ರಾಣೆಬೆನ್ನೂರು (ಹಾವೇರಿ): ತಾಲೂಕಿನ ನಿಟ್ಟೂರ ಗ್ರಾಮದಲ್ಲಿ ಡೊಳ್ಳು ಹಾಗೂ ಇತರ ವಾದ್ಯಗಳೊಂದಿಗೆ ಕೊರೊನಾ ವಾರಿಯರ್ಸ್ ಮೆರವಣಿಗೆ ಮಾಡಲಾಯಿತು.
ಇಂದು ನಿಟ್ಟೂರ ಗ್ರಾಮದ ಮಂಜಯ್ಯ ಚಾವಡಿ ಅಭಿಮಾನಿ ಬಳಗದ ವತಿಯಿಂದ ಕೊರೊನಾ ವಾರಿಯರ್ಸ್ಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾಮಸ್ಥರು ಕೊರೊನಾ ವಾರಿಯರ್ಸ್ ಮೇಲೆ ಪುಷ್ಪವೃಷ್ಟಿ ಮಾಡಿ, ಡೊಳ್ಳು, ವಾದ್ಯಗಳೊಂದಿಗೆ ಊರ ತುಂಬ ಮೆರವಣಿಗೆ ಮಾಡಿದರು.
ಬಳಿಕ ಮಂಜಯ್ಯ ಚಾವಡಿಯವರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರು, ಪಂಚಾಯತ್ ಸಿಬ್ಬಂದಿಗೆ ಸನ್ಮಾನಿಸಿ ತಮ್ಮ ಕೈಲಾದ ಧನ ಸಹಾಯ ಮಾಡಿದರು.