ETV Bharat / state

ಸಾಮಾಜಿಕ ಜಾಗೃತಿಗಾಗಿ 4 ದಿನಗಳ ಸೈಕಲ್​ ಜಾಥಾ ಕೈಗೊಂಡ ಸ್ಕೌಟ್ಸ್​ ಅಂಡ್​ ಗೈಡ್ಸ್​ ವಿದ್ಯಾರ್ಥಿಗಳು

author img

By

Published : Jan 27, 2020, 4:32 AM IST

ಹಾಸನ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಮತ್ತು ಬೆಸ್ಟ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಸನ, ಇವರ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳು ಹಾಸನ ಜಿಲ್ಲಾದ್ಯಂತ 350 ಕಿಲೋ ಮೀಟರ್ ಗಳ ಸೈಕಲ್ ಜಾಥಾ ಮಾಡಲಿದ್ದಾರೆ

ಸೈಕಲ್ ಜಾಥಾ
ಸೈಕಲ್ ಜಾಥಾ

ಹಾಸನ: ಕಡ್ಡಾಯ ಮತದಾನ, ಮಳೆಕೊಯ್ಲು, ಪೋಲಾಗುತ್ತಿರುವ ಆಹಾರ, ಅಂತರ್ಜಲ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳಿಂದ ಭಾನುವಾರ 4 ದಿನಗಳ ಕಾಲ ಸೈಕಲ್ ಜಾಥಾಗೆ ಹಾಸನದಲ್ಲಿ ಚಾಲನೆ ನೀಡಲಾಯಿತು.

ಹಾಸನ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಮತ್ತು ಬೆಸ್ಟ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಸನ, ಇವರ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳು ಹಾಸನ ಜಿಲ್ಲಾದ್ಯಂತ 350 ಕಿಲೋ ಮೀಟರ್ ಗಳ ಸೈಕಲ್ ಜಾಥಾ ಮಾಡಲಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಮತ್ತು ಏಕಲವ್ಯ ರೋವರ್ ಮುಕ್ತ ದಳದ ಹದಿನೈದು ರೋವರ್ಸ್ ತಂಡ 26 ಜನವರಿ 31 ರವರೆಗೆ 6 ದಿನಗಳ ಕಾಲ ಪ್ರಯಾಣ ನಡೆಸಲಿದೆ. ಈ ತಂಡ ಹಾಸನದಿಂದ ಹೊರಟು, ಹೊಳೆನರಸೀಪುರ-ಅರಕಲಗೂಡು-ಚನ್ನರಾಯಪಟ್ಟಣ-ಅರಸೀಕೆರೆ-ಬೇಲೂರು-ಸಕಲೇಶಪುರದ ಮೂಲಕ ವಾಪಸ್ಸು ಹಾಸನಕ್ಕೆ ಆಗಮಿಸುವ ಮೂಲಕ ಜಾಥಾ ಮುಕ್ತಾಯಗೊಳ್ಳಲಿದೆ.

ಸೈಕಲ್ ಜಾಥಾ

ದೇಶದಲ್ಲಿ ದಿನನಿತ್ಯ ಸಾವಿರಾರು ಟನ್ ಆಹಾರ ಪೋಲಾಗುತ್ತಿದ್ದು, ಇದರಿಂದ ಸಾವಿರಾರು ಕೋಟಿ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಆರ್ಥಿಕತೆಯ ಮೇಲೂ ಬಹಳಷ್ಟು ಪರಿಣಾಮ ಬೀರಿದೆ. ಪ್ರತಿಯೊಬ್ಬರು ಆಹಾರವನ್ನು ವ್ಯರ್ಥ ಮಾಡದೆ ಉಳಿಸಿ ಸಂರಕ್ಷಣೆ ಮಾಡುವ ಚಿಂತನೆ ಅವಶ್ಯಕವಾಗಿದೆ. ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕಿದೆ. ಅಲ್ಲದೇ ಮಳೆ ನೀರು ಕೊಯ್ಲು ಪದ್ದತಿ ಕಡ್ಡಾಯವಾಗಿ ಆಳವಡಿಸಿ ಅಂತರ್ಜಲ ಹೆಚ್ಚಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಾಸನದ ಸ್ಕೌಟ್ಸ್​ ಅಂಡ್ ಗೈಡ್ಸ್​ ತಾಲೂಕು ಉಪಾಧ್ಯಕ್ಷ ಸುನಿಲ್​ ಕುಮಾರ್​ ಜೈನ್​ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಸ್ಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷ ಆರ್.ಜಿ.ಗಿರೀಶ್, ಕಾರ್ಯದರ್ಶಿ ಶಂಕರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಹಾಸನ: ಕಡ್ಡಾಯ ಮತದಾನ, ಮಳೆಕೊಯ್ಲು, ಪೋಲಾಗುತ್ತಿರುವ ಆಹಾರ, ಅಂತರ್ಜಲ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳಿಂದ ಭಾನುವಾರ 4 ದಿನಗಳ ಕಾಲ ಸೈಕಲ್ ಜಾಥಾಗೆ ಹಾಸನದಲ್ಲಿ ಚಾಲನೆ ನೀಡಲಾಯಿತು.

