಲುವುದೇ ರಾಜಕೀಯ ಎಂದರು.

ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್​ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದರು.

ಓದಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಸಿಎಂ ಆದಾಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವಲ್ಪ ಜನಸಂಪರ್ಕ ಕಡಿಮೆಯಾಗಿತ್ತು. ರಾಜಕೀಯದಲ್ಲಿ 99 ಪ್ರತಿಶತ ಕೆಲಸ ಮಾಡಿಕೊಂಡವರಿಗೆ ಒಂದು ಕೆಲಸ ಮಾಡದಿದ್ದರು ಅವರು ತಿರುಗಿ ಬೀಳ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿ ಸಹ ಈ ರೀತಿಯಾಗಿರಬಹುದು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಲು ಸಮನ್ವಯತೆ ಕೊರತೆ ಕಾರಣ. ಸಿದ್ದರಾಮಯ್ಯ ಮತ್ತು ಹೆಚ್.​​ಡಿ.ಕುಮಾರಸ್ವಾಮಿ ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಈ ರೀತಿ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಹಾವೇರಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಸಿ.ಪಾಟೀಲ್

ಹಾವೇರಿಯಲ್ಲಿ ಮಾತನಾಡಿದ ಅವರು, 'ದುಷ್ಮನ್ ಕಂಹಾ ಹೈ ಅಂದರೆ ಬಗಲ್ ಮೇ ಹೈ' ಎಂದಿದ್ದಾರೆ. ಈ ರೀತಿ ಉಂಡ ಮನೆಗೆ ದ್ರೋಹ ಬಗೆಯುವವರು ಎಲ್ಲಾ ಕಡೆಯೂ ಇರುತ್ತಾರೆ. ಅದನ್ನ ನೋಡಿಕೊಂಡು ಗೆಲ್ಲುವುದೇ ರಾಜಕೀಯ ಎಂದರು.

ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್​ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದರು.

ಓದಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಸಿಎಂ ಆದಾಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವಲ್ಪ ಜನಸಂಪರ್ಕ ಕಡಿಮೆಯಾಗಿತ್ತು. ರಾಜಕೀಯದಲ್ಲಿ 99 ಪ್ರತಿಶತ ಕೆಲಸ ಮಾಡಿಕೊಂಡವರಿಗೆ ಒಂದು ಕೆಲಸ ಮಾಡದಿದ್ದರು ಅವರು ತಿರುಗಿ ಬೀಳ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿ ಸಹ ಈ ರೀತಿಯಾಗಿರಬಹುದು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಲು ಸಮನ್ವಯತೆ ಕೊರತೆ ಕಾರಣ. ಸಿದ್ದರಾಮಯ್ಯ ಮತ್ತು ಹೆಚ್.​​ಡಿ.ಕುಮಾರಸ್ವಾಮಿ ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಈ ರೀತಿ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.