ETV Bharat / state

ಹಾಸ್ಟೆಲ್​​​ ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರ ವಿತರಣೆ ಆರೋಪ: ವಾರ್ಡನ್​​ಗೆ ಕರವೇ ತರಾಟೆ

author img

By

Published : Jan 10, 2020, 12:47 PM IST

ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್​ಗೆ ಕರವೇ ಸಂಘಟನೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

Worst food for students from warden negligence at Beluru
ವಾರ್ಡನ್​ಗೆ ನಿರ್ಲಕ್ಷದಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರ.!

ಹಾಸನ/ಬೇಲೂರು: ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಸರ್ಕಾರ ಶುಚಿ ರುಚಿಯಾದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ರು ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನು ನಿಂತಿಲ್ಲ ಎಂಬುದಕ್ಕೆ ಬೇಲೂರು ಪಟ್ಟಣದ ಬಿಸಿಎಂ ಹಾಸ್ಟೆಲ್ ಉದಾಹರಣೆಯಾಗಿದೆ.

ವಾರ್ಡನ್​ಗೆ ಕರವೇ ತರಾಟೆ

ಹೌದು, ರಾಜ್ಯದ ಬಡ ಮಕ್ಕಳಿಗಾಗಿ ಸರ್ಕಾರ ವಸತಿ ನಿಲಯ ತೆರೆದಿದ್ದು, ಅಲ್ಲಿ ಶುಚಿ-ರುಚಿಯಾದ ಊಟ-ತಿಂಡಿ ನೀಡಲೆಂದು ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸುರಿಯುತ್ತಿದೆ. ಆದರೂ ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್​ಗೆ ಕರವೇ ಸಂಘಟನೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ತಿಂಡಿ ಮಾಡುವ ಸಲುವಾಗಿ ಸರ್ಕಾರ ಗೋಧಿ ಕೊಟ್ಟರೆ ಅದನ್ನ ಅಡುಗೆ ಮನೆಯಲ್ಲಿ ಇಡದೇ ಆ ಚೀಲಗಳನ್ನು ಶೌಚಾಲಯದಲ್ಲಿಡುವ ಮೂಲಕ ಎಡವಟ್ಟು ಮಾಡಿದ್ದಾರೆ. ಹುಳು ಬಿದ್ದಿರುವ ಗೋಧಿಯನ್ನೇ ಹಿಟ್ಟು ಮಾಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾಋಎ ಎಂದು ಬೇಲೂರು ಕರವೇ ಆರೋಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಸತಿ ನಿಲಯದಲ್ಲಿರುವ ಹಲವು ಸಮಸ್ಯೆಗಳನ್ನ ಒಂದೊಂದಾಗಿ ಕರವೇ ಕಾರ್ಯಕರ್ತರ ಸಮ್ಮುಖದಲ್ಲಿ ಬಿಚ್ಚಿಟ್ಟರು. ಪ್ರತಿನಿತ್ಯ ನಮಗೆ ಹುಳು ಮಿಶ್ರಿತ ಚಪಾತಿ ಮತ್ತು ಅನ್ನ ನೀಡಲಾಗುತ್ತಿದೆ. ಅಲ್ಲದೆ ಗೋಧಿಯನ್ನು ರಸ್ತೆ ಬದಿಯಲ್ಲಿ ಒಣಗಿ ಹಾಕುವುದರಿಂದ ಮಣ್ಣು-ಧೂಳು ಮಿಶ್ರಿತವಾಗಿ ಆಹಾರದಲ್ಲಿ ಕಲ್ಲು ಸಿಗುತ್ತವೆ. ಇನ್ನು ಹಲವು ತಿಂಗಳಿಂದ ಸೋಲಾರ್ ಕೆಟ್ಟು ಹೋಗಿದ್ದು, ಪ್ರತಿನಿತ್ಯ ತಣ್ಣೀರಿನಲ್ಲಿಯೇ ಸ್ನಾನ ಮಾಡುವಂತಾಗಿದೆ. ವಾರದ ಆಹಾರ ಪಟ್ಟಿಯನ್ನ ಬಿಟ್ಟು ತಮ್ಮ ಮನಸ್ಸಿಗೆ ತೋಚಿದ್ದನ್ನು ಅಡುಗೆ ಮಾಡ್ತಾರೆ. ತರಕಾರಿ ಇಲ್ಲದ ಸಾಂಬಾರು, ಎಣ್ಣೆಯಿಲ್ಲದ ಉಪ್ಪಿಟ್ಟು ಕೊಡ್ತಾರೆ. ಗುಣಮಟ್ಟದ ಆಹಾರ ಸೇವನೆ ಮಾಡಿ ಎಷ್ಟೋ ತಿಂಗಳಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಡತನದ ಮಧ್ಯೆ ವಿದ್ಯೆ ಕಲಿಯಲು ಬಂದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಮತ್ತು ಹುಳು ಮಿಶ್ರಿತ ಆಹಾರವನ್ನ ಉಣಬಡಿಸಲಾಗುತ್ತಿದೆ. ವಿದಿಯಿಲ್ಲದೇ ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳು ಸೇವಿಸಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಕರವೇ ಆಗ್ರಹಿಸಿದೆ.

