ETV Bharat / state

ಜನರ ಸಮಸ್ಯೆ ಕೇಳಲು ಅಧಿಕಾರಿಗಳು ಗೈರು: ಸಂಸದ ಪ್ರಜ್ವಲ್​ ರೇವಣ್ಣ ಗರಂ - ಹಾಸನ ತಹಶೀಲ್ದಾರ್​​ ವಿರುದ್ಧ ಪ್ರಜ್ವಲ್​ ರೇವಣ್ಣ ಆಕ್ರೋಶ

ಹಾಸನದ ಜನರ ಸಮಸ್ಯೆ ಆಲಿಸಲು ಬಂದಾಗ ಯಾವ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

prajwal
ಸಂಸದ ಪ್ರಜ್ವಲ್​ ರೇವಣ್ಣ
author img

By

Published : Jan 13, 2020, 8:35 PM IST

ಹಾಸನ: ನಗರದ 35ನೇ ವಾರ್ಡಿನ ಸಮಸ್ಯೆ ಆಲಿಸಲು ಬಂದಾಗ ಯಾವ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳಾದವರು ಯಾವುದೇ ಒಂದು ಪಕ್ಷದ ಪರ ಕೆಲಸ ಮಾಡಲು ಹೋಗಬಾರದು. ಕೂಡಲೇ ವೇದಿಕೆ ಬಳಿ ಬರುವಂತೆ ಸೂಚಿಸಿದರು. ನನಗೆ ಕೆಲಸ ಇಲ್ಲದೇ ಇಲ್ಲಿಗೆ ಬಂದಿಲ್ಲ, ಜನರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ. ನಗರಸಭೆ ಕಮಿಷನರ್​​​ಗೆ ಕರೆ ಮಾಡಿದರೇ ಕೋರ್ಟ್ ಇದೆ ಎನ್ನುತ್ತಿದ್ದಾರೆ. ತಹಶೀಲ್ದಾರ್ ರವರು ಇದುವರೆಗೂ ಒಂದು ದಿನ ಇಂತಹ ಕಾರ್ಯಕ್ರಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದ್ದಾರಾ.. ಎಲ್ಲಾ ಅಧಿಕಾರಿಗಳಿಗೂ ಕೋರ್ಟ್ ಇದಿಯಾ ಎಂದು ಸಂಸದ ಪ್ರಜ್ವಲ್ ರೇವಣ್ಣ ಗರಂ ಆದರು.ಅಲ್ಲದೇ ಸಭೆಗೆ ಗೈರಾದ ಅಧಿಕಾರಿಗಳಿಗೆಲ್ಲಾ ನೋಟಿಸ್​​ ನೀಡುವುದಾಗಿ ಎಚ್ಚರಿಕೆ ನೀಡಿದ್ರು.

ಸಂಸದ ಪ್ರಜ್ವಲ್​ ರೇವಣ್ಣ

ಒಬ್ಬ ಎಂಪಿಗೆ ಮತ್ತು ಇಲ್ಲಿಗೆ ನನ್ನನ್ನು ಕರೆದಿರುವ ಜನರಿಗೆ ಗೌರವ ವಿಲ್ಲವೇ? 35 ನೇ ವಾರ್ಡಿನ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಿದ್ದಾರೆ. ಅಧಿಕಾರಿಗಳಿಗೆ ಅಧಿಕಾರ ಇರುವುದೇ ಜನರ ಕಷ್ಟ ಕೇಳುವುದಕ್ಕೆ. ಅಧಿಕಾರಿಗಳು ಯಾರ ಕಡೆಯಿಂದಾದರೂ ಅಧಿಕಾರಕ್ಕೆ ಬಂದಿರಲಿ ಇಲ್ಲಿಗೆ ಬಂದು ಸಂಸದರಿಗೆ ಒಂದು ಗೌರವ ತೋರಿಸುವುದು ಬೇಡವೇ? ಈ ವಾರ್ಡಿನಲ್ಲಿ ಲ್ಯಾಂಡ್​​ ಅಕ್ವೇರ್​​ ಸಮಸ್ಯೆ ಇದೆ. ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿ ವಾಸನೆ ಹೊಡೆಯುತ್ತಿದೆ. ಯಾರಾದರೂ ವಾರ್ಡಿಗೆ ಬಂದಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚೆ ಮಾಡಲಾಗುವುದು. ಯಾರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದಂತಹ ಸಂದರ್ಭದಲ್ಲಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದರು. ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ಲಭ್ಯವಾಗಬೇಕು ಎಂದರು.