ಹಾಸನ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಮತ್ತು ಬೆಸ್ಟ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಸನ, ಇವರ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳು ಹಾಸನ ಜಿಲ್ಲಾದ್ಯಂತ 350 ಕಿಲೋ ಮೀಟರ್ ಗಳ ಸೈಕಲ್ ಜಾಥಾ ಮಾಡಲಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಮತ್ತು ಏಕಲವ್ಯ ರೋವರ್ ಮುಕ್ತ ದಳದ ಹದಿನೈದು ರೋವರ್ಸ್ ತಂಡ 26 ಜನವರಿ 31 ರವರೆಗೆ 6 ದಿನಗಳ ಕಾಲ ಪ್ರಯಾಣ ನಡೆಸಲಿದೆ. ಈ ತಂಡ ಹಾಸನದಿಂದ ಹೊರಟು, ಹೊಳೆನರಸೀಪುರ-ಅರಕಲಗೂಡು-ಚನ್ನರಾಯಪಟ್ಟಣ-ಅರಸೀಕೆರೆ-ಬೇಲೂರು-ಸಕಲೇಶಪುರದ ಮೂಲಕ ವಾಪಸ್ಸು ಹಾಸನಕ್ಕೆ ಆಗಮಿಸುವ ಮೂಲಕ ಜಾಥಾ ಮುಕ್ತಾಯಗೊಳ್ಳಲಿದೆ.

ಸೈಕಲ್ ಜಾಥಾ

ದೇಶದಲ್ಲಿ ದಿನನಿತ್ಯ ಸಾವಿರಾರು ಟನ್ ಆಹಾರ ಪೋಲಾಗುತ್ತಿದ್ದು, ಇದರಿಂದ ಸಾವಿರಾರು ಕೋಟಿ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಆರ್ಥಿಕತೆಯ ಮೇಲೂ ಬಹಳಷ್ಟು ಪರಿಣಾಮ ಬೀರಿದೆ. ಪ್ರತಿಯೊಬ್ಬರು ಆಹಾರವನ್ನು ವ್ಯರ್ಥ ಮಾಡದೆ ಉಳಿಸಿ ಸಂರಕ್ಷಣೆ ಮಾಡುವ ಚಿಂತನೆ ಅವಶ್ಯಕವಾಗಿದೆ. ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕಿದೆ. ಅಲ್ಲದೇ ಮಳೆ ನೀರು ಕೊಯ್ಲು ಪದ್ದತಿ ಕಡ್ಡಾಯವಾಗಿ ಆಳವಡಿಸಿ ಅಂತರ್ಜಲ ಹೆಚ್ಚಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಾಸನದ ಸ್ಕೌಟ್ಸ್​ ಅಂಡ್ ಗೈಡ್ಸ್​ ತಾಲೂಕು ಉಪಾಧ್ಯಕ್ಷ ಸುನಿಲ್​ ಕುಮಾರ್​ ಜೈನ್​ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಸ್ಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷ ಆರ್.ಜಿ.ಗಿರೀಶ್, ಕಾರ್ಯದರ್ಶಿ ಶಂಕರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

Intro:ಹಾಸನ: ಕಡ್ಡಾಯ ಮತದಾನ, ಮಳೆಕೊಯ್ಲು, ಪೋಲಾಗುತ್ತಿರುವ ಆಹಾರ, ಅಂತರ್ಜಲ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದಿನಿಂದ 4 ದಿನಗಳ ಕಾಲ ಸೈಕಲ್ ಜಾಥಾ ಗೆ ಚಾಲನೆ ನೀಡಲಾಗಿದೆ ಎಂದು ಸುನೀಲ್ ಕುಮಾರ್ ಜೈನ್ ಹೇಳಿದ್ರು.