ಹಾಸನ/ಬೇಲೂರು: ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಸರ್ಕಾರ ಶುಚಿ ರುಚಿಯಾದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ರು ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನು ನಿಂತಿಲ್ಲ ಎಂಬುದಕ್ಕೆ ಬೇಲೂರು ಪಟ್ಟಣದ ಬಿಸಿಎಂ ಹಾಸ್ಟೆಲ್ ಉದಾಹರಣೆಯಾಗಿದೆ.

ವಾರ್ಡನ್​ಗೆ ಕರವೇ ತರಾಟೆ

ಹೌದು, ರಾಜ್ಯದ ಬಡ ಮಕ್ಕಳಿಗಾಗಿ ಸರ್ಕಾರ ವಸತಿ ನಿಲಯ ತೆರೆದಿದ್ದು, ಅಲ್ಲಿ ಶುಚಿ-ರುಚಿಯಾದ ಊಟ-ತಿಂಡಿ ನೀಡಲೆಂದು ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸುರಿಯುತ್ತಿದೆ. ಆದರೂ ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್​ಗೆ ಕರವೇ ಸಂಘಟನೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ತಿಂಡಿ ಮಾಡುವ ಸಲುವಾಗಿ ಸರ್ಕಾರ ಗೋಧಿ ಕೊಟ್ಟರೆ ಅದನ್ನ ಅಡುಗೆ ಮನೆಯಲ್ಲಿ ಇಡದೇ ಆ ಚೀಲಗಳನ್ನು ಶೌಚಾಲಯದಲ್ಲಿಡುವ ಮೂಲಕ ಎಡವಟ್ಟು ಮಾಡಿದ್ದಾರೆ. ಹುಳು ಬಿದ್ದಿರುವ ಗೋಧಿಯನ್ನೇ ಹಿಟ್ಟು ಮಾಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾಋಎ ಎಂದು ಬೇಲೂರು ಕರವೇ ಆರೋಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಸತಿ ನಿಲಯದಲ್ಲಿರುವ ಹಲವು ಸಮಸ್ಯೆಗಳನ್ನ ಒಂದೊಂದಾಗಿ ಕರವೇ ಕಾರ್ಯಕರ್ತರ ಸಮ್ಮುಖದಲ್ಲಿ ಬಿಚ್ಚಿಟ್ಟರು. ಪ್ರತಿನಿತ್ಯ ನಮಗೆ ಹುಳು ಮಿಶ್ರಿತ ಚಪಾತಿ ಮತ್ತು ಅನ್ನ ನೀಡಲಾಗುತ್ತಿದೆ. ಅಲ್ಲದೆ ಗೋಧಿಯನ್ನು ರಸ್ತೆ ಬದಿಯಲ್ಲಿ ಒಣಗಿ ಹಾಕುವುದರಿಂದ ಮಣ್ಣು-ಧೂಳು ಮಿಶ್ರಿತವಾಗಿ ಆಹಾರದಲ್ಲಿ ಕಲ್ಲು ಸಿಗುತ್ತವೆ. ಇನ್ನು ಹಲವು ತಿಂಗಳಿಂದ ಸೋಲಾರ್ ಕೆಟ್ಟು ಹೋಗಿದ್ದು, ಪ್ರತಿನಿತ್ಯ ತಣ್ಣೀರಿನಲ್ಲಿಯೇ ಸ್ನಾನ ಮಾಡುವಂತಾಗಿದೆ. ವಾರದ ಆಹಾರ ಪಟ್ಟಿಯನ್ನ ಬಿಟ್ಟು ತಮ್ಮ ಮನಸ್ಸಿಗೆ ತೋಚಿದ್ದನ್ನು ಅಡುಗೆ ಮಾಡ್ತಾರೆ. ತರಕಾರಿ ಇಲ್ಲದ ಸಾಂಬಾರು, ಎಣ್ಣೆಯಿಲ್ಲದ ಉಪ್ಪಿಟ್ಟು ಕೊಡ್ತಾರೆ. ಗುಣಮಟ್ಟದ ಆಹಾರ ಸೇವನೆ ಮಾಡಿ ಎಷ್ಟೋ ತಿಂಗಳಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಡತನದ ಮಧ್ಯೆ ವಿದ್ಯೆ ಕಲಿಯಲು ಬಂದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಮತ್ತು ಹುಳು ಮಿಶ್ರಿತ ಆಹಾರವನ್ನ ಉಣಬಡಿಸಲಾಗುತ್ತಿದೆ. ವಿದಿಯಿಲ್ಲದೇ ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳು ಸೇವಿಸಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಕರವೇ ಆಗ್ರಹಿಸಿದೆ.

