ETV Bharat / state

'ಥರ್ಡ್​ ಕ್ಲಾಸ್' ಚಿತ್ರ ತಂಡದಿಂದ ಫಸ್ಟ್‌ ಕ್ಲಾಸ್ ಸಾಮಾಜಿಕ ಕಳಕಳಿ

author img

By

Published : Nov 24, 2019, 9:37 AM IST

'ಥರ್ಡ್​ ಕ್ಲಾಸ್' ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿರುವ  ಹೊಸಬರ ತಂಡ ಹಾಸನದ ಬಡ ಆಟೋ ಚಾಲಕರಿಗೆ, ಅಂಧ ಮಕ್ಕಳಿಗೆ 1 ಲಕ್ಷ ರೂ ವಿಮೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

"ಥರ್ಡ್​ ಕ್ಲಾಸ್" ಚಿತ್ರ ತಂಡದಿಂದ ಸಾಮಾಜಿಕ ಕಳಕಳಿ ಕಾರ್ಯ

ಹಾಸನ: ಒಂದು ಪಿಕ್ಚರ್‌ ತೆರೆ ಕಂಡರೆ ನಿರ್ಮಾಪಕರು ದುಡ್ಡು ಎಷ್ಟು ಕಲೆಕ್ಷನ್‌ ಆಯ್ತು ಅಂತ ಲೆಕ್ಕ ಹಾಕ್ತಾರೆ. ಆದ್ರೆ ಈ ಚಿತ್ರದ ನಿರ್ಮಾಪಕರು ಮತ್ತು ಚಿತ್ರತಂಡ ಸಾಮಾಜಿಕ ಕಳಕಳಿಯನ್ನು ಮುಂದಿಟ್ಟುಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದಾರೆ.

'ಥರ್ಡ್​ ಕ್ಲಾಸ್' ಚಿತ್ರ ತಂಡದಿಂದ ಸಾಮಾಜಿಕ ಕಳಕಳಿಯ ಕಾರ್ಯ

'ಥರ್ಡ್​ ಕ್ಲಾಸ್' ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿರುವ ಹೊಸಬರ ತಂಡ ಹಾಸನದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿದ್ರು. ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಫ್ಲೆಕ್ಸ್ ಬಿದ್ದ ದುರಂತದ ಹಿನ್ನೆಲೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ದುಬಾರಿ ಹಣ ಖರ್ಚು ಮಾಡಿ ಪ್ರಚಾರ ಪಡೆಯುವ ಬದಲು ಕೆಲ ಬಡ ಆಟೋ ಚಾಲಕರಿಗೆ, ಅಂಧಮಕ್ಕಳಿಗೆ ಸಹಾಯಹಸ್ತ ಚಾಚಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಆಟೋ ಚಾಲಕರಿಗೆ 1 ಲಕ್ಷ ರೂ ವಿಮೆ ಮತ್ತು ಮೊದಲ ದಿನದ ಗಲ್ಲಪೆಟ್ಟಿಗೆಯ ಲಾಭವನ್ನು ನಗರದ ಅಂಧಮಕ್ಕಳ ಶಾಲೆಗೆ ಹಾಗೂ ನವಜಾತ ಮಕ್ಕಳ ಪೋಷಣಾ ಕೇಂದ್ರ 'ಮಮತೆಯ ಮಡಿಲು' ಸಂಸ್ಥೆಗೆ ಕೊಡುವುದಾಗಿ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಹಾಸನ: ಒಂದು ಪಿಕ್ಚರ್‌ ತೆರೆ ಕಂಡರೆ ನಿರ್ಮಾಪಕರು ದುಡ್ಡು ಎಷ್ಟು ಕಲೆಕ್ಷನ್‌ ಆಯ್ತು ಅಂತ ಲೆಕ್ಕ ಹಾಕ್ತಾರೆ. ಆದ್ರೆ ಈ ಚಿತ್ರದ ನಿರ್ಮಾಪಕರು ಮತ್ತು ಚಿತ್ರತಂಡ ಸಾಮಾಜಿಕ ಕಳಕಳಿಯನ್ನು ಮುಂದಿಟ್ಟುಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದಾರೆ.

