ETV Bharat / state

ತಾತ, ಸಹೋದರನ ಸೋಲು... ಹಾಸನದಲ್ಲಿ ಪ್ರಜ್ವಲ್ ಗೆಲುವಿಗಿಲ್ಲ ಸಂಭ್ರಮ

author img

By

Published : May 24, 2019, 10:30 AM IST

ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ಎ. ಮಂಜು ಸೋತಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವಿನ ನಗೆ

ಹಾಸನ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಒಟ್ಟಾರೆ 6,75,512 ಮತ ಪಡೆಯುವ ಮೂಲಕ1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,33,389 ಮತ ಪಡೆದು ಸೋಲನುಭವಿಸಿದ್ದಾರೆ.

ಕುತೂಹಲದ ಕಣವಾಗಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಪಾರಮ್ಯ ಸಾಧಿಸಿದ್ದಾರೆ. ನಿರೀಕ್ಷೆಯಂತೆಯೇ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.

ಗೆದ್ದ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಗೆಲುವನ್ನು ಮೈತ್ರಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಅರ್ಪಿಸಿದ್ರು. ಈ ಗೆಲುವಿನಿಂದ ಸಂತಸವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಶಕ್ತಿ ಕೊಟ್ಟಿರುವ ಜನರಿಗಾಗಿ ದುಡಿಯುವೆ. ಅಭಿವೃದ್ಧಿಗೆ ಜನರು ನನ್ನನ್ನು ಬೆಂಬಲಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ ಹಾಗೂ ನಿರುದ್ಯೋಗಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದಿದ್ದಾರೆ.

ಒಟ್ಟಾರೆ 16ಕ್ಕೂ ಹೆಚ್ಚು ಸುತ್ತಿನ ಮತ ಎಣಿಕೆಯಲ್ಲಿ ಒಮ್ಮೆಯೂ ಮುನ್ನಡೆ ಕಾಣದ ಬಿಜೆಪಿಯ ಎ.ಮಂಜು, 5,33,389 ಮತ ಪಡೆಯಲಷ್ಟೇ ಶಕ್ತರಾದರು. ಆದರೆ ದೇವೇಗೌಡರ ಕುಟುಂಬದ ಎರಡು ಕಡೆಯ ಸೋಲು ದೊಡ್ಡಗೌಡರ ತವರಿನ ಒಂದು ಗೆಲುವಿನ ಸಂಭ್ರಮವನ್ನು ಮರೆಮಾಚಿದೆ. ನಿಖಲ್​ ಕುಮಾರಸ್ವಾಮಿ, ಹಾಗೂ ಹೆಚ್​ ಡಿ ದೇವೇಗೌಡರ ಸೋಲಿನಿಂದಾಗಿ ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಗೆದ್ದರೂ ವಿಜಯೋತ್ಸವದ ಉತ್ಸಾಹ ಕಂಡುಬರಲಿಲ್ಲ.

ಹಾಸನ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಒಟ್ಟಾರೆ 6,75,512 ಮತ ಪಡೆಯುವ ಮೂಲಕ1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,33,389 ಮತ ಪಡೆದು ಸೋಲನುಭವಿಸಿದ್ದಾರೆ.

ಕುತೂಹಲದ ಕಣವಾಗಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಪಾರಮ್ಯ ಸಾಧಿಸಿದ್ದಾರೆ. ನಿರೀಕ್ಷೆಯಂತೆಯೇ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.

ಗೆದ್ದ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಗೆಲುವನ್ನು ಮೈತ್ರಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಅರ್ಪಿಸಿದ್ರು. ಈ ಗೆಲುವಿನಿಂದ ಸಂತಸವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಶಕ್ತಿ ಕೊಟ್ಟಿರುವ ಜನರಿಗಾಗಿ ದುಡಿಯುವೆ. ಅಭಿವೃದ್ಧಿಗೆ ಜನರು ನನ್ನನ್ನು ಬೆಂಬಲಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ ಹಾಗೂ ನಿರುದ್ಯೋಗಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದಿದ್ದಾರೆ.