ಹಾಸನ: ನಗರದ 35ನೇ ವಾರ್ಡಿನ ಸಮಸ್ಯೆ ಆಲಿಸಲು ಬಂದಾಗ ಯಾವ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳಾದವರು ಯಾವುದೇ ಒಂದು ಪಕ್ಷದ ಪರ ಕೆಲಸ ಮಾಡಲು ಹೋಗಬಾರದು. ಕೂಡಲೇ ವೇದಿಕೆ ಬಳಿ ಬರುವಂತೆ ಸೂಚಿಸಿದರು. ನನಗೆ ಕೆಲಸ ಇಲ್ಲದೇ ಇಲ್ಲಿಗೆ ಬಂದಿಲ್ಲ, ಜನರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ. ನಗರಸಭೆ ಕಮಿಷನರ್​​​ಗೆ ಕರೆ ಮಾಡಿದರೇ ಕೋರ್ಟ್ ಇದೆ ಎನ್ನುತ್ತಿದ್ದಾರೆ. ತಹಶೀಲ್ದಾರ್ ರವರು ಇದುವರೆಗೂ ಒಂದು ದಿನ ಇಂತಹ ಕಾರ್ಯಕ್ರಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದ್ದಾರಾ.. ಎಲ್ಲಾ ಅಧಿಕಾರಿಗಳಿಗೂ ಕೋರ್ಟ್ ಇದಿಯಾ ಎಂದು ಸಂಸದ ಪ್ರಜ್ವಲ್ ರೇವಣ್ಣ ಗರಂ ಆದರು.ಅಲ್ಲದೇ ಸಭೆಗೆ ಗೈರಾದ ಅಧಿಕಾರಿಗಳಿಗೆಲ್ಲಾ ನೋಟಿಸ್​​ ನೀಡುವುದಾಗಿ ಎಚ್ಚರಿಕೆ ನೀಡಿದ್ರು.

ಸಂಸದ ಪ್ರಜ್ವಲ್​ ರೇವಣ್ಣ

ಒಬ್ಬ ಎಂಪಿಗೆ ಮತ್ತು ಇಲ್ಲಿಗೆ ನನ್ನನ್ನು ಕರೆದಿರುವ ಜನರಿಗೆ ಗೌರವ ವಿಲ್ಲವೇ? 35 ನೇ ವಾರ್ಡಿನ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಿದ್ದಾರೆ. ಅಧಿಕಾರಿಗಳಿಗೆ ಅಧಿಕಾರ ಇರುವುದೇ ಜನರ ಕಷ್ಟ ಕೇಳುವುದಕ್ಕೆ. ಅಧಿಕಾರಿಗಳು ಯಾರ ಕಡೆಯಿಂದಾದರೂ ಅಧಿಕಾರಕ್ಕೆ ಬಂದಿರಲಿ ಇಲ್ಲಿಗೆ ಬಂದು ಸಂಸದರಿಗೆ ಒಂದು ಗೌರವ ತೋರಿಸುವುದು ಬೇಡವೇ? ಈ ವಾರ್ಡಿನಲ್ಲಿ ಲ್ಯಾಂಡ್​​ ಅಕ್ವೇರ್​​ ಸಮಸ್ಯೆ ಇದೆ. ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿ ವಾಸನೆ ಹೊಡೆಯುತ್ತಿದೆ. ಯಾರಾದರೂ ವಾರ್ಡಿಗೆ ಬಂದಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚೆ ಮಾಡಲಾಗುವುದು. ಯಾರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದಂತಹ ಸಂದರ್ಭದಲ್ಲಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದರು. ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ಲಭ್ಯವಾಗಬೇಕು ಎಂದರು.