'ಥರ್ಡ್​ ಕ್ಲಾಸ್' ಚಿತ್ರ ತಂಡದಿಂದ ಸಾಮಾಜಿಕ ಕಳಕಳಿಯ ಕಾರ್ಯ

'ಥರ್ಡ್​ ಕ್ಲಾಸ್' ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿರುವ ಹೊಸಬರ ತಂಡ ಹಾಸನದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿದ್ರು. ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಫ್ಲೆಕ್ಸ್ ಬಿದ್ದ ದುರಂತದ ಹಿನ್ನೆಲೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ದುಬಾರಿ ಹಣ ಖರ್ಚು ಮಾಡಿ ಪ್ರಚಾರ ಪಡೆಯುವ ಬದಲು ಕೆಲ ಬಡ ಆಟೋ ಚಾಲಕರಿಗೆ, ಅಂಧಮಕ್ಕಳಿಗೆ ಸಹಾಯಹಸ್ತ ಚಾಚಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಆಟೋ ಚಾಲಕರಿಗೆ 1 ಲಕ್ಷ ರೂ ವಿಮೆ ಮತ್ತು ಮೊದಲ ದಿನದ ಗಲ್ಲಪೆಟ್ಟಿಗೆಯ ಲಾಭವನ್ನು ನಗರದ ಅಂಧಮಕ್ಕಳ ಶಾಲೆಗೆ ಹಾಗೂ ನವಜಾತ ಮಕ್ಕಳ ಪೋಷಣಾ ಕೇಂದ್ರ 'ಮಮತೆಯ ಮಡಿಲು' ಸಂಸ್ಥೆಗೆ ಕೊಡುವುದಾಗಿ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

Intro:ಹಾಸನ: ಒಂದು ಫಿಚ್ಚರ್ ತೆರೆಕಂಡರೆ ನಿರ್ಮಾಪಕರು ಮರುದಿನದ ಗಲ್ಲಪೆಟ್ಟಿಗೆ ಎಷ್ಟಾಯ್ತು ಎಂಬುದನ್ನ ಲೆಕ್ಕಾ ಹಾಕ್ತಾರೆ. ಆದ್ರೆ ಈ ಚಿತ್ರದ ನಿರ್ಮಾಪಕರು ಮತ್ತು ಚಿತ್ರತಂಡ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಕ್ತಿದ್ದಾರೆ. ಇವತ್ತು ಹಾಸನದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಮಾಜಿಕ ಕಳಕಳಿಯನ್ನ ಮೆರೆದ್ರು. ಆ ಚಿತ್ರವಾದ್ರು ಯವ್ದು...? ಆ ಚಿತ್ರತಂಡ ಮಾಡಿದ ಸಾಮಾಜಿಕ ಕೆಲಸವಾದ್ರು ಏನು..? ಅಂತೀರಾ..ಈ ಸ್ಟೋರಿ ನೋಡಿ...

ಈಗಾಲೇ "10th ಕ್ಲಾಸ್", "ಪಿಯುಸಿ" (ಪ್ಲೀಸ್ ಯೂ ಸಿ),ಎಂಬ ಚಿತ್ರಗಳು ಪಡ್ಡೆಹುಡುಗ್ರ ನಿದ್ದೆಗೆಡಿಸಿದ್ದ ಸಿನಿಮಾಗಳ ಜೊತೆಗೆ ಅದೇ ರೀತಿ ಇಲ್ಲೊಂದು ಹೊಸಬರ ತಂಡ "3rd ಕ್ಲಾಸ್" ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಇಂದು ಹಾಸನದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿದ್ರು. ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಫ್ಲಕ್ಸ್ ಬಿದ್ದ ದುರಂತದ ಹಿನ್ನೆಲೆಯಲ್ಲಿ ಅದಕ್ಕೆ ದುಬಾರಿ ಹಣ ಖರ್ಜುಮಾಡಿ ಪ್ರಚಾರ ಪಡೆಯುವ ಬದಲು ಕೆಲ ಬಡ ಆಟೋ ಚಾಲಕರಿಗೆ, ಅಂಧಮಕ್ಕಳಿಗೆ ಉಪಯೋಗ ಮಾಡುವ ಸಲುವಾಗಿ ಲಾಂಚ ಮಾಡುವ ವೇಳೆ ಹಾಸನ ನಗರದ ಆಟೋ ಚಾಲಕರಿಗೆ 1 ಲಕ್ಷದ ವಿಮೆ ಮತ್ತು ಮೊದಲ ದಿನದ ಗಲ್ಲಪೆಟ್ಟಿಗೆಯ ಲಾಭವನ್ನ ನಗರದ ಅಂಧಮಕ್ಕಳ ಶಾಲೆಗೆ ಹಾಗೂ ನವಜಾತ ಮಕ್ಕಳ ಪೋಷಣಾ ಕೇಂದ್ರವಾದ ಮಮತೆಯ ಮಡಿಲು ಸಂಸ್ಥೆಗೆ ಕೊಡುವುದಾಗಿ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದ್ರು.

ಬೈಟ್: ನಮ್ ಜಗದೀಶ್, ಚಿತ್ರದ ನಾಯಕ ನಟ.