ಒಟ್ಟಾರೆ 16ಕ್ಕೂ ಹೆಚ್ಚು ಸುತ್ತಿನ ಮತ ಎಣಿಕೆಯಲ್ಲಿ ಒಮ್ಮೆಯೂ ಮುನ್ನಡೆ ಕಾಣದ ಬಿಜೆಪಿಯ ಎ.ಮಂಜು, 5,33,389 ಮತ ಪಡೆಯಲಷ್ಟೇ ಶಕ್ತರಾದರು. ಆದರೆ ದೇವೇಗೌಡರ ಕುಟುಂಬದ ಎರಡು ಕಡೆಯ ಸೋಲು ದೊಡ್ಡಗೌಡರ ತವರಿನ ಒಂದು ಗೆಲುವಿನ ಸಂಭ್ರಮವನ್ನು ಮರೆಮಾಚಿದೆ. ನಿಖಲ್​ ಕುಮಾರಸ್ವಾಮಿ, ಹಾಗೂ ಹೆಚ್​ ಡಿ ದೇವೇಗೌಡರ ಸೋಲಿನಿಂದಾಗಿ ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಗೆದ್ದರೂ ವಿಜಯೋತ್ಸವದ ಉತ್ಸಾಹ ಕಂಡುಬರಲಿಲ್ಲ.

Intro:Body:

ಹಾಸನ: ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ, ಪ್ರಜ್ವಲ್ ರೇವಣ್ಣಗೆಲುವಿನ ನಗೆ ಬೀರಿದ್ದಾರೆ.



ಪ್ರಜ್ವಲ್ ರೇವಣ್ಣ ಒಟ್ಟಾರೆ 6,75,512 ಮತ ಪಡೆಯುವ ಮೂಲಕ 1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,33,389 ಮತ ಪಡೆದು 2ನೇ ಬಾರಿಯೂ ಸೋಲನುಭವಿಸಿದ್ದಾರೆ.



ದೇವೇಗೌಡ ಕುಟುಂಬದ ಎರಡು ಕಡೆಯ ಸೋಲು ದೊಡ್ಡಗೌಡರ ತವರಿನ 1 ಗೆಲುವಿನ ಸಂಭ್ರಮವನ್ನು ಇಲ್ಲವಾಗಿಸಿದೆ. ಎಲ್ಲೆಯೂ ವಿಜಯೋತ್ಸವದ ಉತ್ಸಾಹ ಕಾಣದಂತಾಗಿದೆ. ಕುತೂಹಲದ ಕಣವಾಗಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಪಾರಮ್ಯ ಸಾಧಿಸಿದ್ದಾರೆ. ನಿರೀಕ್ಷೆಯಂತೆಯೇ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.



ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದಲೂ ನಿರಂತರ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದಿದ್ದರು. ಈ ಮೂಲಕ 1991ರಲ್ಲಿ ತಾತ ದೇವೇಗೌಡರು, 1996 ರಲ್ಲಿ ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ದಾಖಲೆಯನ್ನು ಪ್ರಜ್ವಲ್ ಸರಿಗಟ್ಟಿದರು. 



ಗೆದ್ದ ಬಳಿಕ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿ ಮಾತನಾಡಿದ ಪ್ರಜ್ವಲ್, ಗೆಲುವನ್ನು ಮೈತ್ರಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಸಲ್ಲಿಸಿದರು. ಇದರಿಂದ ನನಗೆ ಅತೀವ ಸಂತೋಷವಾಗಿದೆ. ಜಿಲ್ಲೆಯ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಶಕ್ತಿ ಕೊಟ್ಟಿರುವ ಜನರಿಗಾಗಿ ದುಡಿಯುವೆ. ಅಭಿವೃದ್ಧಿಗೆ ಜನರು ನನ್ನನ್ನು ಬೆಂಬಲಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ ಹಾಗೂ ನಿರುದ್ಯೋಗಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದಿದ್ದಾರೆ. 



ಒಟ್ಟಾರೆ 16ಕ್ಕೂ ಹೆಚ್ಚು ಸುತ್ತಿನ ಮತ ಎಣಿಕೆಯಲ್ಲಿ ಒಮ್ಮೆಯೂ ಮುನ್ನಡೆ ಕಾಣದ ಬಿಜೆಪಿಯ ಎ.ಮಂಜು, 5,33,389 ಮತ ಪಡೆಯಲಷ್ಟೇ ಶಕ್ತರಾದರು. ಈ ಮೂಲಕ 2014ರಲ್ಲಿ ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಸೋಲುಂಡಿದ್ದ ಮಂಜು, ಹೆಚ್ಡಿಡಿ ಮೊಮ್ಮಗನ ವಿರುದ್ಧವೂ ಪರಾಭವಗೊಂಡ ವಿಚಿತ್ರ ದಾಖಲೆಗೆ ಭಾಜನರಾದರು.



