ETV Bharat / state

ಖಾಕಿ ಕೋಟೆಯೊಳಗೆ ಮಾರಕಾಸ್ತ್ರ ತಂದು ತಾನಾಗೆ ಸಿಕ್ಕಿಬಿದ್ದ ರೌಡಿ ಶೀಟರ್​ - ರೌಡಿಶೀಟರ್​ ವಿಜಯ್ ಕುಮಾರ್

ಅಪರಾದ ಪ್ರಕರಣಗಳನ್ನು ಕಡಿಮೆ ಮಾಡಲೆಂದು ಪೊಲೀಸರು ರೌಡಿಗಳ ಪರೇಡ್ ನಡೆಸಿದರೆ, ಅಲ್ಲಿಗೆ ಬಂದ ರೌಡಿ ಶೀಟರ್​ ಕಾರಿನಲ್ಲಿ ಮಾರಕಾಸ್ತ್ರಗಳನ್ನು ತಂದು ಸಿಕ್ಕಿಬಿದ್ದಿದ್ದಾನೆ.

ಪರೇಡ್​ಗೆ ಚಾಕು ತಂದು ಸಿಕ್ಕಿಬಿದ್ದ ರೌಡಿ ಶೀಟರ್​
ಪರೇಡ್​ಗೆ ಚಾಕು ತಂದು ಸಿಕ್ಕಿಬಿದ್ದ ರೌಡಿ ಶೀಟರ್​
author img

By

Published : Jul 30, 2021, 5:29 AM IST

ಹಾಸನ: ರೌಡಿಗಳ ಪರೇಡ್​ಗೆ ಬಂದಿದ್ದ ರೌಡಿಶೀಟರ್ ಓರ್ವ ಐಶಾರಾಮಿ ವಾಹನದಲ್ಲಿ ಮಾರಕಾಸ್ತ್ರಗಳನ್ನು ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆೆ ಹಾಸನದಲ್ಲಿ ನಡೆದಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನರಾಯಪಟ್ಟಣ ಸೇರಿದಂತೆ ಹಲವೆಡೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ರೌಡಿಸಂ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಇವತ್ತು ಹಾಸನದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಎಸ್​ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ರೌಡಿಗಳ ಪೆರೇಡ್ ಮಾಡಲಾಯಿತು. ರೌಡಿ ಪೆರೇಡ್​ಗೆ ತಡವಾಗಿ ಬಂದರೂ ಐಷಾರಾಮಿ ಕಾರಲ್ಲಿ ಬಂದ ರೌಡಿ ಶೀಟರ್​ನ ಕಾರಣ ಅನುಮಾನಗೊಂಡು ಎಸ್ಪಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಮಾರಕಾಸ್ತ್ರ ಸಿಕ್ಕಿದ್ದು, ಅದೇ ಕಾರಿನಲ್ಲಿ ಬಂದ ಪೊಲೀಸರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

ರೌಡಿಗಳ ಪರೇಡ್​ಗೆ ಚಾಕು ತಂದು ಸಿಕ್ಕಿಬಿದ್ದ ರೌಡಿ ಶೀಟರ್​
ಹಲವು ಪ್ರಕರಣಗಳ ಅಡಿಯಲ್ಲಿ ಜೈಲುಪಾಲಾಗಿದ್ದ ಬರಗೂರು ವಿಜಯ್ ಅಲಿಯಾಸ್ ವಿಜಯ್ ಕುಮಾರ್, ಇಂದು ರೌಡಿ ಪೆರೇಡ್​ಗೆ ಬಂದಿದ್ದ. ತನ್ನ ಐಶಾರಾಮಿ ಕಾರಿನಲ್ಲಿ ತನ್ನ ಸ್ನೇಹಿತ ಕಾಳೇನಹಳ್ಳಿ ವಿಜಯ್ ಜೊತೆ ಪೆರೇಡ್ ಮಾಡುತ್ತಿದ್ದ ಶಶಸ್ತ್ರ ಮೀಸಲುಪಡೆ ಮೈದಾನಕ್ಕೆ ಬಂದಾಗ, ಅನುಮಾನಗೊಂಡ ಎಸ್​ಪಿ ಶ್ರೀನಿವಾಸಗೌಡ ಆತನ ಮೊಬೈಲ್ ಪರಿಶೀಲನೆ ಮಾಡಿದರು. ಮೊಬೈಲ್ ಪರಿಶೀಲನೆ ಮಾಡಿದಾಗ ಆತ, ಕೆಲವು ರೌಡಿಗಳಿಗೆ ದೂರವಾಣಿ ಕರೆ ಮಾಡಿರುವುದು ತಿಳಿದುಬಂದಿದೆ. ಇದರಿಂದ ಅನುಮಾನಗೊಂಡ ಬಳಿಕ ಕಾರನ್ನು ಪರಿಶೀಲಿಸಿದಾಗ ಮಾರಕಾಸ್ತ್ರ ದೊರೆಕಿವೆ.
ಕಾರಿನೊಳಗೆ ಸಿಕ್ಕ ಚಾಕು
ಕಾರಿನೊಳಗೆ ಸಿಕ್ಕ ಚಾಕು

ಸಾಮಾನ್ಯವಾಗಿ ರೌಡಿ ಪೆರೇಡ್ ಬರುವ ಅಪರಾಧಿಗಳು ಯಾವುದೇ ಮಾರಕಾಸ್ತ್ರ ಮತ್ತು ಇತರೆ ವಸ್ತುಗಳನ್ನು ತರೆದೇ ಬರುವುದು ಸರ್ವೇ ಸಾಮಾನ್ಯ. ಆದರೆ ಈತ ಮಾತ್ರ ಗೊತ್ತಿದ್ದು ಮಾರಕಾಸ್ತ್ರ ತಂದನೋ. . ? ಅಥವಾ ತನ್ನ ರಕ್ಷಣೆಗಾಗಿ ತಂದನೋ ಗೊತ್ತಿಲ್ಲ. ? ಆದರೆ ಖಾಕಿ ಕೋಟೆಯೊಳಗೆ ತಂದು ಸಿಕ್ಕಿಬಿದ್ದಿದ್ದು ಮಾತ್ರ ದುರಂತವೇ ಸರಿ.