ಇನ್ನು ಈ ಚಿತ್ರದಲ್ಲಿ ಕಾರ್ ಗ್ಯಾರೇಜ್ ಮಾಲೀಕನೋರ್ವ ಪ್ರೀತಿಯಿಂದ ನಾಯಕ ಮತ್ತು ಅವನ ಮೂವರು ಸ್ನೇಹಿತರನ್ನು ಸಾಕಿರುತ್ತಾನೆ. ಗ್ಯಾರೇಜ್ನಲ್ಲಿ ವರ್ಕ್ ಮಾಡುವ ನಾಯಕ ಹಾಗು ಹೋಮ್ ಮಿನಿಸ್ಟರ್ ಮಗಳ ನಡುವಿನ ಪ್ರೇಮ ಕಥೆ. ನಾಯಕಿ ಗ್ಯಾರೇಜ್ ಹುಡುಗನ ಬಾಳಲ್ಲಿ ಪ್ರವೇಶಿಸಿದ ಬಳಿಕ ಮೂರು ಸಂಸಾರಗಳ ನಡುವೆ, ಮೂರು ವರ್ಗಗಳ ನಡುವೆ ನಡೆಯುವ ಒಂದು ತ್ರಿಕೋನ ಪ್ರೇಮಕಥೆಯೇ 3rd ಕ್ಲಾಸ್ ಚಿತ್ರದ ಕಥಾ ಹಂದರ. ಇನ್ನು ಹೆಸರು 3rd ಕ್ಲಾಸ್ ಆಗಿದ್ರು ಸಿನಿಮಾ ಮಾತ್ರ ಫಸ್ಟ್ ಕ್ಲಾಸ್ ಆಗಿದೆ ಎನ್ನುತ್ತಾರೆ ರೂಪಿಕಾ.

ಬೈಟ್: ರೂಪಿಕಾ, ಚಿತ್ರದ ನಾಯಕಿ,

ನಾವು ಆಟೋ ಚಾಲಕರಾಗಿದ್ದು, ಸರ್ಕಾರ ನಮಗೆ ಪ್ರತಿ ಬಜೆಟ್ ನಲ್ಲಿ ನಮ್ಮನ್ನ ಕಡೆಗಣಿಸುತ್ತಲೇ ಬಂದಿದೆ. ಹೊಸ ಹೊಸ ಚಿತ್ರಗಳು ಬಂದ್ರೆ ಸಾಕು ಆಟೋಗಳ ಹಿಂದೆ ಮುಂದೆ ಚಿತ್ರನಟ-ನಟಿಯರ ಪೋಟೋಗಳು, ಅವರ ಡೈಲಾಗ್ ಗಳು ರಾರಾಜಿಸುತ್ತಿರುತ್ತವೆ. ಆದ್ರೆ ನಮಗೆ ಈ ರೀತಿಯ ಜೀವವಿಮೆಯನ್ನ ಯಾರು ಮಾಡಿಸಿಕೊಟ್ಟಿರಲಿಲ್ಲ. ನಮ್ಮ ಬಾಳಿಗೆ ಬೆಳಕಾಗುತ್ತಿರೋ ಇವರ ಭವಿಷ್ಯ ಉಜ್ವಲವಾಗಲಿ. ಚಿತ್ರವೂ ಕೂಡಾ ನೂರುದಿನ ಪೂರೈಸಲಿ ಎನ್ನುತ್ತಾರೆ ಆಟೋ ಸಂಘದ ಅಧ್ಯಕ್ಷ.

ಬೈಟ್: ಅಬ್ಬಾಸ್, ಆಟೋ ಸಂಘದ ಅಧ್ಯಕ್ಷ, ಹಾಸನ.

ಇನ್ನು ಯುವ ನಿರ್ದೇಶಕ ಅಶೋಕ್ದೇವ್ ಚಿತ್ರವನ್ನು ನಿರ್ದೇಶಿಸಿದ್ದು, ಕಾಮಿಡಿ ಮೂಲಕ ಕಿರುತೆರೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕ್ಯೂಟ್ ಆ್ಯಂಡ್ ಹಾಟ್ ಸುಂದರಿ ರೂಪಿಕಾ ಚಿತ್ರದ ನಾಯಕಿ. ಮೊದಲ ಬಾರಿಗೆ ನಾಯಕನಟನಾಗಿ ನಮ್ ಜಗದೀಶ್ ಬಣ್ಣ ಹಚ್ಚಿದ್ದು, ಪಕ್ಕಾ ಕಮರ್ಷಿಯಲ್ ಪ್ಯಾಮಿಲಿ ಮೂವಿಯಾಗಿದೆಯಂತೆ. ಶಾಮ್ರಾಜ್ ಅವರ ಛಾಯಾಗ್ರಹಣವಿದ್ದು, ಶ್ರೀಕಾಂತ್ ಸಂಕಲನ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.