ಈ ವೇಳೆ ಮಾತನಾಡಿದ ಮಂಜು, 5.33 ಲಕ್ಷ ಮತ ಪಡೆದಿರುವ ನಾನು ಜನರ ಮನಸ್ಸಿನಲ್ಲಿ ನಾನು ಗೆದ್ದಿದ್ದೇನೆ. ಹಣ ಮತ್ತು ಅಧಿಕಾರದ ದುರ್ಬಳಕೆಯಿಂದ ಮೈತ್ರಿ ಅಭ್ಯರ್ಥಿ ಗೆದ್ದಿದ್ದಾರೆ. ಆದರೂ ನಾಮಪತ್ರ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿರುವ ಪ್ರಜ್ವಲ್ ವಿರುದ್ಧ ಕಾನೂನು ಹೋರಾಟ ಮುಂದುವರಿಸುವೆ. ಕೆಲವೇ ದಿನಗಳಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ದೇವೇಗೌಡರು ಕೊನೆಯ ಚುನಾವಣೆಯನ್ನೂ ಹಾಸನದಿಂದಲೇ ಎದುರಿಸಬೇಕು. ಅವರು ಇಲ್ಲಿಂದಲೇ ಸ್ಪರ್ಧೆ ಮಾಡಬೇಕು ಎಂದು ನಾನು ಮನವಿ ಮಾಡಿದ್ದೆ. ಆದ್ರೆ ಅವರು ಮೈತ್ರಿ ಬಳಸಿಕೊಂಡು ಮೊಮ್ಮಕ್ಕಗಳನ್ನು ದಡ ಸೇರಿಸಲು ಹೋಗಿ ಎಡವಿದರು ಎಂದು ಲೇವಡಿ ಮಾಡಿದ್ದಾರೆ. ಆಂಧ್ರದ ಚಂದ್ರಬಾಬು ನಾಯ್ಡು ಅವರಂತೆ, ಇಲ್ಲೂ ಕೂಡ ನೈತಿಕ ಹೊಣೆಹೊತ್ತು ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಮಂಜು ಆಗ್ರಹಿಸಿದರು.

ಬೈಟ್: ಎ.ಮಂಜು, ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ.



ಹಾಸನದಲ್ಲಿ ಪ್ರಜ್ವಲ್ ಗೆದ್ದರೂ, ದೇವೇಗೌಡರು ಮತ್ತು ನಿಖಿಲ್ ಸೋಲು, ಗೆಲುವಿನ ಸಂಭ್ರಮವನ್ನು ಕಸಿದುಕೊಂಡಿದೆ. ಇದೇ ಕಾರಣಕ್ಕೆ, ಜೆಡಿಎಸ್ ಕಾರ್ಯಕರ್ತರು ಎಲ್ಲೂ ಕೂಡ ವಿಜಯೋತ್ಸವ ಆಚರಿಸಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ 144 ಜಾರಿ ಮಾಡಲಾಗಿತ್ತು. ಇದನ್ನೇ ನೆಪಮಾಡಿಕೊಂಡ ದಳ ಕಾರ್ಯಕರ್ತರು-ಮುಖಂಡರು ಬೀದಿಗೆ ಇಳಿಯಲೇ ಇಲ್ಲ.

ಬಹುತೇಕರು ಸುಮಾರು 6 ದಶಕಗಳ ಸುದೀರ್ಘ ರಾಜಕೀಯ ಹಾದಿ ಸವೆಸಿರುವ ದೇವೇಗೌಡರು, ಕಡೆಯ ಚುನಾವಣೆಯಲ್ಲಿ ಸೋಲಬಾರದಿತ್ತು ಎಂದು ಅತೀವವಾಗಿ ನೊಂದುಕೊಂಡಿದ್ದಾರೆ.



ಒಟ್ಟಾರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ರಾಜ್ಯದ ಹೆಚ್ಚು ಕಡೆ ಮೈತ್ರಿ ಲೆಕ್ಕಾಚಾರ ಉಲ್ಟಾ ಹೊಡೆದಿದ್ದರೆ, ಹಾಸನದಲ್ಲಿ ಸಕ್ಸಸ್ ಆಗಿರುವುದು ವಿಶೇಷ.


Conclusion:

For All Latest Updates

TAGGED:

hsn story
ETV Bharat Logo

Copyright © 2024 Ushodaya Enterprises Pvt. Ltd., All Rights Reserved.