ಇದನ್ನು ಓದಿ:ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಾಸನ: ರೌಡಿಗಳ ಪರೇಡ್​ಗೆ ಬಂದಿದ್ದ ರೌಡಿಶೀಟರ್ ಓರ್ವ ಐಶಾರಾಮಿ ವಾಹನದಲ್ಲಿ ಮಾರಕಾಸ್ತ್ರಗಳನ್ನು ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆೆ ಹಾಸನದಲ್ಲಿ ನಡೆದಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನರಾಯಪಟ್ಟಣ ಸೇರಿದಂತೆ ಹಲವೆಡೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ರೌಡಿಸಂ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಇವತ್ತು ಹಾಸನದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಎಸ್​ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ರೌಡಿಗಳ ಪೆರೇಡ್ ಮಾಡಲಾಯಿತು. ರೌಡಿ ಪೆರೇಡ್​ಗೆ ತಡವಾಗಿ ಬಂದರೂ ಐಷಾರಾಮಿ ಕಾರಲ್ಲಿ ಬಂದ ರೌಡಿ ಶೀಟರ್​ನ ಕಾರಣ ಅನುಮಾನಗೊಂಡು ಎಸ್ಪಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಮಾರಕಾಸ್ತ್ರ ಸಿಕ್ಕಿದ್ದು, ಅದೇ ಕಾರಿನಲ್ಲಿ ಬಂದ ಪೊಲೀಸರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

ರೌಡಿಗಳ ಪರೇಡ್​ಗೆ ಚಾಕು ತಂದು ಸಿಕ್ಕಿಬಿದ್ದ ರೌಡಿ ಶೀಟರ್​
ಹಲವು ಪ್ರಕರಣಗಳ ಅಡಿಯಲ್ಲಿ ಜೈಲುಪಾಲಾಗಿದ್ದ ಬರಗೂರು ವಿಜಯ್ ಅಲಿಯಾಸ್ ವಿಜಯ್ ಕುಮಾರ್, ಇಂದು ರೌಡಿ ಪೆರೇಡ್​ಗೆ ಬಂದಿದ್ದ. ತನ್ನ ಐಶಾರಾಮಿ ಕಾರಿನಲ್ಲಿ ತನ್ನ ಸ್ನೇಹಿತ ಕಾಳೇನಹಳ್ಳಿ ವಿಜಯ್ ಜೊತೆ ಪೆರೇಡ್ ಮಾಡುತ್ತಿದ್ದ ಶಶಸ್ತ್ರ ಮೀಸಲುಪಡೆ ಮೈದಾನಕ್ಕೆ ಬಂದಾಗ, ಅನುಮಾನಗೊಂಡ ಎಸ್​ಪಿ ಶ್ರೀನಿವಾಸಗೌಡ ಆತನ ಮೊಬೈಲ್ ಪರಿಶೀಲನೆ ಮಾಡಿದರು. ಮೊಬೈಲ್ ಪರಿಶೀಲನೆ ಮಾಡಿದಾಗ ಆತ, ಕೆಲವು ರೌಡಿಗಳಿಗೆ ದೂರವಾಣಿ ಕರೆ ಮಾಡಿರುವುದು ತಿಳಿದುಬಂದಿದೆ. ಇದರಿಂದ ಅನುಮಾನಗೊಂಡ ಬಳಿಕ ಕಾರನ್ನು ಪರಿಶೀಲಿಸಿದಾಗ ಮಾರಕಾಸ್ತ್ರ ದೊರೆಕಿವೆ.
ಕಾರಿನೊಳಗೆ ಸಿಕ್ಕ ಚಾಕು
ಕಾರಿನೊಳಗೆ ಸಿಕ್ಕ ಚಾಕು

ಸಾಮಾನ್ಯವಾಗಿ ರೌಡಿ ಪೆರೇಡ್ ಬರುವ ಅಪರಾಧಿಗಳು ಯಾವುದೇ ಮಾರಕಾಸ್ತ್ರ ಮತ್ತು ಇತರೆ ವಸ್ತುಗಳನ್ನು ತರೆದೇ ಬರುವುದು ಸರ್ವೇ ಸಾಮಾನ್ಯ. ಆದರೆ ಈತ ಮಾತ್ರ ಗೊತ್ತಿದ್ದು ಮಾರಕಾಸ್ತ್ರ ತಂದನೋ. . ? ಅಥವಾ ತನ್ನ ರಕ್ಷಣೆಗಾಗಿ ತಂದನೋ ಗೊತ್ತಿಲ್ಲ. ? ಆದರೆ ಖಾಕಿ ಕೋಟೆಯೊಳಗೆ ತಂದು ಸಿಕ್ಕಿಬಿದ್ದಿದ್ದು ಮಾತ್ರ ದುರಂತವೇ ಸರಿ.

ಇದನ್ನು ಓದಿ:ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.