Intro:ಹಾಸನ/ಬೇಲೂರು: ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೇ, ಸರ್ಕಾರ ಶುಚಿ ರುಚಿಯಾದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ರು ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನು ನಿಂತಿಲ್ಲ ಎಂಬುದಕ್ಕೆ ಈ ಹಾಸ್ಟೆಲ್ ಉದಾಹರಣೆಯಾಗಿದೆ.

ಹೌದು, ರಾಜ್ಯದ ಬಡ ಮಕ್ಕಳಿಗಾಗಿ ಸರ್ಕಾರ ವಸತಿ ನಿಲಯವನ್ನ ತೆರೆದಿದ್ದು, ಅಲ್ಲಿ ಶುಚಿ-ರುಚಿಯಾದ ಊಟ ತಿಂಡಿ ನೀಡಲೆಂದು ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸುರಿಯುತ್ತಿದ್ರೂ ಅಧಿಕಾರಿಗಳು ಮಾತ್ರ ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದ ಹಾಸ್ಟೆಲ್ ವಾರ್ಡನ್ ನಟರಾಜ್ ರವರಿಗೆ ಕರಾವೇ ಸಂಘಟನೆ ಹಿಗ್ಗಾ-ಮುಗ್ಗಾ ತರಾಟೆ ತೆಗೆದುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಇಂತಹದೊಂದು ಘಟನೆಗೆ ಸಾಕ್ಷಿಯಾಗಿದ್ದು, ಬೇಲೂರು ಪಟ್ಟಣದ ಬಿಸಿಎಂ ಹಾಸ್ಟೆಲ್. ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ತಿಂಡಿ ಮಾಡುವ ಸಲುವಾಗಿ ಸರ್ಕಾರ ಗೋಧಿ ಕೊಟ್ಟರೇ ಅದನ್ನ ಅಡುಗೆ ಮನೆಯಲ್ಲಿ ಇಡದೇ ಗೋಧಿಯ ಚೀಲಗಳನ್ನ ಶೌಚಾಲಯದಲ್ಲಿಡುವ ಮೂಲಕ ಎಡವಟ್ಟು ಮಾಡಿ ಹುಳು ಬಿದ್ದಿರುವ ಗೋಧಿಯನ್ನೆ ಹಿಟ್ಟು ಮಾಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರಕರಣವನ್ನ ಬೇಲೂರು ಕರವೇ ಬೆಳಕಿಗೆ ತಂದಿದೆ.

ಈ ದೇಶದ ಆಸ್ತಿ ಎಂದು ಕರೆಯಲ್ಪಡುವ ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಕಳಪೆ ಆಹಾರವನ್ನು ನೀಡುತ್ತಿರುವುದು ಬೇಸರ ತಂದಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ಉಣಬಡಿಸುವ ಅಕ್ಕಿ ಮತ್ತು ಗೋಧಿಯ ಚೀಲಗಳನ್ನ ಶೌಚಾಲಯದ ಕೊಠಡಿ ಒಳಗಿಟ್ಟು ಬೀಗ ಹಾಕಲಾಗಿದೆ. ಈ ಬಿಸಿಎಂ ವಸತಿ ನಿಲಯದ ಮೇಲ್ಚಿಚಾರಕರಾಗಿರೋ ನಟರಾಜ್, ಇಲಾಖೆಯ ಅಧಿಕಾರಿಯೂ ಆಗಿದ್ದು ಈ ರೀತಿ ಹುಳು ಬಿದ್ದಿರುವ ಆಹಾರವನ್ನು ನೀಡುತ್ತಿರುವುದರ ಬಗ್ಗೆ ಪ್ರಶ್ನೆ ಮಾಡಿ ಅಧಿಕಾರಿಗೆ ಏಕವಚನದಲ್ಲಿಯೇ ಬೈದು ಮುಂದಿನ ದಿನದಲ್ಲಿ ಸರಿಪಡಿಸದಿದ್ದರೇ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ರು.