Intro:ಹಾಸನ : ೩೫ನೇ ವಾರ್ಡಿನ ಸಮಸ್ಯೆ ಆಲಿಸಲು ಬಂದಾಗ ಯಾವ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಸದರಾದ ಪ್ರಜ್ವಲ್ ರೇವಣ್ಣನವರು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದಲ್ಲದೇ ಅವರಿಗೆಲ್ಲಾ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಸಿದರು.
      ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳೂ ಯಾವುದೇ ಒಂದು ಪಕ್ಷಕ್ಕೆ ಕೆಲಸ ಮಾಡಲು ಹೋಗಬಾರದು. ಕೂಡಲೇ ವೇದಿಕೆ ಬಳಿ ಬರುವಂತೆ ಸೂಚಿಸಿದರು. ನನ್ನ ಕೆಲಸ ಇಲ್ಲದೇ ಇಲ್ಲಿಗೆ ಬಂದಿರುವುದಿಲ್ಲ. ಜನರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ. ನಗರಸಭೆ ಕಮಿಷನರ್ ಗೆ ಕರೆ ಮಾಡಿದರೇ ಕೋರ್ಟ್ ಇದೆ ಎನ್ನುತ್ತಿದ್ದಾರೆ. ತಹಸೀಲ್ದಾರ್ ರವರು ಇದುವರೆಗೂ ಒಂದು ದಿನ ಇಂತಹ ಕಾರ್ಯಕ್ರಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದ್ದಾರಾ.. ಎಲ್ಲಾ ಅಧಿಕಾರಿಗಳಿಗೂ ಕೋರ್ಟ್ ಇದಿಯಾ ಎಂದು ಸಂಸದ ಪ್ರಜ್ವಲ್ ರೇವಣ್ಣ ಗರಂ ರೀತಿ ಮಾತನಾಡಿದರು.
 ಒಬ್ಬ ಎಂಪಿಗೆ ಮತ್ತು ಇಲ್ಲಿಗೆ ನನ್ನನ್ನು ಕರೆದಿರುವ ಜನರಿಗೆ ಗೌರವ ವಿಲ್ಲವೇ? ೩೫ನೇ ವಾರ್ಡಿನ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಿದ್ದಾರೆ. ಅಧಿಕಾರಿಗಳಿಗೆ ಅಧಿಕಾರ ಇರುವುದೇ ಜನರ ಕಷ್ಟ ಕೇಳುವುದಕ್ಕೆ. ಈಗೀನ ತಹಸೀಲ್ದಾರ್ ಯಾರ ಕಡೆಯಿಂದಾದರೂ ಇಲ್ಲಿಗೆ ಬಂದಿರಲಿ ಇಲ್ಲಿಗೆ ಬಂದು ಸಂಸದರಿಗೆ ಒಂದು ಗೌರವ ತೋರಿಸುವುದು ಬೇಡವೇ? ೩೫ನೇ ವಾರ್ಡಿನಲ್ಲಿ ಲ್ಯಾನ್ಡ್ ಅಕ್ವೇಶನ್ ಸಮಸ್ಯೆ ಇದೆ. ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿ ವಾಸನೆ ಹೊಡೆಯುತ್ತಿದೆ. ಯಾರಾದರೂ ವಾರ್ಡಿಗೆ ಬಂದಿದ್ದಾರಾ... ಇದು ಕೊನೆಯ ಸೂಚನೆ. ನಗರಸಭೆಯವರು ಎಷ್ಟು ಬೇಜವಬ್ಧಾರಿ ತೋರಿಸುತ್ತೀದ್ದಾರೆ ಎಂಬುದನು ತೋರಿಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚೆ ಮಾಡಲಾಗುವುದು. ಯಾರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದಂತಹ ಸಂದರ್ಭದಲ್ಲಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದರು.
ಜನರು ಕಂದಾಯ ಕಟ್ಟುತ್ತಾರೆ. ಜನರ ದುಡ್ಡನ್ನು ಅಭಿವೃದ್ಧಿಗೆ ಕೊಡಲಾಗುತ್ತಿದೆ. ಯಾರಿಗೆ ಅನ್ಯಾಯವಾಗುತ್ತಿದೆ ಫಲಾನುಭವಿಗಳಿಗೆ ಅಂತವರಿಗೆ ಸರಕಾರದ ಯೋಜನೆಗಳು ಲಭ್ಯವಾಗಬೇಕು ಎಂದರು.
ಕೂಡಲೇ ಇಂತಹ ಅಧಿಕಾರಿಗಳಿಗೆ ಕೂಡಲೇ ಜಿಲ್ಲಾಧಿಕಾರಿಗಳಿಂದ ನೋಟಿಸ್ ಜಾರಿ ಗೊಳಿಸಿ ಎಂದರಲ್ಲದೇ ಇಲ್ಲಿನ ನಿವಾಸಿಗಳೆಲ್ಲಾರನ್ನು ಸೇರಿಸಿ ಧರಣಿಗೆ ಕೂರಿಸಲಾಗುವುದು. ಇವರು ಏನೆನು ಅವ್ಯವಹಾರ ಮಾಡುತ್ತಿದ್ದಾರೆ ಎಲ್ಲಾ ತಿಳಿದಿದೆ ನನಗೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೈಟ್ : ಪ್ರಜ್ವಲ್ ರೇವಣ್ಣ, ಸಂಸದ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.





Body:0


Conclusion:0

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.