ಹಾಸನ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಮತ್ತು `ಬೆಸ್ಟ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಸನ, ಇವರ ಸಹಭಾಗಿತ್ವದಲ್ಲಿ ಚಿತ್ರದುರ್ಗದ ಹೊಳಲ್ಕೆರೆಯ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳು ಹಾಸನ ಜಿಲ್ಲಾದ್ಯಂತ 350 ಕಿಲೋ ಮೀಟರ್ ಗಳ ಸೈಕಲ್ ಜಾಥಾ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಮತ್ತು ಏಕಲವ್ಯ ರೋವರ್ ಮುಕ್ತ ದಳದ ಹದಿನೈದು ರೋವರ್ಸ್ ತಂಡ 26 ಜನವರಿ 31 ರವರೆಗೆ 6 ದಿನಗಳ ಕಾಲ ಪ್ರಯಾಣ ನಡೆಸಲಿದ್ದು, ಹಾಸನದಿಂದ ಹೊರಟು, ಹೊಳೆನರಸೀಪುರ-ಅರಕಲಗೂಡು-ಚನ್ನರಾಯಪಟ್ಟಣ-ಅರಸೀಕೆರೆ-ಬೇಲೂರು-ಸಕಲೇಶಪುರದ ಮೂಲಕ ವಾಪಸ್ಸು ಹಾಸನಕ್ಕೆ ಆಗಮಿಸುವ ಮೂಲಕ ಜಾಥಾ ಮುಕ್ತಾಯಗೊಳ್ಳಲಿದೆ.

ದೇಶದಲ್ಲಿ ದಿನನಿತ್ಯ ಸಾವಿರಾರು ಟನ್ ಆಹಾರ ಪೋಲಾಗುತ್ತಿದ್ದು, ಇದರಿಂದ ಸಾವಿರಾರು ಕೋಟಿ ಹಣ ವ್ಯರ್ಥವಾಗುತ್ತಿದ್ದು, ಆರ್ಥಿಕತೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಪ್ರತಿಯೊಬ್ಬರು ಆಹಾರವನ್ನು ವ್ಯರ್ಥ ಮಾಡದೆ ಉಳಿಸಿ ಸಂರಕ್ಷಣೆ ಮಾಡುವ ಚಿಂತನೆ ಅವಶ್ಯಕವಾಗಿದೆ. ಇನ್ನು ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕಿದೆ. ಅಲ್ಲದೇ ಮಳೆ ನೀರು ಕೊಯ್ಲು ಪದ್ದತಿ ಕಡ್ಡಾಯವಾಗಿ ಆಳವಡಿಸಿ ಅಂತರ್ಜಲ ಹೆಚ್ಚಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದ್ದು, ಬರಿದಾಗುತ್ತಿರುವ ಪೃಕೃತಿಯಲ್ಲಿ ಹಸಿರು ಹೆಚ್ಚಿಸುವಂತೆ ಈ ನಿಟ್ಟಿನಲ್ಲಿ ಪ್ರತಿ ಮಕ್ಕಳು ಯುವ ಜನರಲ್ಲಿ ಹಾಗು ಸಂಘ ಸಂಸ್ಥೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕಾರ್ಯಕ್ರಮದಲ್ಲಿ ಬೆಸ್ಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷ ಆರ್.ಜಿ.ಗಿರೀಶ್, ಕಾರ್ಯದರ್ಶಿ ಶಂಕರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ರು.

ಬೈಟ್: ಸುನೀಲ್ ಕುಮಾರ್ ಜೈನ್, ಉಪಾಧ್ಯಕ್ಷ, ಹಾಸನ ತಾಲ್ಲೂಕು ಸ್ಕೌಟ್ಸ್ ಮತ್ತು ಗೈಟ್ಸ್


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.