ಬೈಟ್ : ಚಂದ್ರಶೇಖರ್, ಕರವೇ ತಾಲೂಕು ಅಧ್ಯಕ್ಷ (ಹಣೆಯಲ್ಲಿ ಕುಂಕುಮವಿಟ್ಟು ತರಾಟೆ ತೆಗೆದುಕೊಳ್ಳುತ್ತಿರೋ ವ್ಯಕ್ತಿ)

ಈ ಸಂದರ್ಭದಲ್ಲಿ ಮಾತನಾಡಿದ ಕೆಲವ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿರುವ ಹಲವು ಸಮಸ್ಯೆಗಳನ್ನ ಒಂದೊಂದಾಗಿ ಕರವೇ ಕಾರ್ಯಕರ್ತರ ಸಮ್ಮುಖದಲ್ಲಿ ಬಿಚ್ಚಿಟ್ಟರು. ಪ್ರತಿನಿತ್ಯ ನಮಗೆ ಹುಳು ಮಿಶ್ರಿತ ಚಪಾತಿ ಮತ್ತು ಅನ್ನವನ್ನು ನೀಡಲಾಗುತ್ತಿದೆ. ಅಲ್ಲದೆ ಗೋಧಿಯನ್ನು ರಸ್ತೆ ಬದಿಯಲ್ಲಿ ಒಣಗಿ ಹಾಕುವುದರಿಂದ ಮಣ್ಣು-ಧೂಳು ಮಿಶ್ರಿತವಾಗುವುದರಿಂದ ಆಹಾರದಲ್ಲಿ ಕಲ್ಲು ಸಿಗುತ್ತವೆ, ಇನ್ನು ಹಲವು ತಿಂಗಳಿಂದ ಸೋಲಾರ್ ಕೆಟ್ಟು ಹೋಗಿದ್ದು, ಪ್ರತನಿತ್ಯ ತಣ್ಣಿರಿನಲ್ಲಿಯೇ ಸ್ನಾನ ಮಾಡುವಂತಾಗಿದೆ. ವಾರದ ಆಹಾರ ಪಟ್ಟಿಯನ್ನ ಬಿಟ್ಟು ತಮ್ಮ ಮನಸ್ಸಿಗೆ ತೋಚಿದ್ದನ್ನು ಅಡುಗೆ ಮಾಡ್ತಾರೆ. ತರಕಾರಿ ಇಲ್ಲದ ಸಾಂಬಾರು, ಎಣ್ಣೆಯಿಲ್ಲದ ಉಪ್ಪಿಟ್ಟು, ಗುಣಮಟ್ಟದ ಆಹಾರ ಸೇವನೆ ಮಾಡಿ ಎಷ್ಟೋ ತಿಂಗಳಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಬೈಟ್ : ಮಹೇಶ್, ಹಾಸ್ಟೆಲ್ ವಿದ್ಯಾರ್ಥಿ.

ಬಿಸಿಎಂ ವಿದ್ಯಾರ್ಥಿ ನಿಲಯದ ವಾರ್ಡನ್ ನಟರಾಜು ಮಾತನಾಡಿ ಹುಳು ಮಿಶ್ರಿತ ಅಕ್ಕಿ ಮತ್ತು ಗೋಧಿಯನ್ನು ನಾವು ಮಕ್ಕಳಿಗೆ ನೀಡುತ್ತಿಲ್ಲ ಅಲ್ಲದೆ ಶೌಚಾಲಯದ ರೂಮಿನಲ್ಲಿಟ್ಟಿರುವ ಗೋಧಿ ಮತ್ತು ಅಕ್ಕಿ ಹುಳು ಮಿಶ್ರಿತವಾಗಿದ್ದು ನಿರುಪಯುಕ್ತವಾಗಿದೆ ಅದ್ದರಿಂದ ಅದನ್ನು ಬಳಸದೆ ಹಾಗೇ ಇಟ್ಟಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಬೈಟ್ : ನಟರಾಜ್, ಹಾಸ್ಟೆಲ್ ವಾರ್ಡನ್, ಬೇಲೂರು ( ಬಿಳಿ ಅಂಗಿ ತೊಟ್ಟಿರುವವರು)

ಒಟ್ಟಾರೆ ಬಡತನದ ಮದ್ಯೆ ವಿದ್ಯೆಕಲಿಯಲು ಬಂದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಮತ್ತು ಹುಳು ಮಿಶ್ರಿತ ಆಹಾರವನ್ನ ಉಣಬಡಿಸುತ್ತಿದ್ದು, ವಿದಿಯಿಲ್ಲದೇ ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳು ಸೇವಿಸುತ್ತಿದ್ದು, ಇಂತಹ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಕರವೇ ಆಗ್ರಹ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.